AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಹಿಳೆಯ ಕಿವಿಯೊಳಗೆ ಬೆಚ್ಚಗೆ ಕುಳಿತ ಏಡಿಮರಿ; ಅದನ್ನು ಹೊರತೆಗೆದಿದ್ದು ಹೇಗೆ ನೋಡಿ !

ಕಿವಿಯಲ್ಲಿ ಏಡಿ ಸೇರುತ್ತಿದ್ದಂತೆ ಮಹಿಳೆ ಪರದಾಡಿದ್ದಾರೆ. ಆ ಏಡಿ ಒಳಹೊಕ್ಕಿ ಕುಳಿತುಬಿಟ್ಟಿದೆ. ಮಹಿಳೆಯರ ಜತೆಗೆ ಇದ್ದ ಅವರ ಸ್ನೇಹಿತರೊಬ್ಬರು ಕಿವಿಯಿಂದ ಏಡಿ ತೆಗೆಯಲು ಪ್ರಯತ್ನಪಟ್ಟ ರೀತಿಯನ್ನು ವಿಡಿಯೋದಲ್ಲಿ ನೋಡಬಹುದು.

Video: ಮಹಿಳೆಯ ಕಿವಿಯೊಳಗೆ ಬೆಚ್ಚಗೆ ಕುಳಿತ ಏಡಿಮರಿ; ಅದನ್ನು ಹೊರತೆಗೆದಿದ್ದು ಹೇಗೆ ನೋಡಿ !
ಏಡಿಯನ್ನು ಹೊರತೆಗೆದ ದೃಶ್ಯ
TV9 Web
| Edited By: |

Updated on:Apr 02, 2022 | 11:15 AM

Share

ಕಿವಿಯಲ್ಲಿ ಒಂದು ಸಣ್ಣ ಹುಳ, ಇರುವೆ ಹೊಕ್ಕರೆ ಸಹಿಸಿಕೊಳ್ಳಲು ಕಷ್ಟ..ಅಂಥದ್ದರಲ್ಲಿ ಏಡಿ ಹೊಕ್ಕಿದರೆ !-ಇದು ತಮಾಷೆನೇ ಅಲ್ಲ, ಇಂಥದ್ದೊಂದು ಘಟನೆ ನಡೆದಿದೆ ಮತ್ತು ಅದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಂದಹಾಗೆ ವಿಡಿಯೋ ಮೊದಲು ಶೇರ್ ಆಗಿದ್ದು ಟಿಕ್​ಟಾಕ್​ನಲ್ಲಿ. @wesdaisy ಎಂಬ ಅಕೌಂಟ್​​ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಘಟನೆ ನಡೆದಿದ್ದು ಕೆರಿಬಿಯನ್ ದ್ವೀಪ ಪೋರ್ಟ್ ರಿಕೋದಲ್ಲಿ ಎಂದೂ ಹೇಳಲಾಗಿದೆ. ಸ್ಯಾನ್ ಜುವಾನ್ ಕರಾವಳಿ ತೀರದಲ್ಲಿ ಮಹಿಳೆ ಸ್ನಾರ್ಕ್ಲಿಂಗ್ ಮಾಡಿದ್ದರು. ಅದಾದ ಬಳಿಕ ಅವರ ಕಿವಿಯಲ್ಲಿ ಏಡಿ ಸಿಕ್ಕಿಕೊಂಡಿತ್ತು ಎಂದು ಹೇಳಲಾಗಿದೆ. (ಸ್ನಾರ್ಕಿಂಗ್​ ಎಂದರೆ ಸ್ನಾರ್ಕೆಲ್​ ಮಾಸ್ಕ್​ ಧರಿಸಿ ಸಮುದ್ರದ ನೀರಿನ ಒಳಗೆ ಈಜುವುದು).

ಕಿವಿಯಲ್ಲಿ ಏಡಿ ಸೇರುತ್ತಿದ್ದಂತೆ ಮಹಿಳೆ ಪರದಾಡಿದ್ದಾರೆ. ಆ ಏಡಿ ಒಳಹೊಕ್ಕಿ ಕುಳಿತುಬಿಟ್ಟಿದೆ. ಮಹಿಳೆಯರ ಜತೆಗೆ ಇದ್ದ ಅವರ ಸ್ನೇಹಿತರೊಬ್ಬರು ಕಿವಿಯಿಂದ ಏಡಿ ತೆಗೆಯಲು ಪ್ರಯತ್ನಪಟ್ಟ ರೀತಿಯನ್ನು ವಿಡಿಯೋದಲ್ಲಿ ನೋಡಬಹುದು. ಒಂದು ಚಿಮುಟಿಗೆಯಂಥ ಉಪಕರಣದಲ್ಲಿ ಏಡಿಯನ್ನು ಹಿಡಿದು ಎಳೆದಿದ್ದಾರೆ. ತುಂಬ ಹೊತ್ತು ಪ್ರಯತ್ನ ಪಟ್ಟಬಳಿಕವಷ್ಟೇ ಏಡಿಯನ್ನು ತೆಗೆಯಲು ಸಾಧ್ಯವಾಗಿದೆ. ಇನ್ನು ಏಡಿಯಿಂದಾಗಿ ತುಂಬ ಕಷ್ಟಪಟ್ಟ ಮಹಿಳೆ ಕೂಗುವುದನ್ನೂ ವಿಡಿಯೋದಲ್ಲಿ ಕೇಳಬಹುದು. ಇನ್ನೊಂದು ವಿಚಾರವೆಂದರೆ ಏಡಿ ಹೊರಬರುವವರೆಗೂ ಕಿವಿಯಲ್ಲಿ ಇದ್ದಿದ್ದು ಏಡಿ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಅದನ್ನು ಹೊರಗೆ ತೆಗೆದ ನಂತರ ಯುವತಿ, ಏನದು ಎಂದು ಕೇಳಿದ್ದೂ ವಿಡಿಯೋದಲ್ಲಿ ಗೊತ್ತಾಗುತ್ತದೆ. ನೆಟ್ಟಿಗರಂತೂ ಅದನ್ನು ನೋಡಿ ಶಾಕ್​ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಈಗಾಗಲೇ 1.3 ಮಿಲಿಯನ್​ಗೂ ಅಧಿಕ ವೀವ್ಸ್​ ಕಂಡಿದೆ. ಇದು ನಿಜಕ್ಕೂ ಭಯಾನಕ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅನುಭವ ಪಡೆದ ಮಹಿಳೆ ಡೈಸಿ, ನನಗಂತೂ ಸಾಕುಬೇಕಾಯ್ತು ಎಂದಿದ್ದಾರೆ. ನಾನು ನನ್ನ ಸ್ವಿಮ್ಮಿಂಗ್​ನ್ನು ಪೂರ್ತಿ ಮಾಡಲೂ ಆಗಲಿಲ್ಲ. ಮತ್ತೊಮ್ಮೆ ನೀರಿಗೆ ಇಳಿಯಲೂ ಭಯವಾಯಿತು ಎಂದು ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾಥೂರಾಂ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್​ಗೆ ಜಾಮೀನು; 3 ತಿಂಗಳ ನಂತರ ಬಿಡುಗಡೆ ಭಾಗ್ಯ

Published On - 9:58 am, Sat, 2 April 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ