AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ

ಜಂಗಾರೆಡ್ಡಿಗೂಡೆಂ​ನ ಮಡ್ಡಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಇವರಿಗೆ ಎರಡು ಶ್ವಾನದ ಭೇಟಿ ಆಗಿತ್ತು. ಅಚ್ಚರಿ ಎಂದರೆ, ಇವರ ಹಿಂದೆಯೇ ಅವು ಹೆಜ್ಜೆ ಹಾಕಲು ಆರಂಭಿಸಿದ್ದವು.

ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ
ವ್ಯಕ್ತಿ ಜತೆ ನಡೆದ ಶ್ವಾನ
ರಾಜೇಶ್ ದುಗ್ಗುಮನೆ
|

Updated on:Apr 12, 2021 | 6:48 PM

Share

ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಸಾಕು, ಅವು ನಮಗೆ ದುಪ್ಪಟ್ಟು ಪ್ರೀತಿ ನೀಡುತ್ತವೆ ಎನ್ನುವುದಕ್ಕೆ ತೆಲಂಗಾಣದಲ್ಲಿ ನಡೆದ ಘಟನೆ ಜೀವಂತ ಸಾಕ್ಷಿ. ಅವರ ಹೆಸರು ಪ್ರತಾಪ್​ ರೆಡ್ಡಿ. ವೃತ್ತಿಯಲ್ಲಿ ಕಾಂಟ್ರ್ಯಾಕ್ಟರ್​. ಪಶ್ಚಿಮ ಗೋದಾವರಿಯ ಜಂಗಾರೆಡ್ಡಿಗೂಡೆಂ​ನವರು. ಕಳೆದ ತಿಂಗಳು ಗೆಳೆಯ ರವಿ ಜತೆ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಜಂಗಾರೆಡ್ಡಿಗೂಡೆಂನಿಂದ ತಿರುಮಲಕ್ಕೆ ಸುಮಾರು 600 ಕಿ.ಮೀ. ಅಂತರ. ಇದನ್ನು ಕಾಲ್ನಡಿಗೆಯಲ್ಲಿ ಸಾಗುವಾಗ ಇವರಿಗೆ ಅಚ್ಚರಿಯ ಗೆಳೆಯನ ಭೇಟಿ ಆಗಿದೆ. ಅಷ್ಟೇ ಅಲ್ಲ, ಈಗ ಜೀವನದ ಒಂದು ಭಾಗವಾಗಿ ಬಿಟ್ಟಿದೆ.

ಪ್ರತಾಪ್​ ರೆಡ್ಡಿ ಅವರು ಮೊದಲ ಬಾರಿ ಒಂಟಿಯಾಗಿ ನಡೆದು ತಿರುಮಲಕ್ಕೆ ಹೋಗಿದ್ದರು. ಎರಡನೇ ಬಾರಿ ರವಿ ಅವರು ಇವರಿಗೆ ಜತೆಯಾಗಿದ್ದರು. ಮೂರನೇ ಬಾರಿ ಇಬ್ಬರೂ ಸೇರಿ ತಿರುಪತಿಗೆ ತೆರಳಲು ನಿರ್ಧರಿಸಿದ್ದರು.  ಜಂಗಾರೆಡ್ಡಿಗೂಡೆಂ​ನ ಮಡ್ಡಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಪ್ರತಾಪ್​ ರೆಡ್ಡಿ ಹಾಗೂ ರವಿಯನ್ನು ಎರಡು ಶ್ವಾನಗಳು ಹಿಂಬಾಲಿಸಿಕೊಂಡು ಬಂದಿದ್ದವು. ಒಂದು ನಾಯಿ ದಾರಿ ಮಧ್ಯೆ ಕಾಣೆಯಾದರೆ ಮತ್ತೊಂದು ಇವರ ಜತೆ ಬರಲು ಆರಂಭಿಸಿತ್ತು. ಇವರು ಊಟ ಮಾಡುವಾಗ, ಶ್ವಾನಕ್ಕೂ ಊಟ ನೀಡಿದ್ದರು.

ಒಂದೆರಡು ಕಿಲೋಮೀಟರ್​ ಬಂದು ಶ್ವಾನ ಹಿಂದಿರುಗಬಹುದು ಎಂಬುದು ಇವರ ಆಲೋಚನೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. 600 ಕಿ.ಮೀ ನಡೆದು ತಿರುಮಲ ತಲುಪುವವರೆಗೂ ಶ್ವಾನ ಇವರ ಜತೆಯೇ ಇತ್ತು.

15 ದಿನಗಳ ನಡಿಗೆಯಲ್ಲಿ ಪ್ರತಿ ರಾತ್ರಿ ಈ ಶ್ವಾನ ಇವರ ಕಾಲ ಕೆಳಗೆ ಮಲಗುತ್ತಿತ್ತು. ಇವರ ಜತೆಯೇ ಊಟ ಮಾಡುತ್ತಿತ್ತು. ಬಿಸಿಲಿನಿಂದ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಶ್ವಾನಕ್ಕೆ ಇವರು ತಂಪಾದ ಹಾಲು ಹಾಗೂ ಮೊಸರನ್ನು ನೀಡಿದ್ದರು.

ತಿರುಪತಿ ಬೆಟ್ಟದ ಕೆಳಭಾಗದಲ್ಲಿ ತಲುಪಿದಾಗ ಶ್ವಾನವನ್ನು ಮೇಲೆ ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿ ಬಿಟ್ಟಿಲ್ಲ. ಹೀಗಾಗಿ, ಸಂಬಂಧಿಗಳ ಮನೆಯಲ್ಲಿ ಶ್ವಾನವನ್ನು ಬಿಟ್ಟು ಇವರು ಬೆಟ್ಟ ಹತ್ತಿ ಬಂದಿದ್ದರು.

ಇಲ್ಲೊಂದು ಅಚ್ಚರಿಯ ವಿಚಾರ ಇದೆ. ಸಂಬಂಧಿಗಳ ಮನೆಯಲ್ಲಿ ನಾಯಿಯನ್ನು ಬಿಟ್ಟಾಗ ಅದು ಏನನ್ನೂ ತಿನ್ನುತ್ತಿರಲಿಲ್ಲವಂತೆ! ವಿಡಿಯೋ ಕಾಲ್​ ಮೂಲಕ ಪ್ರತಾಪ್​ ರೆಡ್ಡಿಯನ್ನು ನೋಡಿದ ಮೇಲೆಯೇ ಶ್ವಾನ ಊಟ ಮಾಡಿದೆ. ಕಾರಿನ ಮೂಲಕ ಇವರು ಜಂಗಾರೆಡ್ಡಿಗೂಡೆಂಗೆ ಹಿಂದಿರುಗಿದ್ದು, ನಾಯಿಯನ್ನೂ ಕರೆತರಲಾಗಿದೆ. ಇತ್ತೀಚೆಗೆ ಪ್ರತಾಪ್​ ರೆಡ್ಡಿ ಸಾಕಿದ್ದ ಶ್ವಾನ ಮೃತಪಟ್ಟಿತ್ತು. ಇದರಿಂದ ಅವರು ತುಂಬಾನೇ ಬೇಸರಗೊಂಡಿದ್ದರು. ಈಗ ಅವರು ಮತ್ತೊಂದು ಶ್ವಾನವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಶ್ವಾನ ಗರ್ಭಿಣಿ ಆಗಿತ್ತು ಎನ್ನುವ ವಿಚಾರ ಇವರಿಗೆ ಮನೆಗೆ ಬಂದ ನಂತರ ತಿಳಿದಿದೆ.

ಇದನ್ನೂ ಓದಿ: ಬೇಸಿಗೆಯಿಂದ ಪೊಲೀಸ್ ಶ್ವಾನಗಳಿಗೆ ಕೂಲರ್.!

Published On - 6:34 pm, Mon, 12 April 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!