AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi- ಪರಿಸರ ಸಂರಕ್ಷಣೆಯ ಸರಳ ಉಪಾಯ ಹಂಚಿಕೊಂಡ ತಂದೆ; ಪ್ರಧಾನಿ ಮೋದಿಯಿಂದ ಪ್ರಶಂಸೆ

"ನನ್ನ ಮಗ ಪ್ರತಿ ವರ್ಷ ಶಾಲೆ ಮುಗಿದ ಬಳಿಕ ತನ್ನ ನೋಟ್ ಬುಕ್ಸ್ ಅಲ್ಲಿ ಬಳಸದೆ ಇರುವ ಹಾಳೆಗಳನ್ನು ಬೇರ್ಪಡಿಸಿ ಇಡುತ್ತಾನೆ. ನಾನು ಅದನ್ನು ಜೋಡಿಸಿ ರಫ್ ವರ್ಕ್ ಮಾಡಲು ಉಪಯೋಗಿಸುತ್ತೇನೆ. ಈ ರೀತಿ ನಾವು ಪರಿಸರ ಉಳಿಸಲು ಪುಟ್ಟ ಹೆಜ್ಜೆಯನ್ನು ಇಟ್ಟಿದ್ದೀವಿ"- ಡಾ. ದೀಪಕ್ ಕೃಷ್ಣಮೂರ್ತಿ

Narendra Modi- ಪರಿಸರ ಸಂರಕ್ಷಣೆಯ ಸರಳ ಉಪಾಯ ಹಂಚಿಕೊಂಡ ತಂದೆ; ಪ್ರಧಾನಿ ಮೋದಿಯಿಂದ ಪ್ರಶಂಸೆ
PM Narendra Modi TweetImage Credit source: Twitter
Follow us
ನಯನಾ ಎಸ್​ಪಿ
|

Updated on:Mar 07, 2023 | 4:50 PM

ಜಾಗತಿಕ ತಾಪಮಾನ (Global Warming) ಹೆಚ್ಚಳವನ್ನು ಹವಾಮಾನ ಬದಲಾವಣೆಯ ಪರಿಣಾಮ ಎಂದು ಸರಳವಾಗಿ ವಿವರಿಸಬಹುದು. ಜಾಗತಿಕ ತಾಪಮಾನ ಹೆಚ್ಚಳ ಅಥವಾ ಗ್ಲೋಬಲ್ ವಾರ್ಮಿಂಗ್​ನ ಮುಖ್ಯ ಕಾರಣ ಮರಗಳನ್ನು ಕಡಿಯುವುದು (Tree Cutting). ನೀವು ಪ್ರತಿನಿತ್ಯ ಬಳಸುವ ಪುಸ್ತಕ, ಪೇಪರ್, ಟೀ ಕಪ್ಸ್ ಇವೆಲ್ಲದಕ್ಕೂ ಮರಗಳನ್ನು ಕಡಿಯುತ್ತಾರೆ. ಇನ್ನು ಇಂತಹ ಸಮಸ್ಯೆಯನ್ನು ನಿವಾರಿಸಲು ತಜ್ಞರು, ಪರಿಸರವಾದಿಗಳ ಹಲವಾರು ಮಾರ್ಗವನ್ನು ಸೂಚಿಸುತ್ತಾರೆ. ಆದರೆ ಇಲ್ಲೊಬ್ಬ ತಂದೆ-ಮಗ ಸರಳ ಪರಿಹಾರವನ್ನು ಕಂಡುಕೊಂಡು ಪ್ರಧಾನಿ ಮೋದಿ (PM Narendra Modi) ಯವರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಡಾ. ದೀಪಕ್ ಕೃಷ್ಣಮೂರ್ತಿ ತಮ್ಮ ಟ್ವಿಟ್ಟರ್​ನಲ್ಲಿ ಪೇಪರ್ ಅಟ್ಟಿಯ ಫೋಟೋ ಒಂದನ್ನು ಹಂಚಿಕೊಂಡು, “ನನ್ನ ಮಗ ಪ್ರತಿ ವರ್ಷ ಶಾಲೆ ಮುಗಿದ ಬಳಿಕ ತನ್ನ ನೋಟ್ ಬುಕ್ಸ್ ಅಲ್ಲಿ ಬಳಸದೆ ಇರುವ ಹಾಳೆಗಳನ್ನು ಬೇರ್ಪಡಿಸಿ ಇಡುತ್ತಾನೆ. ನಾನು ಅದನ್ನು ಜೋಡಿಸಿ ರಫ್ ವರ್ಕ್ ಮಾಡಲು ಉಪಯೋಗಿಸುತ್ತೇನೆ. ಈ ರೀತಿ ನಾವು ಪರಿಸರ ಉಳಿಸಲು ಪುಟ್ಟ ಹೆಜ್ಜೆಯನ್ನು ಇಟ್ಟಿದ್ದೀವಿ” ಎಂದು ಬರೆದುಕೊಂಡಿದ್ದಾರೆ.

ಇದೀಗ ಈ ಟ್ವೀಟ್​ಗೆ ಸ್ವತಃ ಪ್ರಧಾನಿ ಮೋದಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ನೀವಿಬ್ಬರು ಸುಸ್ಥಿರ ಪರಿಸರ ಅಭಿವೃದ್ಧಿಯ (Sustainable Development) ಸಂದೇಶವನ್ನು ಬಹಳ ಸರಳವಾಗಿ ನೀಡಿದ್ದೀರಿ. ನಿಮ್ಮ ಹಾಗು ನಿಮ್ಮ ಮಗನ ಈ ಪ್ರಯತ್ನಕ್ಕೆ ಅಭಿನಂದನೆಗಳು. ಇದೇ ರೀತಿಯ ಪ್ರಯತ್ನಗಳನ್ನು ಇತರರನ್ನು ಪ್ರೇರೇಪಿಸುತ್ತದೆ, ಇದು ಮರುಬಳಕೆ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಎಂಬ ತತ್ವವನ್ನು ಸಾರಿ ಜನರಲ್ಲಿ ಅರಿವು ಮೂಡಿಸುತ್ತದೆ. ಎಲ್ಲರು ಇಂತಹ ಅಭ್ಯಾಸಗಳನ್ನು ಅನುಸರಿಸಿ ಎಂದು ನಾನು ಪ್ರೇರೇಪಿಸುತ್ತೇನೆ” ಎಂದು ಮೋದಿ ಡಾ. ದೀಪಕ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಭತ್ಯೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಏರಿಕೆ; ಈ ರಾಜ್ಯದವರಿಗೆ ಹೋಳಿ ಗಿಫ್ಟ್

“ಧನ್ಯವಾದಗಳು ಸರ್, ದೇಶಕ್ಕಾಗಿ ದುಡಿಯುತ್ತಿರುವ ನಿಮಗೆ ನನ್ನ ಪ್ರಣಾಮಗಳು” ಎಂದು ಡಾ. ದೀಪಕ್ ಉತ್ತರಿಸಿದ್ದಾರೆ. ಈ ಟ್ವೀಟ್ ಅನ್ನು ನೋಡಿದ ನೆಟ್ಟಿಗರೊಬ್ಬರು, ವಾವ್! ಬಾಸ್ ಅವರೇ ಪ್ರಶಂಸೆ ನೀಡಿದ್ದಾರೆ ಎಂದರೆ ಇನ್ನೊಬ್ಬರು ಪೇಪರ್ ಉಳಿಸಿದರೆ ಮರಗಳನ್ನು ಉಳಿಸಿದಂತೆ, ಇದರಿಂದ ಪರಿಸರವನ್ನು ಉಳಿಸಬಹುದು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Tue, 7 March 23

ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!