Sign In

By signing in or creating an account, you agree with Associated Broadcasting Company's Terms & Conditions and Privacy Policy.

G20 Meeting Calender: ಭಾರತದಲ್ಲಿ ಜಿ20 ಸಭೆಗಳು; ಇಲ್ಲಿದೆ ಪೂರ್ತಿ ಕ್ಯಾಲೆಂಡರ್

2022ರ ಡಿಸೆಂಬರ್​​​ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್​ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ.

G20 Meeting Calender: ಭಾರತದಲ್ಲಿ ಜಿ20 ಸಭೆಗಳು; ಇಲ್ಲಿದೆ ಪೂರ್ತಿ ಕ್ಯಾಲೆಂಡರ್
ಜಿ20 ಶೃಂಗಸಭೆ
Follow us
Ganapathi Sharma
|

Updated on:Mar 07, 2023 | 3:09 PM

ನವದೆಹಲಿ: ಜಿ20 ಸದಸ್ಯ ರಾಷ್ಟ್ರಗಳ (G20 Nations) ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡ ಬಳಿಕ ದೇಶದಲ್ಲಿ ಈಗಾಗಲೇ ಅನೇಕ ಸಭೆಗಳು ನಡೆದಿವೆ. ಕೆಲವು ದಿನಗಳ ಹಿಂದಷ್ಟೇ ಜಿ20 ದೇಶಗಳ ವಿದೇಶಾಂಗ ಸಚಿವರ ಶೃಂಗಸಭೆ ದೆಹಲಿಯಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿಯೂ ಅನೇಕ ಸಭೆಗಳು ನಡೆಯಲಿವೆ. ಈ ವಿಚಾರವಾಗಿ ಪರಿಷ್ಕೃತ ಹಾಗೂ ವಿಸ್ತೃತ ವೇಳಾಪಟ್ಟಿಯನ್ನು ಜಿ20 ಆಡಳಿತ ಬಿಡುಗಡೆ ಮಾಡಿದೆ. 2022ರ ಡಿಸೆಂಬರ್​​​ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್​ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ ಎಂದು ಪ್ರಕಟಣೆ ತಿಳಿಸಿದೆ.

ಈ ಪೈಕಿ 2 ಸಭೆಗಳು ಬೆಂಗಳೂರಿನಲ್ಲಿ ಫೆಬ್ರುವರಿ 24 ಹಾಗೂ 25ರಂದು, ನವದೆಹಲಿಯಲ್ಲಿ ಮಾರ್ಚ್ 1 ಹಾಗೂ 2ರಂದು ವಿದೇಶಾಂಗ ಸಚಿವರ ಸಭೆ ನಡೆದಿದೆ. 1 ಶೆರ್ಪಾ ಮೀಟಿಂಗ್, 19 ಕಾರ್ಯಕಾರಿ ಸಭೆಗಳು, ಯುರೋಪಿಯನ್ ಯೂನಿಯನ್​ಗೆ ಸಂಬಂಧಿಸಿದ 12 ಸಭೆಗಳು 1 ಕರ್ಟನ್​ ರೈಸರ್ ಸಭೆ ನಡೆದಿದೆ. ಮಾರ್ಚ್​ 6ರ ನಂತರ 19 ಸಭೆಗಳು ನಡೆಯಲಿದೆ. ಏಪ್ರಿಲ್​​ನಲ್ಲಿ 16 ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  1. ಹಣಕಾಸು ವಿಚಾರದಲ್ಲಿ ಜಾಗತಿಕ ಸಹಭಾಗಿತ್ವಕ್ಕೆ ಸಂಬಂಧಿಸಿದ ಸಭೆ ಮಾರ್ಚ್​ 6-7ರಂದು ಹೈದರಾಬಾದ್​ನಲ್ಲಿ ನಡೆಯುತ್ತಿದೆ.
  2. ಎಸ್​​​ಎಐ 20 ಇನ್​​ಸೆಪ್ಷನ್ ಮೀಟಿಂಗ್ ಮಾರ್ಚ್​ 13ರಿಂದ 15ರ ವರೆಗೆ ಗುವಾಹಟಿಯಲ್ಲಿ ನಡೆಯಲಿದೆ.
  3. 2ನೇ ಶೈಕ್ಷಣಿಕ ಕಾರ್ಯಕಾರಿ ಸಮಿತಿ ಸಭೆಯು ಮಾರ್ಚ್​ 15ರಿಂದ 17ರ ವರೆಗೆ ಅಮೃತಸರದಲ್ಲಿ ನಡೆಯಲಿದೆ.
  4. ಬಿ20 ಸಭೆ ಮಾರ್ಚ್​ 16ರಂದು ಗ್ಯಾಂಗ್ಟಕ್​ನಲ್ಲಿ ನಡೆಯಲಿದೆ.
  5. ಬಿ20 ಸಭೆ ಮಾರ್ಚ್​ 17ರಂದು ಸೂರತ್​​ನಲ್ಲಿ ನಡೆಯಲಿದೆ.
  6. ಸ್ಟಾರ್ಟಪ್​ 20 ಸೈಡ್ ಮೀಟಿಂಗ್ ಮಾರ್ಚ್​ 18-19ರಂದು ಗ್ಯಾಂಗ್ಟಕ್​ನಲ್ಲಿ ನಡೆಯಲಿದೆ.
  7. ಲೇಬರ್ 20 ಇನ್​ಸೆಪ್ಷನ್ ಮೀಟಿಂಗ್ ಮಾರ್ಚ್ 19-20ರಂದು ಅಮೃತಸರದಲ್ಲಿ ನಡೆಯಲಿದೆ.
  8. 2ನೇ ಜಂಟಿ ಹಣಕಾಸು ಮತ್ತು ಆರೋಗ್ಯ ಕಾರ್ಯಪಡೆ ಸಭೆ ಮಾರ್ಚ್ 20ರಂದು ನಡೆಯಲಿದ್ದು, ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.
  9. ಸಿವಿಲ್ 20 ಇನ್​ಸೆಪ್ಷನ್ ಮೀಟಿಂಗ್ ಮಾರ್ಚ್​ 21-22ರಂದು ನಾಗ್ಪುರದಲ್ಲಿ ನಡೆಯಲಿದೆ.
  10. ಸುಸ್ಥಿರ ಹಣಕಾಸು ಕಾರ್ಯಪಡೆಯ 2ನೇ ಸಭೆ ಮಾರ್ಚ್ 21-23ರಂದು ಉದಯಪುರದಲ್ಲಿ ನಡೆಯಲಿದೆ.
  11. ಮಾರ್ಗಸೂಚಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 24-25ರಂದು ಚೆನ್ನೈಯಲ್ಲಿ ನಡೆಯಲಿದೆ.
  12. ಆರ್​ಐಐಜಿ ಕಾರ್ಯಕ್ರಮ (ಡಿಬಿಟಿ) ಮಾರ್ಚ್​ 24-25ರಂದು ದಿಬ್ರೂಗಢ/ಇಟಾನಗರದಲ್ಲಿ ನಡೆಯಲಿದೆ.
  13. ಪರಿಸರ ಮತ್ತು ಹವಾಮಾನ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 27-29ರಂದು ಗಾಂಧಿನಗರದಲ್ಲಿ ನಡೆಯಲಿದೆ.
  14. ವ್ಯಾಪಾರ, ಹೂಡಿಕೆ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಾರ್ಚ್ 28ರಿಂದ 30ರ ವರೆಗೆ ಮುಂಬೈಯಲ್ಲಿ ನಡೆಯಲಿದೆ.
  15. ಮೂಲಸೌಕರ್ಯ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 28 ಹಾಗೂ 29ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
  16. ಕೃಷಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್​ 29ರಿಂದ 31ರ ವರೆಗೆ ಚಂಡೀಗಢದಲ್ಲಿ ನಡೆಯಲಿದೆ.
  17. 2ನೇ ಶೆರ್ಪಾ ಮೀಟಿಂಗ್ ಮಾರ್ಚ್ 30ರಿಂದ ಏಪ್ರಿಲ್ 2ರ ವರೆಗೆ ಕುಮಾರಕಂ​​ನಲ್ಲಿ ನಡೆಯಲಿದೆ.
  18. ವಿಪತ್ತು ನಿರ್ವಹಣಾ ಗ್ರೂಪ್​ನ ಮೊದಲ ಸಭೆ ಮಾರ್ಚ್​ 30ರಿಂದ ಏಪ್ರಿಲ್ 1ರ ವರೆಗೆ ಗಾಂಧಿನಗರದಲ್ಲಿ ನಡೆಯಲಿದೆ.
  19. ಫೈನಾನ್ಶಿಯಲ್ ಆರ್ಕಿಟೆಕ್ಚರ್ ವರ್ಕಿಂಗ್ ಗ್ರೂಪ್​ನ 2ನೇ ಸಭೆ ಮಾರ್ಚ್ 30 ಹಾಗೂ 31ರಂದು ಪ್ಯಾರಿಸ್​​ನಲ್ಲಿ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Tue, 7 March 23

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ