AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Season 2021: ಆನಿಮೇಟೆಡ್ ಡೂಡಲ್​ ಮೂಲಕ ಚಳಿಗಾಲವನ್ನು ವಿಶೇಷವಾಗಿ ಸ್ವಾಗತಿಸಿದ ಗೂಗಲ್​

Google Doodles: ಈ ಬಾರಿಯ ಚಳಿಗಾಲವನ್ನು ಗೂಗಲ್ ಹಿಮದಲ್ಲಿ ಮುಳ್ಳು ಹಂದಿಯನ್ನು ಒಳಗೊಂಡಿರುವ ಆನಿಮೇಟೆಡ್​ ಡೂಡಲ್​ ಅನ್ನು​ ನಿರ್ಮಿಸಿ ವಿಶೇಷವಾಗಿ ಸ್ವಾಗತಿಸಿದೆ.

Winter Season 2021: ಆನಿಮೇಟೆಡ್ ಡೂಡಲ್​ ಮೂಲಕ ಚಳಿಗಾಲವನ್ನು ವಿಶೇಷವಾಗಿ ಸ್ವಾಗತಿಸಿದ ಗೂಗಲ್​
ಗೂಗಲ್ ಡೂಡಲ್​
TV9 Web
| Edited By: |

Updated on: Dec 21, 2021 | 11:08 AM

Share

ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಚಳಿಗಾಲ ಆರಂಭವಾಗಿದೆ. ಮೈಕೊರೆಯುವ ಚಳಿಗೆ ಜನ ನಡುಗುತ್ತಿದ್ದಾರೆ. ಭಾರತದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಇಳಿದಿದ್ದು, ಶೀತ ಗಾಳಿ ಬೀಸುತ್ತಿದೆ. ಈ ನಡುವೆ ಗೂಗಲ್​ ಚಳಿಗಾಲವನ್ನು ಡೂಡಲ್​ ಮೂಲಕ ವಿಶೇಷವಾಗಿ ಸ್ವಾಗತಿಸಿದೆ. ಡಿಸೆಂಬರ್​ 21ರಂದು ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಆರಂಭಗೊಂಡು 2022ರ ಮಾರ್ಚ್ 20ರಂದು ಅಂತ್ಯಗೊಳುತ್ತದೆ.ಈ ಸಮಯದಲ್ಲಿ ಹಗಲಿನ ಅವಧಿ ಕಡಿಮೆ ಹಾಗೂ ದೀರ್ಘ ರಾತ್ರಿಯನ್ನು ಹೊಂದಿರುತ್ತದೆ. ಈ ಬಾರಿಯ ಚಳಿಗಾಲವನ್ನು ಗೂಗಲ್ ಹಿಮದಲ್ಲಿ ಮುಳ್ಳು ಹಂದಿಯನ್ನು ಒಳಗೊಂಡಿರುವ ಆನಿಮೇಟೆಡ್​ ಡೂಡಲ್​ ಅನ್ನು​ ನಿರ್ಮಿಸಿ ವಿಶೇಷವಾಗಿ ಸ್ವಾಗತಿಸಿದೆ.

ಬ್ರಿಟಾನಿಕ ವರದಿಯ ಪ್ರಕಾರ ಚಳಿಗಾಲ ಎನ್ನುವುದು ಜರ್ಮನಿ ಭಾಷೆಯಿಂದ ಬಂದ ಪದವಾಗಿದೆ. ಚಳಿಗಾಲವೆಂದರೆ ನೀರಿನ ಸಮಯ ಎಂದರ್ಥ. ಅಂದರೆ ಹಿಮದಿಂದ ಕೂಡಿದ ನೀರಿನ ಮಳೆಯ ದಿನಗಳು. ಚಳಿಗಾಲದ ಆರಂಭದಲ್ಲಿ ಅಂದರೆ ಡಿಸೆಂಬರ್​ 21ರಂದು ಸೂರ್ಯನು ತನ್ನ ಪಥದಲ್ಲಿ ಉತ್ತರ ಗೋಳಾರ್ಧದಿಂದ ದಕ್ಷಿಣಕ್ಕೆ ಸಂಚರಿಸುತ್ತಾನೆ. ಹಾಗೂ ಸಾಮಾನ್ಯವಾಗಿ ಜೂನ್​ 21 ಅಥವಾ 22ರಂದು ದೂರದ ಉತ್ತರ ಗೋಳಾರ್ಧಕ್ಕೆ ಸಂಚರಿಸುತ್ತಾನೆ. ಆ ದಿನ ಕಡಿಮೆ ಹಗಲು ಹಾಗೂ ದೀರ್ಘ ರಾತ್ರಿಯನ್ನು ನೋಡಬಹುದು.

ಈಗಾಗಲೇ ದೆಹಲಿಯಲ್ಲಿ ಕನಿಷ್ಠ ಮಟ್ಟಕ್ಕೆ ತಾಪಮಾನ ಕುಸಿದಿದ್ದು, 3.2ರಷ್ಟು ತಾಪಮಾನ ದಾಖಲಾಗಿದೆ. ಇನ್ನು ಎರಡು ದಿನ ವಾಯುವ್ಯ ಭಾರತದ ಭಾಗಗಳಲ್ಲಿ ಶೀತ ಗಾಳಿ ಹಾಗೂ ಮೈಕೊರೆಯುವ ಚಳಿಯ ವಾತಾವರಣ ಮುಂದುವರೆಯಲಿದೆ. ಬುಧವಾರದ ನಂತರ ಹವಾಮಾನ ಬದಲಾವಣೆಯಾಗಲಿದೆ. ಹಿಮಾಲಯದ ಪಶ್ಚಿಮ ಬಾಗಗಳಲ್ಲಿ ಚದುರಿದ ಮಳೆ ಬೀಳುವ ಸಾಧ್ಯತೆ ಇದ್ದು, ಇದರಿಂದ ಶೀತ ಗಾಳಿ ಮತ್ತು ಚಳಿಯ ಪ್ರಮಾಣ ಏರಿಕೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜಮ್ಮು ಕಾಶ್ಮೀರದ ಚಿಲ್ಲೈನ್​ ಕಲನ್​ ಪ್ರದೇಶದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಮಂಗಳವಾರ ಜಮ್ಮು ಜನತೆ ಹಿಮ ತುಂಬಿದ ಮುಂಜಾವನ್ನು ಅನುಭವಿಸಿದ್ದಾರೆ. ಜನವರಿ 31ರ ವರೆಗೂ ಇದು ಮುಂದುವರೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ:

Video: ಮಗುಚಿ ಬಿದ್ದ ಆಮೆಯನ್ನು ರಕ್ಷಿಸಿದ ಎಮ್ಮೆಗೆ ನೆಟ್ಟಿಗರಿಂದ ಪ್ರಶಂಸೆ; ಎಮ್ಮೆ ಕೋಡು ಹೀಗೂ ಬಳಕೆಯಾಗುತ್ತಾ? ಎಂದ ಜನರು

video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್​ ಎಂದ ನೆಟ್ಟಿಗರು

Follow Us
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ