AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್​ ಎಂದ ನೆಟ್ಟಿಗರು

ದೆಹಲಿಯ ಫುಡ್​ ಬ್ಲಾಗರ್ ಒಬ್ಬರು ಪಾರ್ಲೆ ಜಿ ಬಿಸ್ಕತ್ತಿನ ಬರ್ಫಿ ತಯಾರಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ ಎಲ್ಲೆಡೆ ವೈರಲ್​ ಆಗಿದೆ.

video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್​ ಎಂದ ನೆಟ್ಟಿಗರು
ಪಾರ್ಲೆ ಜಿ ಬರ್ಫಿ
TV9 Web
| Edited By: |

Updated on:Dec 21, 2021 | 9:37 AM

Share

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ನೆಟ್ಟಿಗರನ್ನು ಸೆಳೆಯುವ ವೀಡಿಯೋಗಳು ಆಗಾಗ ಹರಿದಾಡುತ್ತಿರುತ್ತದೆ. ಈ ವರ್ಷ ಮುಗಿಯುತ್ತಿದೆ. ಈಗಾಗಲೇ ಹಲವು ವಿಭಿನ್ನ, ವಿಚಿತ್ರ ಖಾದ್ಯಗಳು ಇಂಟೆರ್​ನೆಟ್​ನಲ್ಲಿ ವೈರಲ್​ ಆಗಿ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದೆ. ಉದಾಹರಣೆಗೆ ಮಿರಿಂಡಾ ಮಿಶ್ರಿತ ಗೋಲಗಪ್ಪಾ, ಓರಿಯೋ ಬಿಸ್ಕತ್ತಿನ ಪಕೋಡ ಹೀಗೆ ಹತ್ತಾರು ಬಗೆಯ ಖಾದ್ಯಗಳ ನಡುವೆ ಇದೀಗ ದೆಹಲಿಯ ಫುಡ್​ ಬ್ಲಾಗರ್ ಒಬ್ಬರು ಪಾರ್ಲೆ ಜಿ ಬಿಸ್ಕತ್ತಿನ ಬರ್ಫಿ ತಯಾರಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ ಎಲ್ಲೆಡೆ ವೈರಲ್​ ಆಗಿದೆ.

ದೆಹಲಿ ಮೂಲದ ಫುಡ್​ ಬ್ಲಾಗರ್​ ಕರಣ್​ ಸಿಂಘಾಲ್​ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ದೇಸಿ ತುಪ್ಪ ಬಳಸಿ ಪಾರ್ಲೆ ಜಿ ಬಿಸ್ಕತ್​ ಬರ್ಫಿ ತಯಾರಿಸಿದ ವೀಡಿಯೋ ಹಂಚಿಕೊಂಡಿದ್ದಾರೆ. ಐದಾರು ಪಾರ್ಲೆ ಜಿ ಬಿಸ್ಕತ್ತುಗಳು. ದೇಸಿ ಹಸುವಿನ ತುಪ್ಪ ಸಕ್ಕರೆ, ಹಾಲು, ಮತ್ತು ಡ್ರೈ ಫ್ರೂಟ್ಸ್ ಗಳನ್ನು ಹಾಕಿ ರುಚಿಯಾದ ಪಾರ್ಲೆ ಜಿ ಬರ್ಫಿ ತಯಾರಿಸಿದ್ದಾರೆ.  ವೀಡಿಯೋದಲ್ಲಿ ಕರಣ್​ ಅವರು ಮೊದಲು ದೇಸಿ ತುಪ್ಪದಲ್ಲಿ ಬಿಸ್ಕತ್ತುಗಳನ್ನು ಚೆನ್ನಾಗಿ ಹುರಿಯುತ್ತಾರೆ. ಬಳಿಕ ಅದನ್ನು ರುಬ್ಬಿಕೊಂಡು ಅದಕ್ಕೆ ಸಕ್ಕರೆ, ಹಾಲನ್ನು ಹಾಕಿ ಬರ್ಫಿ ಹದ ಬರುವವರೆಗೆ ಪಾತ್ರೆಯನ್ನು ಒಲೆಯ ಮೇಲಿರಿಸಿ  ತಿರುವುತ್ತಾರೆ. ನಂತರ ಹಲ್ವಾ ರೀತಿಯಲ್ಲಿ ಬಟ್ಟಲಿಗೆ ಹಾಕಿ ಮೆಲಿನಿಂದ ಡ್ರೈ ಫ್ರುಟ್ಸ್​ ಮೂಲಕ ಅಲಂಕರಿಸುತ್ತಾರೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಮನಗೆದ್ದಿದೆ. 71 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿರುವ ವೀಡಿಯೋ ಸದ್ಯ ಟ್ರೆಂಡ್ ಆಗಿದೆ. ಹಲವರು ಪಾರ್ಲೆ ಜಿ ಬಗ್ಗೆ ಬರ್ಫಿ ಬಗ್ಗೆ ನೆಗೆಟಿವ್​ ಆಗಿ ಮಾತನಾಡಿದರೆ ಇನ್ನೂ ಕೆಲವರು ಪಾರ್ಲೆ ಜಿ ಬರ್ಫಿ ತಯಾರಿಸಲು ಉತ್ಸುಕರಾಗಿದ್ದಾರೆ.

Published On - 9:27 am, Tue, 21 December 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ