AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ನಲ್ಲಿ ಆ ಕಳ್ಳ ಕಾನ್ಸ್​ಟೇಬಲ್ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆತ ಸಿಕ್ಕಿಬಿದ್ದಿದ್ದು ಹೇಗೆ?

ತಮ್ಮ ಕಾನ್ಸ್​ಟೇಬಲ್ ಮೊಟ್ಟೆ ಕದಿಯುವ ಚಾಳಿ ನೋಡಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಅದಕ್ಕೂ ಮೊದಲು ನೀನು ಮನೆಗೆ ಹೋಗು ಎಂದು ಸಸ್ಪೆಂಡ್​ ಮಾಡಿದ್ದಾರೆ. ಜೊತೆಗೆ ಆ ವಿಡಿಯೋ ಸಮೇತ ಟ್ವೀಟ್​ ಮಾಡಿ.. ಹೀಗೀಗೆ ನಮ್ಮ ಕಾನ್ಸ್​ಟೇಬಲ್ ಕಳ್ಳತನಕ್ಕೆ ಇಳಿದಿದ್ದಾನೆ. ನೀವೂ ನೋಡಿ ಎಂದು ವಿಡಿಯೋ ಟ್ವೀಟ್​ ಪೋಸ್ಟ್ ಮಾಡಿದ್ದಾರೆ. ಅದೀಗ Social Mediaದಲ್ಲಿ Video Viral ಆಗಿದೆ. ನೀವೂ ನೋಡಿ..

ಪಂಜಾಬ್​ನಲ್ಲಿ ಆ ಕಳ್ಳ ಕಾನ್ಸ್​ಟೇಬಲ್ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆತ ಸಿಕ್ಕಿಬಿದ್ದಿದ್ದು ಹೇಗೆ?
ಪಂಜಾಬ್​ನಲ್ಲಿ ಆ ಕಳ್ಳ ಪೇದೆ ಬೀದಿಬದಿ ಕದ್ದ ಕೋಳಿ ಮೊಟ್ಟೆಗಳೆಷ್ಟು? ಕೊನೆಗೂ ಆ ಪ್ಯಾದೆ ಸಿಕ್ಕಿಬಿದ್ದಿದ್ದು ಹೇಗೆ?
ಸಾಧು ಶ್ರೀನಾಥ್​
| Edited By: |

Updated on:May 17, 2021 | 11:36 AM

Share

ಚಂಡೀಗಢ: ಆತ ತನ್ನ ಮೂರು ಚಕ್ರದ ಸೈಕಲ್​ನಲ್ಲಿ ಮೊಟ್ಟೆ ಟ್ರೇಗಳನ್ನು ತುಂಬಿಕೊಂಡು ಅಂಗಡಿ ಅಂಗಡಿಗೂ ಸರಬರಾಜು ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ. ಅಂಗಡಿಯೊಂದರ ಮುಂದೆ ತನ್ನ ಸೈಕಲ್ ನಿಲ್ಲಿಸಿ, ಮೊಟ್ಟೆ ಕೊಟ್ಟು ಬರಲು ರಸ್ತೆಯ ಆ ಕಡೆಗೆ ಸಾಗಿದ್ದಾನೆ. ಅದಕ್ಕೇ ಹೊಂಚುಹಾಕುತ್ತಿದ್ದವನಂತೆ ನರಪೇತಲ ಕಾನ್ಸ್​ಟೇಬಲ್​ ಒಬ್ಬ ತನ್ನ ಶಿಸ್ತು-ಪ್ರಾಮಾಣಿಕತೆಯ ಇಲಾಖೆಗೆ ಕಳಂಕ ತರುವ ರೀತಿಯಲ್ಲಿ ಆ ಸೈಕಲ್​ಗೆ ಆನಿಕೊಂಡು ಅತ್ತಿತ್ತ ಕಳ್ಳನೋಟ ಬೀರುತ್ತಾ, ಸರಾಗವಾಗಿ, ಎಡರು ಬಾರಿಗೆ ಒಟ್ಟು 6 ಮೊಟ್ಟೆಗಳನ್ನು ತನ್ನ ಪ್ಯಾಂಟ್​ ಜೋಬಿಗೆ ತುಂಬಿಕೊಂಡಿದ್ದಾನೆ. ಪವಿತ್ರ ಸಮವಸ್ತ್ರಕ್ಕೂ ಕಳಂಕ ಮೆತ್ತಿದ್ದಾನೆ ಆ ಕಾನ್ಸ್​ಟೇಬಲ್.

ಆತ ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಮುಖ್ಯ ಕಾನ್ಸ್​ಟೇಬಲ್ ಆಗಿರುವ ಪ್ರತಿಪಾಲ್​ ಸಿಂಗ್​. ಫತೇಗಢ ಸಾಹಿಬ್​ ಪೊಲೀಸ್​ ಠಾಣೆಯಲ್ಲಿ ಸೇವೆಯಲ್ಲಿದ್ದಾನೆ; ಅಲ್ಲಲ್ಲ ಇದ್ದ. ಏಕೆಂದ್ರೆ ಪ್ರೀತಿಪಾಲ್ ಸಿಂಗ್​ನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯು ಪೊಲೀಸರ ಮಾನ ತೆಗೆದ ಕಾನ್ಸ್​ಟೇಬಲ್​ನನ್ನು ಸಸ್ಪೆಂಡ್​ ಮಾಡಿ, ಮನೆಗಟ್ಟಿದೆ.

ಮುಖ್ಯ ಕಾನ್ಸ್​ಟೇಬಲ್ ಪ್ರೀತಿಪಾಲ್​ ಸಿಂಗ್ ಅತ್ತಿತ್ತ ಕಳ್ಳನೋಟ ಬೀರುತ್ತಾ, ಸಲೀಸಾಗಿ ಒಟ್ಟು 6 ಮೊಟ್ಟೆ ಎಗರಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಮೊದಲ ಬಾರಿಗೆ ಸೈಕಲ್​ಗೆ ಆನಿಕೊಂಡು ಎರಡೇ ಎರಡು ಮೊಟ್ಟೆಗಳನ್ನು ತನ್ನ ಪ್ಯಾಂಟ್​ ಜೇಬಿಗೆ ಹಾಕಿಕೊಳ್ಳುತ್ತಾನೆ. ಆ ಮೇಲೆ ಯಾರೂ ನೋಡುತ್ತಿಲ್ಲ ಅಂತಾ ದುರಾಸೆಗೆ ಬಿದ್ದು, ಮಾನಗೆಟ್ಟು ಎರಡನೆಯತ ಬಾರಿಗೆ ಇನ್ನೂ ನಾಲ್ಕು ಮೊಟ್ಟೆಗಳನ್ನು ಅದೇ ಜೇಬಿಗೆ ತುರುಕಿಕೊಳ್ಳುತ್ತಾನೆ. ದಾಹ ಸಾಲದೆ ಇನ್ನೂ ನಾಲ್ಕಾರು ಎತ್ತಿಹಾಕಿಕೊಳ್ಳುತ್ತಿದ್ದನೋ ಏನೂ ಆದ್ರೆ ಅಷ್ಟೊತ್ತಿಗೆ ಪಾಪಾ ಆ ಸೈಕಲ್​ ವ್ಯಾಪಾರಿ ಬಂದುಬಿಟ್ಟಿದ್ದಾನೆ.

ಮುಖ್ಯ ಕಾನ್ಸ್​ಟೇಬಲ್​ನ ಅಂಡಾಬಂಡಾ ಕಳ್ಳಾಟ ಹೀಗಿತ್ತು:

ಮೊಟ್ಟೆವಾಲಾನನ್ನು ನೋಡಿದ ಕಾನ್ಸ್​ಟೇಬಲ್ ಏನೂ ಘಟಿಸಿಯೇ ಇಲ್ಲ ಎಂಬಂತೆ ತನ್ನ ಕೈಗಳನ್ನು ಪ್ಯಾಂಟಿಗೆ ಒರೆಸಿಕೊಳ್ಳುತ್ತಾ, ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಮೊಟ್ಟೆವಾಲಾ ಬಹುಶಃ ಅದನ್ನೆಲ್ಲ ನೋಡಿದ್ದ ಅನಿಸುತ್ತದೆ. ಇದೆಲ್ಲಾ ಮಾಮೂಲು ಎಂಬಂತೆ ಕಾನ್ಸ್​ಟೇಬಲ್ ಕಡೆಗೆ ಕೈತೋರಿಸಿ, ಇವನ ಹಣೆಬರಹ ಇಷ್ಟೇ. ಇವನಿಗೆ ಕದಿಯುವ ಚಾಳಿ ಇದ್ದಿದ್ದೇ ಎಂದು ಹತಾಶನಾಗಿ ಪ್ರತಿಕ್ರಿಯಿಸುತ್ತಾನೆ. ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿದೆ.

ತಮ್ಮ ಕಾನ್ಸ್​ಟೇಬಲ್ ಮೊಟ್ಟೆ ಕದಿಯುವ ಚಾಳಿ ನೋಡಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಅದಕ್ಕೂ ಮೊದಲು ನೀನು ಮನೆಗೆ ಹೋಗು ಎಂದು ಸಸ್ಪೆಂಡ್​ ಮಾಡಿದ್ದಾರೆ. ಜೊತೆಗೆ ಆ ವಿಡಿಯೋ ಸಮೇತ ಟ್ವೀಟ್​ ಮಾಡಿ.. ಹೀಗೀಗೆ ನಮ್ಮ ಕಾನ್ಸ್​ಟೇಬಲ್ ಕಳ್ಳತನಕ್ಕೆ ಇಳಿದಿದ್ದಾನೆ. ನೀವೂ ನೋಡಿ ಎಂದು ವಿಡಿಯೋ ಟ್ವೀಟ್​ ಪೋಸ್ಟ್ ಮಾಡಿದ್ದಾರೆ. ಅದೀಗ Social Mediaದಲ್ಲಿ Viral Video ಆಗಿದೆ. ನೀವೂ ನೋಡಿ..

(Head Constable Pritpal Singh egg stealing video goes viral in Social Media Punjab Police suspend him)

Published On - 11:14 am, Mon, 17 May 21

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ