AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಳಿಗಳನ್ನು ನುಂಗಿದ ಹೆಬ್ಬಾವು; 2 ವರ್ಷಗಳ ನಂತರ ರೈತನಿಗೆ ಪರಿಹಾರ ನೀಡಿದ ಕೇರಳ ಸರ್ಕಾರ

ಮನೆಯಲ್ಲಿದ್ದ ಕೋಳಿ ಗೂಡಿನಲ್ಲಿ ಪ್ರತಿದಿನ ಕೋಳಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದುದ್ದನ್ನು ಗಮನಿಸಿದ ಜಾರ್ಜ್ ಅವರು ಚಿಂತೆಗೊಳಲಾಗಿದ್ದರು. ಆರಂಭದಲ್ಲಿ, ಯಾರೋ ಕೋಳಿಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ, ಆದರೆ ಜೂನ್ 2022 ರಲ್ಲಿ ಒಂದು ದಿನ, ಹೆಬ್ಬಾವು ಕೋಳಿ ನುಂಗುತ್ತಿರುವುದನ್ನು ಕಂಡುಬಂದಿದೆ.

ಕೋಳಿಗಳನ್ನು ನುಂಗಿದ ಹೆಬ್ಬಾವು; 2 ವರ್ಷಗಳ ನಂತರ ರೈತನಿಗೆ ಪರಿಹಾರ ನೀಡಿದ ಕೇರಳ ಸರ್ಕಾರ
ಅಕ್ಷತಾ ವರ್ಕಾಡಿ
|

Updated on:Jul 11, 2024 | 12:39 PM

Share

ಕೇರಳದ ಕಾಸರಗೋಡಿನ ಸಣ್ಣ ಕೋಳಿ ಸಾಕಾಣಿಕೆದಾರ ಕೆ.ವಿ.ಜಾರ್ಜ್ ಅವರು ಸಾಕುತ್ತಿದ್ದ ಕೆಲವು ಕೋಳಿಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಛೇರಿಗಳ ಸುತ್ತಾಟ ನಡೆಸಿದರೂ ಏನು ಪರಿಹಾರ ಸಿಗದೇ ನೊಂದಿದ್ದ ಕೆ.ವಿ.ಜಾರ್ಜ್ ಅವರಿಗೆ ಇದೀಗ 2 ವರ್ಷಗಳ ಕೇರಳ ಸರ್ಕಾರ ಪರಿಹಾರ ನೀಡಿದೆ.

ತಮ್ಮ ಮನೆಯಲ್ಲಿದ್ದ ಕೋಳಿ ಗೂಡಿನಲ್ಲಿ ಪ್ರತಿದಿನ ಸಂಖ್ಯೆ ಕಡಿಮೆಯಾಗುತ್ತಿದ್ದುದ್ದನ್ನು ಗಮನಿಸಿದ ಜಾರ್ಜ್ ಅವರು ಚಿಂತೆಗೊಳಲಾಗಿದ್ದರು. ಆರಂಭದಲ್ಲಿ, ಯಾರೋ ಕೋಳಿಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ, ಆದರೆ ಜೂನ್ 2022 ರಲ್ಲಿ ಒಂದು ದಿನ, ಹೆಬ್ಬಾವು ಕೋಳಿ ನುಂಗುತ್ತಿರುವುದನ್ನು ಕಂಡಿದ್ದಾರೆ.

ಭಾರೀ ಗಾತ್ರದ ಹೆಬ್ಬಾವನ್ನು ಕಂಡ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಬಂದು ಅದನ್ನು ಕೊಂಡೊಯ್ದಿದ್ದಾರೆ. ನಂತರ, ಅಪರೂಪದ ಸರೀಸೃಪವು ‘ರಾಜ್ಯ-ರಕ್ಷಿತ’ ಆಗಿರುವುದರಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅರಣ್ಯ ಅಧಿಕಾರಿಗಳು ಜಾರ್ಜ್ ಅವರಿಗೆ ತಿಳಿಸಿದ್ದರು. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಶೆಡ್ಯೂಲ್ I ರ ಅಡಿಯಲ್ಲಿ ಹೆಬ್ಬಾವಿಗೆ ಅತ್ಯಂತ ರಕ್ಷಣೆಯ ಸ್ಥಾನಮಾನವನ್ನು ನೀಡಲಾಗಿದೆ.

ಇದನ್ನೂ ಓದಿ: ಪ್ರೀತಿಗೆ ವಿರೋಧ; ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

ಆದರೆ ಪರಿಹಾರವನ್ನು ಪಡೆಯಲು ಅವರು ಮಾಡಿದ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲಿಲ್ಲ. ಒಂದು ವರ್ಷದ ನಂತರ ರಾಜ್ಯ ಸಚಿವರೊಬ್ಬರು ನಡೆಸಿದ ‘ಜನತಾ ಅದಾಲತ್’ ನಲ್ಲಿ ದಿಗ್ಭ್ರಮೆಗೊಂಡ ಜಾರ್ಜ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಹಾವು ಕೇರಳ ಸರಕಾರದ್ದಾಗಿರಬಹುದು, ಆದರೆ ಕಳೆದುಕೊಂಡ ಕೋಳಿಗಳು ತಮ್ಮದಾಗಿದ್ದು, ಪರಿಹಾರ ನೀಡಬೇಕು ಎಂದು ಜಾರ್ಜ್ ಸಚಿವರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು.

ಜಾರ್ಜ್‌ಗೆ ಸಚಿವರು ಸಮಾಧಾನ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಅಂತಿಮವಾಗಿ, ಅವರು ಕೇರಳ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ಆದರೆ, ಆಯೋಗದ ಮೊರೆ ಹೋಗುವ ಮುನ್ನವೇ ಪರಿಹಾರದ ಕುರಿತು ಅರಣ್ಯ ಇಲಾಖೆಯಿಂದ ಕರೆ ಬಂದಿದೆ. ರಾಜ್ಯ ಸರ್ಕಾರದಿಂದ ಹೆಬ್ಬಾವು ಸೇವಿಸಿದ ಕೋಳಿಗಳಿಗೆ 2,000 ರೂ. ಪರಿಹಾರ ಸಿಕ್ಕಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Thu, 11 July 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್