AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ

ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ
TV9 Web
| Edited By: |

Updated on: Dec 28, 2021 | 11:43 AM

Share

ಕೆಲವು ಸಾಹಸಗಳು ಮೈರೋಮಾಂಚನಗೊಳಿಸುತ್ತವೆ.  ಆದರೆ ಇನ್ನು ಕೆಲವು ದುಸ್ಸಾಹಸಗಳು ನೋಡುಗರನ್ನು ಭಯಭೀತಿಗೊಳಿಸುತ್ತವೆ. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ವಿಯೆಟ್ನಾಂನ ಇಬ್ಬರು ಸಹೋದರರ ಸಾಹಸವೊಂದು ಇದೀಗ ಎಲ್ಲೆಡೆ ವೈರಲ್​ ಆಗಿದೆ.  ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

37 ವರ್ಷದ ಗಿಯಾಂಗ್​ ಕ್ವೋಕ್​ ಕೋ ಮತ್ತು 32 ವರ್ಷದ ಆತನ ಸಹೋದರ ಗಿಯಾಂಗ್​ ಕ್ವೋಕ್​ ಎನ್ಘಿಪ್​ ಎನ್ನುವವರು ಒಬ್ಬರ ಈ ಸಾಧನೆ ಮಾಡಿದ್ದಾರೆ. 2016 ರ ಡಿಸೆಂಬರ್​ನಲ್ಲಿ ಇದೇ ರೀತಿ ಒಬ್ಬರ ತಲೆಯಮೇಲೆ ಇನ್ನೊಬ್ಬರು ತಲೆಯಿಟ್ಟು ಉಲ್ಟಾ ನಿಂತು 52  ಸೆಕೆಂಡುಗಳಲ್ಲಿ 90 ಮೆಟ್ಟಿಲನ್ನು ಹತ್ತಿದ್ದರು. ಇದೀಗ ಅವರದೇ ದಾಖಲೆಯನ್ನು ಮುರಿದು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತುವ ಮೂಲಕ ಹೊಸ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಹೋದರರು ಪ್ರತಿದಿನ ನಾವು ಅಭ್ಯಾಸವನ್ನು ಮಾಡುತ್ತಿದ್ದೆವು, ಪ್ರತಿಯೊಬ್ಬರೂ ಈ ದಿನವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಸದ್ಯ ಈ ವೀಡಿಯೋ ಯುಟ್ಯೂಬ್​ನಲ್ಲಿ ವೈರಲ್​ ಆಗಿದೆ. ಸಹೋದರರ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕ್ಯಾಥ್ರಡೆಲ್​ನಲ್ಲಿ 90 ಮೆಟ್ಟಿಲುಳು ಮಾತ್ರ ಇದ್ದ ಕಾರಣ ಇವರ ಸಾಹಸಕ್ಕಾಗಿ ಮತ್ತೆ 10 ಮಟ್ಟಿಗಳನ್ನು ಜೋಡಿಸಲಾಗಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು  ವೀಡಿಯೋವನ್ನು ಪ್ರಸಾರ ಮಾಡಿದ್ದವು. ಅದರ ಬಳಿಕ ಜಗತ್ತಿನಾದ್ಯಂತ ವೀಡಿಯೋ ಎಲ್ಲರ ಗಮನಸೆಳೆದಿದೆ.

ಇದನ್ನೂ ಓದಿ:

ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ