Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ

ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ
Follow us
TV9 Web
| Updated By: Pavitra Bhat Jigalemane

Updated on: Dec 28, 2021 | 11:43 AM

ಕೆಲವು ಸಾಹಸಗಳು ಮೈರೋಮಾಂಚನಗೊಳಿಸುತ್ತವೆ.  ಆದರೆ ಇನ್ನು ಕೆಲವು ದುಸ್ಸಾಹಸಗಳು ನೋಡುಗರನ್ನು ಭಯಭೀತಿಗೊಳಿಸುತ್ತವೆ. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ವಿಯೆಟ್ನಾಂನ ಇಬ್ಬರು ಸಹೋದರರ ಸಾಹಸವೊಂದು ಇದೀಗ ಎಲ್ಲೆಡೆ ವೈರಲ್​ ಆಗಿದೆ.  ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

37 ವರ್ಷದ ಗಿಯಾಂಗ್​ ಕ್ವೋಕ್​ ಕೋ ಮತ್ತು 32 ವರ್ಷದ ಆತನ ಸಹೋದರ ಗಿಯಾಂಗ್​ ಕ್ವೋಕ್​ ಎನ್ಘಿಪ್​ ಎನ್ನುವವರು ಒಬ್ಬರ ಈ ಸಾಧನೆ ಮಾಡಿದ್ದಾರೆ. 2016 ರ ಡಿಸೆಂಬರ್​ನಲ್ಲಿ ಇದೇ ರೀತಿ ಒಬ್ಬರ ತಲೆಯಮೇಲೆ ಇನ್ನೊಬ್ಬರು ತಲೆಯಿಟ್ಟು ಉಲ್ಟಾ ನಿಂತು 52  ಸೆಕೆಂಡುಗಳಲ್ಲಿ 90 ಮೆಟ್ಟಿಲನ್ನು ಹತ್ತಿದ್ದರು. ಇದೀಗ ಅವರದೇ ದಾಖಲೆಯನ್ನು ಮುರಿದು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತುವ ಮೂಲಕ ಹೊಸ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಹೋದರರು ಪ್ರತಿದಿನ ನಾವು ಅಭ್ಯಾಸವನ್ನು ಮಾಡುತ್ತಿದ್ದೆವು, ಪ್ರತಿಯೊಬ್ಬರೂ ಈ ದಿನವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಸದ್ಯ ಈ ವೀಡಿಯೋ ಯುಟ್ಯೂಬ್​ನಲ್ಲಿ ವೈರಲ್​ ಆಗಿದೆ. ಸಹೋದರರ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕ್ಯಾಥ್ರಡೆಲ್​ನಲ್ಲಿ 90 ಮೆಟ್ಟಿಲುಳು ಮಾತ್ರ ಇದ್ದ ಕಾರಣ ಇವರ ಸಾಹಸಕ್ಕಾಗಿ ಮತ್ತೆ 10 ಮಟ್ಟಿಗಳನ್ನು ಜೋಡಿಸಲಾಗಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು  ವೀಡಿಯೋವನ್ನು ಪ್ರಸಾರ ಮಾಡಿದ್ದವು. ಅದರ ಬಳಿಕ ಜಗತ್ತಿನಾದ್ಯಂತ ವೀಡಿಯೋ ಎಲ್ಲರ ಗಮನಸೆಳೆದಿದೆ.

ಇದನ್ನೂ ಓದಿ:

ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್