Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 

ಈ ಘಟನೆಯನ್ನು  ಮೂಢ ನಂಬಿಕೆಯ ಪರಮಾವಧಿ ಅಂದ್ರೂ ತಪ್ಪಿಲ್ಲ. ಉತ್ತರ ಪ್ರದೇಶದ 20 ವರ್ಷದ ಯುವಕನೊಬ್ಬ ಹಾವು ಕಡಿತದಿಂದ ಸಾವನ್ನಪ್ಪಿದ್ದು,  ಈ ಶವವನ್ನು ಗಂಗಾ ನದಿಯಲ್ಲಿ ಮುಳುಗಿಸಿಟ್ಟರೆ, ದೇಹಕ್ಕೆ ಏರಿದ ವಿಷವೆಲ್ಲಾ ಹೋಗಿ ಆತ ಮತ್ತೆ ಬದುಕಿ ಬರುತ್ತಾನೆ ಎಂದು ಯಾರೋ ಹೇಳಿದ ಮಾತನ್ನು ಕೇಳಿ,  ಮೃತ ಯುವಕನ ಕುಟುಂಬಸ್ಥರು ಶವವನ್ನು ಹಗ್ಗದಲ್ಲಿ ಕಟ್ಟಿ ಎರಡು ದಿನಗಳ  ಗಂಗಾ ನದಿ ನೀರಿನಲ್ಲಿರಿಸಿದ್ದಾರೆ. 

ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 03, 2024 | 4:40 PM

ಯಾವುದೇ ವಿಷಯಗಳಲ್ಲಿಯೂ  ಅತಿಯಾದ ಮೂಢನಂಬಿಕೆ ಒಳ್ಳೆಯದಲ್ಲ. ಸಾಕಷ್ಟು ಜನರು ಇಂತಹ ನಂಬಿಕೆಗಳಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮೂಢನಂಬಿಕೆಯ ಪರಮಾವಧಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದ್ದು, 20 ವರ್ಷದ ಯುವಕನೊಬ್ಬ ಹಾವು ಕಡಿತದಿಂದ ಮೃತಪಟ್ಟಿದ್ದು, ಆತ ಬದುಕಿ ಬರುತ್ತಾನೆಂದು ನಂಬಿ ಕುಟುಂಬಸ್ಥರು ಆತನ ಶವವನ್ನು ಹಗ್ಗದಲ್ಲಿ ಕಟ್ಟಿ ಎರಡು ದಿನಗಳ ಕಾಲ ಗಂಗಾನದಿ ನೀರಿನಲ್ಲಿ ಮುಳುಗಿಸಿಟ್ಟಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನ ಜಹಾಂಗೀರಾಬಾದಿನಲ್ಲಿ ನಡೆದಿದ್ದು, ಏಪ್ರಿಲ್ 26 ರಂದು ಮೋಹಿತ್ ಎಂಬ 20 ವರ್ಷ ವಯಸ್ಸಿನ ಯುವಕನೊಬ್ಬ ಮತ ಚಲಾಯಿಸಿ ಬಂದು ಹೊಲದ ಕಡೆಗೆ ಹೋಗಿರುತ್ತಾನೆ.  ಅಲ್ಲಿ ಆತನಿಗೆ ಹಾವು ಕಡಿದಿದ್ದು, ಆ ತಕ್ಷಣ ಆ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಟ್ರೆಡ್ ಮಿಲ್ ಮೇಲೆ ಓಡುವಂತೆ ಒತ್ತಾಯಿಸಿ ಮಗ ಪ್ರಾಣವನ್ನೇ ಬಲಿ ಪಡೆದುಕೊಂಡ ತಂದೆ

ನಂತರ ಹೀಗೆ ಹಾವು ಕಡಿತದಿಂದ ಮೃತಪಟ್ಟವರು ಬದುಕಿಬರಬೇಕಾದರೆ ಹಾಗೂ ಅವರ ದೇಹಕ್ಕೆ ಏರಿದ ವಿಷ ಹೋಗಲಾಡಸಬೇಕಾದರೆ ಮೃತ ದೇಹವನ್ನು ಗಂಗಾ ನದಿನೀರಿನಲ್ಲಿ ಮುಳುಗಿಸಬೇಕು ಎಂದು ಯಾರೋ ಹೇಳಿದ ಮೂಢ ನಂಬಿಕೆಯ ಮಾತನ್ನು ನಂಬಿ, ಮೃತ ಯುವಕನ ಕುಟುಂಬಸ್ಥರು ಮೃತ ದೇಹವನ್ನು  ಹಗ್ಗದಲ್ಲಿ ಕಟ್ಟಿ ಎರಡು ದಿನಗಳ ಕಾಲ ಗಂಗಾ ನದಿ ನೀರಿನಲ್ಲಿ ಇರಿಸಿದ್ದಾರೆ. ನಂತರ ಉಸಿರು ಮರಳಿ ಬರದಿದ್ದಾಗ ಆ ಯುವಕನ ಅಂತ್ಯ ಸಂಸ್ಕಾರವನ್ನು ಅಲ್ಲಿಯೇ ನೆರವೇರಿಸಲಾಗಿದೆ. ಈ ಘಟನೆ ಮೂಢನಂಬಿಕೆಯ ಪರಮಾವಧಿಗೆ ಜ್ವಲಂತ ಉದಾಹರಣೆ ಎಂದರೆ ತಪ್ಪಾಗಲಾರದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ