AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಾಶದಲ್ಲಿರುವಾಗಲೇ ಹಾರಿ ಹೋಗಿತ್ತು ವಿಮಾನದ ಮೇಲ್ಭಾಗ, ಪವಾಡವೆಂಬಂತೆ ಪ್ರಯಾಣಿಕರು ಪಾರಾದ ಕಥೆ

ವಿಮಾನದಲ್ಲಿ ಕುಳಿತಾಗ ಗಾಳಿಯ ಒತ್ತಡಕ್ಕೆ ವಿಮಾನ ಸ್ವಲ್ಪ ಜೋರಾಗಿ ಅಲ್ಲಾಡಿದರೂ ಏನೋ ಆಗಿಬಿಡುತ್ತೆ ಎನ್ನುವಷ್ಟು ಭಯವಾಗುತ್ತೆ. ಆದರೆ ಈ ವಿಮಾನದ ಮೇಲ್ಭಾಗವೇ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರಿ ಹೋಗಿತ್ತು. ಇನ್ನು ಪ್ರಯಾಣಿಕರ ಕಥೆ ಏನಾಗಿರಬೇಡ. ಇದು 1988, ಏಪ್ರಿಲ್ 28ರ ಕಥೆ, ಅಂದು 89 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತು ಅಮೆರಿಕದ ಅಲೋಹಾ ಏರ್​ಲೈನ್ಸ್​ ಹಾರಾಟ ಆರಂಭಿಸಿತ್ತು.

ಆಕಾಶದಲ್ಲಿರುವಾಗಲೇ ಹಾರಿ ಹೋಗಿತ್ತು ವಿಮಾನದ ಮೇಲ್ಭಾಗ, ಪವಾಡವೆಂಬಂತೆ ಪ್ರಯಾಣಿಕರು ಪಾರಾದ ಕಥೆ
ವಿಮಾನ
ನಯನಾ ರಾಜೀವ್
|

Updated on: Nov 22, 2023 | 7:56 AM

Share

ವಿಮಾನದಲ್ಲಿ ಕುಳಿತಾಗ ಗಾಳಿಯ ಒತ್ತಡಕ್ಕೆ ವಿಮಾನ ಸ್ವಲ್ಪ ಜೋರಾಗಿ ಅಲ್ಲಾಡಿದರೂ ಏನೋ ಆಗಿಬಿಡುತ್ತೆ ಎನ್ನುವಷ್ಟು ಭಯವಾಗುತ್ತೆ. ಆದರೆ ಈ ವಿಮಾನದ ಮೇಲ್ಭಾಗವೇ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರಿ ಹೋಗಿತ್ತು. ಇನ್ನು ಪ್ರಯಾಣಿಕರ ಕಥೆ ಏನಾಗಿರಬೇಡ. ಇದು 1988, ಏಪ್ರಿಲ್ 28ರ ಕಥೆ, ಅಂದು 89 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತು ಅಮೆರಿಕದ ಅಲೋಹಾ ಏರ್​ಲೈನ್ಸ್​ ಹಾರಾಟ ಆರಂಭಿಸಿತ್ತು.

ಮಾರ್ಗಮಧ್ಯದಲ್ಲಿ ಗಾಳಿಯ ಒತ್ತಡಕ್ಕೆ ಸಿಲುಕಿ ವಿಮಾನದ ರೂಫ್​(ಮೇಲ್ಭಾಗ)ನ ಒಂದು ಭಾಗ ಹಾರಿ ಹೋಗಿತ್ತು. ಹಾಗೆಯೇ ಪೆಸಿಫಿಕ್ ಮಹಾಸಾಗರದ ಮೇಲೆ 24,000 ಅಡಿಗಳಷ್ಟು ತೀವ್ರವಾದ ಗಾಳಿಗೆ ಪ್ರಯಾಣಿಕರನ್ನು ಒಡ್ಡಿತ್ತು.

ಸಿಬ್ಬಂದಿ ಹಾಗೂ ಪ್ರಯಾಣಿಕರು ಗಾಬರಿಯಿಂದ ಕಿರುಚಾಡುತ್ತಿದ್ದರು. ಆದರೆ ಪೈಲಟ್​ ಧೈರ್ಯದಿಂದ ಹಾನಿಗೊಳಗಾದ ವಿಮಾನವನ್ನು 24,000 ಅಡಿ ಕೆಳಗಿಳಿಸಿದರು. 95 ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದರು, ಎಂಟು ಮಂದಿಗೆ ಗಾಯಗಳಾಗಿತ್ತು. ಆ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಕುಳಿತು ಬೆಲ್ಟ್​ ಧರಿಸಿದ್ದರು. ಆದರೆ ಫ್ಲೈಟ್​ ಅಟೆಂಡೆಂಟ್ ದೇಹವು ಎಲ್ಲೂ ಕಂಡುಬಂದಿಲ್ಲ.

ವರದಿ ಪ್ರಕಾರ ವಿಮಾನವು ಡಿಕಂಪ್ರೆಷನ್ ಅನುಭವಿಸಿತ್ತು, ಪ್ರಯಾಣಿಕರೊಬ್ಬರು ಬೋರ್ಡಿಂಗ್ ಸಮಯದಲ್ಲಿ ವಿಮಾನದ ಫ್ಯೂಸ್‌ಲೇಜ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದರು, ಆದರೆ ಅವರು ಟೇಕಾಫ್ ಮಾಡುವ ಮೊದಲು ಸಿಬ್ಬಂದಿಗೆ ತಿಳಿಸಿರಲಿಲ್ಲ.

ಮತ್ತಷ್ಟು ಓದಿ:Nepal Plane Crash: ನೇಪಾಳ ವಿಮಾನ ದುರಂತದಲ್ಲಿ ಎಲ್ಲಾ ಪ್ರಯಾಣಿಕರ ಸಾವು, 5 ಸದಸ್ಯರ ತನಿಖಾ ಆಯೋಗ ರಚನೆ

ನಾನು ವಿಮಾನದಲ್ಲಿ ಇದ್ದಕ್ಕಿದ್ದಂತೆ ಶಬ್ದವನ್ನು ಕೇಳಿದೆ ಆದರೆ ಅದು ಸ್ಫೋಟವಾಗಿರಲಿಲ್ಲ, ವಿಮಾನದ ಮೇಲ್ಭಾಗ ಹಾರಿ ಹೋಗಿತ್ತು. ಗಾಳಿಯ ಒತ್ತಡ ತುಂಬಾ ಇತ್ತು. ಒಂದು ಸಣ್ಣ ರಂಧ್ರದಿಂದ ಪ್ರಾರಂಭವಾಗಿತ್ತು, ಕ್ರಮೇಣವಾಗಿ ವಿಮಾನದ ಭಾಗವು ಬೇರ್ಪಡುತ್ತಲೇ ಇತ್ತು. ಗಾಳಿಯ ಒತ್ತಡವೂ ಹೆಚ್ಚಾದಾಗ ಒಂದೇ ಬಾರಿಗೆ ವಿಮಾನದ ಭಾಗ ಗಾಳಿಯಲ್ಲಿ ಹಾರಿ ಹೋಗಿತ್ತು ಎಂದು ಪ್ರಯಾಣಿಕ ಎರಿಕ್ ಬೆಕ್ಲಿನ್ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು