AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಹುಚ್ಚು ಪ್ರಯೋಗ! ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವಿಡಿಯೋ

expensive gold experiment: ಪ್ರಯೋಗದ ನಂತರ ಅವರಿಗೆ ಕಿತ್ತಳೆ ಬಣ್ಣದ ದ್ರವ ಮಾತ್ರ ಉಳಿದಿದೆ. ಕೊನೆಗೆ ಆ ದ್ರವವನ್ನು ಏನು ಮಾಡಬೇಕೆಂದು ತಿಳಿಯದೆ ಗಾಜಿನ ಗ್ಲಾಸನ್ನು ನೆಲಕ್ಕೆ ಹಾಕಿ ಕುಕ್ಕುತ್ತಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಶೇರ್ ಆಗಿದೆ.

ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಹುಚ್ಚು ಪ್ರಯೋಗ! ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವಿಡಿಯೋ
ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಈ ಹುಚ್ಚು ಪ್ರಯೋಗ
Follow us
ಸಾಧು ಶ್ರೀನಾಥ್​
|

Updated on:May 15, 2023 | 2:44 PM

ಚಿನ್ನವು ವಿಶ್ವದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಚಿನ್ನವನ್ನು ಆಭರಣಗಳ ರೂಪದಲ್ಲಿ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಐಷಾರಾಮಿ ವಸ್ತು ಎಂದೇ ಖ್ಯಾತಿ ಪಡೆದಿರುವ ಈ ಚಿನ್ನದ ಬೆಲೆ ಸದಾ ಗಗನಮುಖಿಯಾಗಿಯೇ ಇರುತ್ತದೆ. ಕೆಲವರು ಕೆಲವು ರಾಸಾಯನಿಕಗಳನ್ನು ಸೇರಿಸುವ ಮೂಲಕ ಚಿನ್ನದ ಸತ್ವವನ್ನು ಮತ್ತಷ್ಟು ಸುಧಾರಿಸುತ್ತಾರೆ. ಚಿನ್ನವನ್ನು ಕರಗಿಸುವುದೂ ಉಂಟು. ಅನೇಕ ಜನರು ಚಿನ್ನಕ್ಕೆ ಹೊಳಪು ನೀಡಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸುತ್ತಾರೆ. ಅದನ್ನು ಅಸಲಿ ಚಿನ್ನವೆಂದೇ ನಂಬಿಸಿ ಜನರನ್ನು ವಂಚಿಸುತ್ತಾರೆ. ಈ ವೀಡಿಯೊ ಹೆಚ್ಚು ಕಡಿಮೆ ಹಾಗೆ ಇದೆ. ಶುದ್ಧ ಚಿನ್ನದ ಬಿಸ್ಕತ್ತನ್ನು ಆಸಿಡ್‌ನಲ್ಲಿ ಕರಗಿಸುವ ಪ್ರಯೋಗದ ವೆಚ್ಚವನ್ನು ನೀವು ನೋಡಿದರೆ ನೀವು ಹೌಹಾರುತ್ತೀರಿ.

ರಸಾಯನಶಾಸ್ತ್ರ ವಿಜ್ಞಾನವು ನಿಜವಾಗಿಯೂ ಅದ್ಭುತವಾಗಿದೆ. ಬಹಳಷ್ಟು ಸೈದ್ಧಾಂತಿಕ ಅಧ್ಯಯನಗಳು ನೀರಸವಾಗಿದ್ದರೂ, ಪ್ರಾಯೋಗಿಕ ಪ್ರಯೋಗಗಳು ಖಂಡಿತವಾಗಿಯೂ ಕುತೂಹಲಕಾರಿಯೂ, ವಿನೋದವೂ ಮತ್ತು ಆಸಕ್ತಿದಾಯಕವಾಗಿವೆ. ಕೆಲವು ಪಕ್ಕಾ ಸೈನ್ಸ್ ಅಭಿಮಾನಿಗಳು ಕೂಡ ಇದ್ದಾರೆ. ಅವರು ಯಾವಾಗಲೂ ಆಳವಾದ ಅನ್ವೇಷಣೆಯನ್ನು ನಡೆಸಲು ಇಷ್ಟಪಡುತ್ತಾರೆ.

ವಾಸ್ತವವಾಗಿ, ಪ್ರಯೋಗಾಲಯಗಳಲ್ಲಿ ನಡೆಸಿದ ಹೆಚ್ಚಿನ ಪ್ರಯೋಗಗಳು ಯಶಸ್ವಿಯಾಗುತ್ತವೆ, ಆದರೆ ಇತರವು ವಿಫಲಗೊಳ್ಳುತ್ತವೆ. ಈ ಇಂಟರ್ನೆಟ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಅನೇಕ ಸಣ್ಣಪುಟ್ಟ ಲ್ಯಾಬ್ ಪ್ರಯೋಗಗಳು ಬೆಳಕಿಗೆ ಬರುತ್ತವೆ. ಈ ಪ್ರಯೋಗವನ್ನೂ ಗಮನಿಸಿ.. ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಈ ಹುಚ್ಚು ಪ್ರಯೋಗವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ವಿವರಿಸಿದಂತೆ, ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಉತ್ಸಾಹ ಹೊಂದಿರುವವರೊಬ್ಬರು ಕೈಯಲ್ಲಿ 100 ಗ್ರಾಂ ಶುದ್ಧ ಚಿನ್ನದ ಬಿಸ್ಕತ್ತು ಹಿಡಿದು ಪ್ರಯೋಗವನ್ನು ಪ್ರಾರಂಭಿಸಿದರು. ಇಲ್ಲಿ ಪ್ರಯೋಗಕ್ಕೆ ಬಳಸಿದ ಶುದ್ಧ ಚಿನ್ನದ ಬೆಲೆ 6.30 ಲಕ್ಷ ರೂಪಾಯಿ ಎಂದು ಗೊತ್ತಾಗಿದೆ. ಅವರು ಮೊದಲು ಚಿನ್ನದ ಬಿಸ್ಕತ್ತನ್ನು ಗಾಜಿನ ಲೋಟದಲ್ಲಿ ಹಾಕುತ್ತಾರೆ.

ನಂತರ ಚಿನ್ನದ ಬಿಸ್ಕತ್ತು ಮುಳುಗುವವರೆಗೆ ಸಾಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಯುತ್ತಾರೆ. ಆ ನಂತರ ನೈಟ್ರಿಕ್ ಆಸಿಡ್ ಹಾಕಿದರು.. ಗ್ಲಾಸಿಗೆ ನೈಟ್ರಿಕ್ ಆಸಿಡ್ ಸುರಿದ ತಕ್ಷಣ ಚಿನ್ನದ ಬಿಸ್ಕತ್ ಕರಗತೊಡಗಿತು. ಕೆಲವೇ ಗಂಟೆಗಳಲ್ಲಿ, ಚಿನ್ನದ ಗಟ್ಟಿ ಸಂಪೂರ್ಣವಾಗಿ ಕರಗುವುದನ್ನು ನಾವು ನೋಡಬಹುದು. ಗೋಲ್ಡನ್ ಬಿಸ್ಕತ್ತು ಸಂಪೂರ್ಣವಾಗಿ ಆಮ್ಲದಲ್ಲಿ ಕರಗುತ್ತದೆ. ಕರಗುತ್ತಾ ಕರಗುತ್ತಾ ಅಂತಿಮವಾಗಿ ಅದು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ!

ಪ್ರಯೋಗದ ನಂತರ ಅವರಿಗೆ ಕಿತ್ತಳೆ ಬಣ್ಣದ ದ್ರವ ಮಾತ್ರ ಉಳಿದಿದೆ. ಕೊನೆಗೆ ಆ ದ್ರವವನ್ನು ಏನು ಮಾಡಬೇಕೆಂದು ತಿಳಿಯದೆ ಗಾಜಿನ ಗ್ಲಾಸನ್ನು ನೆಲಕ್ಕೆ ಹಾಕಿ ಕುಕ್ಕುತ್ತಾರೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು ಬಳಕೆದಾರರು ಹೆಚ್ಚು ಶೇರ್ ಮಾಡಿದ್ದರಿಂದ ವೈರಲ್ ಆಗಿದೆ. ಇದಲ್ಲದೆ, ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Published On - 2:42 pm, Mon, 15 May 23

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು