AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ

ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ
ಹೀನಾ - ಹರ್ಷ್ ಮಾಂಡವೀಯ
ಮದನ್​ ಕುಮಾರ್​
| Edited By: |

Updated on: May 08, 2021 | 4:13 PM

Share

ಕೊರೊನಾ ವೈರಸ್​ ಕಾರಣದಿಂದಾಗಿ ದೇಶಾದ್ಯಂತ ಜನರು ಕಷ್ಟದಲ್ಲಿದ್ದಾರೆ. ಉದ್ಯೋಗ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜನರ ಸಂಖ್ಯೆ ದೊಡ್ಡದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಕೊವಿಡ್​ 2ನೇ ಅಲೆ ಆರಂಭ ಆದಾಗಿನಿಂದ ಅಮ್ಮ-ಮಗ ಸೇರಿಕೊಂಡು ಮುಂಬೈನಲ್ಲಿ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.   

ಈ ರೀತಿ ಸಮಾಜಸೇವೆ ಮಾಡುತ್ತಿರುವುದು ಹರ್ಷ್ ಮಾಂಡವೀಯ ಮತ್ತು ಅವರು ತಾಯಿ ಹೀನಾ ಮಾಂಡವೀಯ. ಅವರಿಬ್ಬರು ಈಗ ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಅವರ ಜೀವನದಲ್ಲಿ ಈ ಹಿಂದೆ ನಡೆದ ಒಂದು ಘಟನೆಯೇ ಕಾರಣ. ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

‘ಆಂಟಿಯೊಬ್ಬರು ನಮ್ಮಿಂದ ಮೊದಲು ಊಟ ತೆಗೆದುಕೊಂಡರು. ಆಗ ಅವರು 35 ರೂ. ನೀಡಿದ್ದರು. ಅದು ನಮ್ಮ ಮೊದಲ ಆದಾಯ. ಬಾಯಿ ಮಾತಿನಿಂದಾಗಿ ನಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಯಿತು. ಬ್ಯುಸಿನೆಸ್​ ಬೆಳೆಯುತ್ತ ಸಾಗಿತು. ಅಮ್ಮ ಅಡುಗೆ ಮಾಡುತ್ತಿದ್ದರು. ನಾನು ಮನೆಮನೆಗೆ ಹೋಗಿ ಕೊಟ್ಟುಬರುತ್ತಿದೆ. 2003ರಲ್ಲಿ ನಮ್ಮ ಬ್ಯುಸಿನೆಸ್​ ವಿಸ್ತರಿಸಲು ಒಬ್ಬರು ಸಹಾಯ ಮಾಡಿದರು. 70 ಸಾವಿರ ಮುಂಗಡ ಹಣ ಮತ್ತು ಬಾಡಿಗೆ ಜಾಗವನ್ನು ನೀಡಿದರು’ ಎನ್ನುತ್ತಾರೆ ಹರ್ಷ್​.

ಶಿಕ್ಷಣ ಮುಗಿಸಿದ ಬಳಿಕ ಹರ್ಷ್​ ಪೂರ್ಣ ಪ್ರಮಾಣದಲ್ಲಿ ಅಮ್ಮನ ಜೊತೆ ಸೇರಿಕೊಂಡು ಬ್ಯುಸಿನೆಸ್​ ಕಡೆಗೆ ಗಮನ ನೀಡಿದರು. ಆನ್​ಲೈನ್​ ಮೂಲಕ ವ್ಯಾಪಾರ ವೃದ್ಧಿಸಿದರು. ಅಂದು ತಮಗೆ ಸಹಾಯ ಮಾಡಿದವರಿಗೆ ಹಣ ಹಿಂದಿರುಗಿಸಲು ಹೋದಾಗ, ‘ನಮಗೆ ಹಣ ಬೇಡ. ನೀವೂ 10 ಜನಕ್ಕೆ ಸಹಾಯ ಮಾಡಿ’ ಎಂದು ಅವರು ಹೇಳಿದರಂತೆ. ಆ ಮಾತಿನ ಪ್ರಕಾರವಾಗಿ, 2020ರಲ್ಲಿ ಲಾಕ್​ಡೌನ್​ ಆದಾಗ ಉಚಿತವಾಗಿ ಊಟ ನೀಡುವ ಕಾಯಕವನ್ನು ಹರ್ಷ್​ ಮತ್ತು ಹೀನಾ ಆರಂಭಿಸಿದರು.

ಈ ಕೆಲಸದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಅವರಿಗೆ ಅನೇಕರು ಬೆಂಬಲ ನೀಡಲು ಪ್ರಾರಂಭಿಸಿದರು. ‘ಕೊವಿಡ್​ ಎರಡನೇ ಅಲೆ ಆರಂಭ ಆದಾಗ ನಮಗೆ 1.5 ಲಕ್ಷ ರೂ. ದೇಣಿಗೆ ಸಿಕ್ಕಿತು. ಅದರಿಂದ ಈವರೆಗೆ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಲು ಸಾಧ್ಯವಾಗಿದೆ’ ಎಂದಿದ್ದಾರೆ ಹರ್ಷ್​ ಮಾಂಡವೀಯ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ