AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ

ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ
ಹೀನಾ - ಹರ್ಷ್ ಮಾಂಡವೀಯ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 08, 2021 | 4:13 PM

ಕೊರೊನಾ ವೈರಸ್​ ಕಾರಣದಿಂದಾಗಿ ದೇಶಾದ್ಯಂತ ಜನರು ಕಷ್ಟದಲ್ಲಿದ್ದಾರೆ. ಉದ್ಯೋಗ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜನರ ಸಂಖ್ಯೆ ದೊಡ್ಡದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಕೊವಿಡ್​ 2ನೇ ಅಲೆ ಆರಂಭ ಆದಾಗಿನಿಂದ ಅಮ್ಮ-ಮಗ ಸೇರಿಕೊಂಡು ಮುಂಬೈನಲ್ಲಿ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.   

ಈ ರೀತಿ ಸಮಾಜಸೇವೆ ಮಾಡುತ್ತಿರುವುದು ಹರ್ಷ್ ಮಾಂಡವೀಯ ಮತ್ತು ಅವರು ತಾಯಿ ಹೀನಾ ಮಾಂಡವೀಯ. ಅವರಿಬ್ಬರು ಈಗ ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಅವರ ಜೀವನದಲ್ಲಿ ಈ ಹಿಂದೆ ನಡೆದ ಒಂದು ಘಟನೆಯೇ ಕಾರಣ. ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

‘ಆಂಟಿಯೊಬ್ಬರು ನಮ್ಮಿಂದ ಮೊದಲು ಊಟ ತೆಗೆದುಕೊಂಡರು. ಆಗ ಅವರು 35 ರೂ. ನೀಡಿದ್ದರು. ಅದು ನಮ್ಮ ಮೊದಲ ಆದಾಯ. ಬಾಯಿ ಮಾತಿನಿಂದಾಗಿ ನಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಯಿತು. ಬ್ಯುಸಿನೆಸ್​ ಬೆಳೆಯುತ್ತ ಸಾಗಿತು. ಅಮ್ಮ ಅಡುಗೆ ಮಾಡುತ್ತಿದ್ದರು. ನಾನು ಮನೆಮನೆಗೆ ಹೋಗಿ ಕೊಟ್ಟುಬರುತ್ತಿದೆ. 2003ರಲ್ಲಿ ನಮ್ಮ ಬ್ಯುಸಿನೆಸ್​ ವಿಸ್ತರಿಸಲು ಒಬ್ಬರು ಸಹಾಯ ಮಾಡಿದರು. 70 ಸಾವಿರ ಮುಂಗಡ ಹಣ ಮತ್ತು ಬಾಡಿಗೆ ಜಾಗವನ್ನು ನೀಡಿದರು’ ಎನ್ನುತ್ತಾರೆ ಹರ್ಷ್​.

ಶಿಕ್ಷಣ ಮುಗಿಸಿದ ಬಳಿಕ ಹರ್ಷ್​ ಪೂರ್ಣ ಪ್ರಮಾಣದಲ್ಲಿ ಅಮ್ಮನ ಜೊತೆ ಸೇರಿಕೊಂಡು ಬ್ಯುಸಿನೆಸ್​ ಕಡೆಗೆ ಗಮನ ನೀಡಿದರು. ಆನ್​ಲೈನ್​ ಮೂಲಕ ವ್ಯಾಪಾರ ವೃದ್ಧಿಸಿದರು. ಅಂದು ತಮಗೆ ಸಹಾಯ ಮಾಡಿದವರಿಗೆ ಹಣ ಹಿಂದಿರುಗಿಸಲು ಹೋದಾಗ, ‘ನಮಗೆ ಹಣ ಬೇಡ. ನೀವೂ 10 ಜನಕ್ಕೆ ಸಹಾಯ ಮಾಡಿ’ ಎಂದು ಅವರು ಹೇಳಿದರಂತೆ. ಆ ಮಾತಿನ ಪ್ರಕಾರವಾಗಿ, 2020ರಲ್ಲಿ ಲಾಕ್​ಡೌನ್​ ಆದಾಗ ಉಚಿತವಾಗಿ ಊಟ ನೀಡುವ ಕಾಯಕವನ್ನು ಹರ್ಷ್​ ಮತ್ತು ಹೀನಾ ಆರಂಭಿಸಿದರು.

ಈ ಕೆಲಸದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಅವರಿಗೆ ಅನೇಕರು ಬೆಂಬಲ ನೀಡಲು ಪ್ರಾರಂಭಿಸಿದರು. ‘ಕೊವಿಡ್​ ಎರಡನೇ ಅಲೆ ಆರಂಭ ಆದಾಗ ನಮಗೆ 1.5 ಲಕ್ಷ ರೂ. ದೇಣಿಗೆ ಸಿಕ್ಕಿತು. ಅದರಿಂದ ಈವರೆಗೆ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಲು ಸಾಧ್ಯವಾಗಿದೆ’ ಎಂದಿದ್ದಾರೆ ಹರ್ಷ್​ ಮಾಂಡವೀಯ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!