AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆದ್ದಾರಿ ಡಿವೈಡರ್ ಮೇಲೆ ಈ ವಿಶೇಷ ಹೂವಿನ ಗಿಡ ಮಾತ್ರ ನೆಡಲಾಗುತ್ತದೆ ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ 

Oleander Plants On Highway: ಸಾಮಾನ್ಯವಾಗಿ ನಾವು ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ರಸ್ತೆಯ ಡಿವೈಡರ್ ಗಳಲ್ಲಿ   ಸೊಂಪಾಗಿ ಬೆಳೆದು ನಿಂತಿರುವಂತಹ ಗುಲಾಬಿ ಬಣ್ಣದ ಸುಂದರ ಹೂವುಗಳನ್ನು ಬಿಡುವಂತಹ ಕಣಗಿಲೆ (ಓಲಿಯಾಂಡರ್) ಗಿಡಗಳನ್ನು  ನೋಡಿರುತ್ತೇವೆ ಅಲ್ವಾ.  ಅಲ್ಲಾ ಪ್ರತಿಯೊಂದು ಹೆದ್ದಾರಿಗಳ ಡಿವೈಡರ್  ಗಳಲ್ಲೂ ಈ ಒಂದು ಗಿಡವನ್ನೇ ಏಕೆ ನೆಡುತ್ತಾರೆ, ಇದರ ಹಿಂದೆ ಏನಾದ್ರೂ ಕಾರಣ ಇರ್ಬೋದಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ?  ಹೌದು ಇದರ ಹಿಂದೆಯೂ ಒಂದು ಕಾರಣವಿದೆಯಂತೆ, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೆದ್ದಾರಿ ಡಿವೈಡರ್ ಮೇಲೆ ಈ ವಿಶೇಷ ಹೂವಿನ ಗಿಡ ಮಾತ್ರ ನೆಡಲಾಗುತ್ತದೆ ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ 
ಮಾಲಾಶ್ರೀ ಅಂಚನ್​
| Edited By: |

Updated on: Mar 06, 2024 | 6:06 PM

Share

ನೀವೆಲ್ಲರೂ ಪ್ರಯಾಣಿಸುವ ಸಂದರ್ಭದಲ್ಲಿ ಹೆದ್ದಾರಿಗಳ ಮಧ್ಯಭಾಗದಲ್ಲಿರುವ ಡಿವೈಡರ್ಗಳಲ್ಲಿ ಸುಂದರವಾದ  ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಸಸ್ಯಗಳನ್ನು ನೆಟ್ಟಿರುವುದನ್ನು ಗಮನಿಸಿರಬಹುದಲ್ವಾ. ಈ ಗಿಡದ ಹೆಸರು ಕಣಗಿಲೆ (ಒಲಿಯಾಂಡರ್). ಈ ಗಿಡದ  ಹೂವುಗಳು ನೋಡಲು ತುಂಬಾ ಸುಂದರವಾಗಿದ್ದು, ರಸ್ತೆಯ ಸೌಂದರ್ವನ್ನು ಹೆಚ್ಚಿಸಲೆಂದೇ  ಎಲ್ಲಾ ಹೆದ್ದಾರಿಗಳ ಮಧ್ಯಭಾಗದಲ್ಲೂ ಈ ಸಸ್ಯವನ್ನೇ  ನೆಟ್ಟಿರಬಹುದು ಎಂದು ಹಲವರು ಭಾವಿಸುತ್ತಾರೆ. ಅಲ್ಲಾ ಎಲ್ಲಾ ಹೆದ್ದಾರಿಗಳ ಮಧ್ಯಭಾಗದಲ್ಲಿ ಈ ಒಂದು ವಿಶೇಷ ಗಿಡವನ್ನೇ ಏಕೆ ಬೆಳೆಸಲಾಗುತ್ತದೆ, ಬೇರೆ ಗಿಡಗಳನ್ನು ನೆಡಬಹುದಲ್ವಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ?  ಹೆದ್ದಾರಿಗಳ ಡಿವೈಡರ್ಗಳಲ್ಲಿ  ಕೇವಲ ಕಣಗಿಲೆ ಗಿಡವನ್ನು ಮಾತ್ರ ನೆಡುವುದರ ಹಿಂದೆ ಇಂಟರೆಸ್ಟಿಂಗ್ ಕಾರಣವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಹೆದ್ದಾರಿಗಳ ಡಿವೈಡರ್ ಗಳಲ್ಲಿ  ಕಣಗಿಲೆ ಗಿಡಗಳನ್ನು ಏಕೆ ಬೆಳೆಸಲಾಗುತ್ತದೆ?

ಹೆದ್ದಾರಿಗಳ ಮಧ್ಯ ಭಾಗದಲ್ಲಿರುವ ಡಿವೈಡರ್ಗಳಲ್ಲಿ  ಕೇವಲ ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಕಣಗಿಲೆ ಸಸ್ಯವನ್ನೇ ನೆಡಲಾಗುತ್ತದೆ, ಏಕೆಂದರೆ  ನಗರಗಳಲ್ಲಿನ ಹೆದ್ದಾರಿಗಳಲ್ಲಿ ಪ್ರತಿಕ್ಷಣವೂ ವಾಹನಗಳೂ ಓಡಾಡುತ್ತಲೇ ಇರುತ್ತವೆ. ಈ ವಾಹನಗಳಿಂದ ಹೊರಸೂಸುವ ಹೊಗೆಯು ಬಹಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಈ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಶುದ್ಧವಾದ ಆಮ್ಲಜನಕವನ್ನು ನೀಡುವ ಸಾಮರ್ಥ್ಯ ಈ ಸಸ್ಯಕ್ಕಿದೆ. ಹೌದು ಈ ಸಸ್ಯದ ಎಲೆಗಳು ಮತ್ತು ಹೂವುಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದಲ್ಲದೆ ವಾಯುವಿನ ಮಾಲೀನ್ಯಕಾರಕಗಳನ್ನು ತೆಗೆದುಹಾಕುವ ಮೂಲಕ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ  ಹೆದ್ದಾರಿಯಲ್ಲಿ ಪ್ರಯಾಣಿಸುವರು ಶುದ್ಧ ಗಾಳಿಯನ್ನು ಉಸಿರಾಡಬಹುದು. ಇದೇ ಕಾರಣಕ್ಕೆ ಹೆದ್ದಾರಿಗಳಲ್ಲಿ ಈ ಸಸ್ಯವನ್ನೇ ಹೆಚ್ಚಾಗಿ ನೆಡಲಾಗುತ್ತದೆ.

ಇದನ್ನೂ ಓದಿ: ಕೈಯಿಲ್ಲ ಎಂದು ಸುಳ್ಳು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ಬಾಲಕನಿಗೆ ಬೈಕ್​​​ ಸವಾರ ಮಾಡಿದ್ದೇನು? ನೋಡಿ

ಅಷ್ಟೇ ಅಲ್ಲದೆ ಒಣ ಪ್ರದೇಶದಲ್ಲೂ ಸೊಂಪಾಗಿ ಬೆಳೆಯುವ ಈ ಸಸ್ಯಗಳಿಗೆ ಅಷ್ಟಾಗಿ ನೀರು, ಗೊಬ್ಬರ ಇತ್ಯಾದಿ  ನಿರ್ವಹಣೆಯ ಅಗತ್ಯವಿಲ್ಲ. ಹೀಗಾಗಿ ಸುಲಭ  ನಿರ್ವಹಣೆಯ ಕಾರಣಕ್ಕಾಗಿಯೂ ಈ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೊತೆಗೆ ಓಲಿಯಾಂಡರ್ ಸಸ್ಯಗಳು ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಮತ್ತು ಶಬ್ದ ಮಾಲೀನ್ಯವನ್ನು ಕಡಿಮೆ ಮಾಡುವ ಶಕ್ತಿಯೂ ಈ ಸಸ್ಯಕ್ಕಿದೆ.  ಈ ಎಲ್ಲಾ ಕಾರಣಕ್ಕಾಗಿ ಇದೇ ಸಸ್ಯವನ್ನು ಹೆದ್ದಾರಿಯ ಮಧ್ಯೆ ಭಾಗದಲ್ಲಿ ನೆಡಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ