Viral : ಇದು ಅಪ್ಡೇಟೆಡ್ ಟೆಕ್ನಾಲಜಿ, ಟ್ರ್ಯಾಕ್ಟರ್ ಬದಲು ಉಳುಮೆ ಮಾಡಲು ಆಟೋ ಬಂತು

ಸಾಮಾನ್ಯವಾಗಿ ಆಟೋವನ್ನು ಓಡಾಡಲು ಸಲುವಾಗಿ ಬಳಸುತ್ತೇವೆ. ಕೆಲವರಂತೂ ಆಟೋ ಓಡಿಸಿ ಒಂದಿಷ್ಟು ಸಂಪಾದಿಸಿ, ಆ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಆಟೋವನ್ನು ವಿಭಿನ್ನವಾಗಿ ಬಳಸಿಕೊಂಡಿದ್ದಾನೆ. ಹೌದು, ಆಟೋವನ್ನು ಬಳಸಿ ಉಳುಮೆ ಮಾಡಿದ್ದು ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral : ಇದು ಅಪ್ಡೇಟೆಡ್ ಟೆಕ್ನಾಲಜಿ, ಟ್ರ್ಯಾಕ್ಟರ್ ಬದಲು ಉಳುಮೆ ಮಾಡಲು ಆಟೋ ಬಂತು
ವೈರಲ್ ವಿಡಿಯೋ
Image Credit source: Instagram

Updated on: Apr 28, 2025 | 12:14 PM

ಭಾರತ ಕೃಷಿ (agriculture ) ಪ್ರಧಾನವಾದ ದೇಶ. ಇತ್ತೀಚೆಗಿನ ದಿನಗಳಲ್ಲಿ ಸ್ವ ಆಸಕ್ತಿಯಿಂದ ಕೃಷಿಯತ್ತ ಮುಖ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಈ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ರೈತರು ಕೃಷಿ ಸಂಬಂಧಿ ಕೆಲಸಗಳಿಗೆ ಆಧುನಿಕ ಯಂತ್ರ (mechine) ಗಳನ್ನೆ ಅವಲಂಬಿಸಿಕೊಂಡಿದ್ದಾರೆ. ಈ ಹಿಂದೆಯೆಲ್ಲಾ ಉಳುಮೆ ಮಾಡಲು ಎತ್ತು , ಕೋಣಗಳನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಸಾಂಪ್ರದಾಯಿಕ ವಿಧಾನದಿಂದ ಉಳುಮೆ ಮಾಡುವ ಬದಲು ಟ್ಯಾಕ್ಟರ್ (tractor)ಗಳನ್ನೇ ಹೆಚ್ಚಿನವರು ನೆಚ್ಚಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಇನ್ನು ಅಪ್ಡೇಟ್ ಆಗಿದ್ದು ಆಟೋ (auto) ಬಳಸಿ ಗದ್ದೆಯನ್ನು ಉಳುಮೆ ಮಾಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

sajid hussain 786r ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆ ಉಳುಮೆ ಮಾಡಲು ಆಟೋವನ್ನು ಬಳಸಿಕೊಂಡಿರುವುದನ್ನು ನೋಡಬಹುದು. ಇಲ್ಲಿ ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಲಾಗಿದ್ದು, ಈ ವ್ಯಕ್ತಿಯೊಬ್ಬನು ಆಟೋವನ್ನು ಓಡಿಸುತ್ತಿದ್ದಾನೆ. ಹಲಗೆಯನ್ನು ಕಟ್ಟಲಾಗಿರುವ ಕಾರಣ ಗದ್ದೆಯ ಮಣ್ಣು ಸಮತಟ್ಟಾಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ
ಪೈಲಟ್ ಮೊಮ್ಮಗನ ಜೊತೆಯಲ್ಲಿ ಅಜ್ಜನ ಮೊದಲ ವಿಮಾನ ಪ್ರಯಾಣ, ವಿಡಿಯೋ ವೈರಲ್
ಶಸ್ತ್ರಚಿಕಿತ್ಸೆಯ ಸಾಧನ ಬಳಸಿ ಹರಿದ ಚಪ್ಪಲಿ ಹೊಲಿದ ವೈದ್ಯಕೀಯ ವಿದ್ಯಾರ್ಥಿ
ಇದು ಬಾಯಲ್ಲಿ ನೀರೂರಿಸುವ ಫ್ರೂಟ್ ಐಸ್ ಗೋಲಾ

ಇದನ್ನೂ ಓದಿ : Viral : ರೀಲ್ಸ್ ಹುಚ್ಚಿಗೆ ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಮಹಿಳೆ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು, ‘ಮನುಷ್ಯನು ಬುದ್ಧಿವಂತ ಎನ್ನುವುದೇನೋ ನಿಜ. ಆದರೆ ಇಷ್ಟು ಬುದ್ಧಿವಂತನೆಂದು ತಿಳಿದಿರಲಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಗದ್ದೆ ಉಳುಮೆ ಮಾಡಲು ಹೊಸ ಟೆಕ್ನಾಲಜಿ ಬಂತು’ ಎಂದಿದ್ದಾರೆ. ಮತ್ತೊಬ್ಬರು, ‘ಇದು ರೈತನ ಕೆಲಸವನ್ನು ಮತ್ತಷ್ಟು ವೇಗದಾಯಕವಾಗಿ ಮಾಡುತ್ತದೆ. ಈ ರೀತಿ ಐಡಿಯಾ ಬುದ್ಧಿವಂತರಿಗೆ ಮಾತ್ರ ಬರಲು ಸಾಧ್ಯ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us