Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​

ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ತಲೆ ನೋವು ಬಂದರೆ ಸಾಕು ಚಹ. ಜೋರಾಗಿ ಮಳೆ ಬರುತ್ತಿದ್ದುದು ಕಂಡರೆ ಸಾಕು ಬಿಸಿಬಿಸಿ ಚಹದ ನೆನಪಾಗುತ್ತೆ. ಪ್ರಿಯರಿಗಂತೂ ಚಹಾ ಕುಡಿಯುವುದು ಒಂದು ರೀತಿಯ ಚಟ. ಹಾಗಂತ ಮಾಡಿದ ತಪ್ಪಿಗೆ ಪೊಲೀಸರು ಬಂಧಿಸಲು ಎಳೆದೊಯ್ತಾ ಇದ್ರೂ ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್​
ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!
Follow us
shruti hegde
| Updated By: Lakshmi Hegde

Updated on:May 30, 2021 | 2:11 PM

ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂಗತಿಗಳು ಹೇಗೆ ವೈರಲ್​ ಆಗುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಂದು ಚಹಾ ಪ್ರಿಯರಿಬ್ಬರ ವಿಡಿಯೋ ಒಂದು ಹೆಚ್ಚು ಸುದ್ದಿಯಲ್ಲಿದೆ. ಯಾವುದೋ ಕಾರಣಕ್ಕೆ ಪೊಲೀಸರು ಇಬ್ಬರು ಯುವಕರನ್ನು ಎಳೆದೊಯ್ಯುತ್ತಿದ್ದರೂ ಕೂಡಾ ಆ ಯುವಕರಿಬ್ಬರು ಮಾತ್ರ ಚಹಾ ಕಪ್​ನ್ನು ಮಾತ್ರ ಬಿಡುತ್ತಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಚಹಾ ಪ್ರಿಯರಾದ ಯುವಕರಿಗೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ. ‘ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾ ಕಪ್​ ಮಾತ್ರ ಬಿಡುತ್ತಿಲ್ಲ ನೋಡಿ’ ಎಂದು ತಮಾಷೆಯಾಗಿ ಹೇಳಿದ್ದಾರೆ.

ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ತಲೆ ನೋವು ಬಂದರೆ ಸಾಕು ಚಹ. ಜೋರಾಗಿ ಮಳೆ ಬರುತ್ತಿದ್ದುದು ಕಂಡರೆ ಸಾಕು ಬಿಸಿಬಿಸಿ ಚಹದ ನೆನಪಾಗುತ್ತೆ. ಪ್ರಿಯರಿಗಂತೂ ಚಹಾ ಕುಡಿಯುವುದು ಒಂದು ರೀತಿಯ ಚಟ. ಹಾಗಂತ ಮಾಡಿದ ತಪ್ಪಿಗೆ ಪೊಲೀಸರು ಬಂಧಿಸಲು ಎಳೆದೊಯ್ತಾ ಇದ್ರೂ ಚಹಾದ ಕಪ್​ ಬಿಡಲಿಲ್ವಲ್ಲಾ ಇವರಿಬ್ಬರು!

ವಿಡಿಯೋದಲ್ಲಿ ನೀವು ಗಮನಿಸವಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸುತ್ತಾರೆ. ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯುವಕರ ಕೈಗಳನ್ನು ಹಿಡಿದು ಜೀಪಿನತ್ತ ಕರೆದೊಯ್ಯುತ್ತಿರುತ್ತಾರೆ. ಆದರೆ ಗಮನ ಸೆಳೆದ ವಿಷಯವೆಂದರೆ, ಚಹಾದ ಲೋಟ ಮಾತ್ರ ಕೆಳಗೆ ಬೀಳದಂತೆ ಇಬ್ಬರು ಎಚ್ಚರವಹಿಸಿ ನಡೆದು ಸಾಗುತ್ತಾರೆ. ಯುವಕನೋರ್ವ ಜೀಪ್​ ಹತ್ತುವಾಗ ಬಹಳ ಎಚ್ಚರಿಕೆಯಿಂದ ಹತ್ತುತ್ತಾನೆ. ಇನ್ನೋರ್ವ ಒಂದು ಸಿಪ್​ ಚಹ ಕುಡಿದು ನಂತರ ಜೀಪ್​ ಹತ್ತುವ ತಯಾರಿ ನಡೆಸುತ್ತಾನೆ.

ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇವರಿಗಿಂತಲೂ ಹೆಚ್ಚು ಇಷ್ಟಪಡುವ ಚಹಾದ ಪ್ರೇಮಿಗಳಿಗೆ ಟ್ಯಾಗ್​ ಮಾಡಿ ಎಂದು ಸವಾಲು ಹಾಕುವ ಮೂಲಕ ಪೋಸ್ಟ್​ ಹಂಚಿಕೊಳ್ಳಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘ಇದು ನನ್ನ ಚಹಾ ಕಪ್​, ಉಳಿದ ವಿಷಯಗಳಿಗೆ ನಂತರ ತಲೆಕೆಡಿಸಿಕೊಳ್ತೇನೆ’ ಎಂದು ತಮಾಷೆಯಾಗಿ ನೆಟ್ಟಿಗರೋರ್ವರು ಬರೆದುಕೊಂಡಿದ್ದಾರೆ. ಪೊಲೀಸರು, ಯುವಕರನ್ನು ಎಳೆದೊಯ್ಯುತ್ತಿದ್ದಾರೆ. ಆದರೆ ಚಹಾದ ಕಪ್​ಗಳನ್ನು ಎಸೆಯಲಿಲ್ಲ ನೋಡಿ, ಚಹಾ ಕುಡಿಯುವವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಅವರಲ್ಲಿ ನನಗೆ ಇಷ್ಟವಾದ ಗುಣವಿದು ಎಂದು ಇನ್ನೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

‘ನಾನು ಬಂದೇ ಬರುತ್ತೇನೆ, ಧೈರ್ಯವಾಗಿರಿ..’: ಮತ್ತೆ ರಾಜಕೀಯಕ್ಕೆ ಬರಲಿದ್ದಾರೆ ಅಮ್ಮನ ಆಪ್ತೆ ವಿ.ಕೆ.ಶಶಿಕಲಾ, ವೈರಲ್​ ಆಯ್ತು ಆಡಿಯೋ

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

Published On - 12:10 pm, Sun, 30 May 21

ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ