AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು.

ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !
ವಾಷಿಂಗ್​ ಮಷಿನ್​ನಲ್ಲಿ ಕಂಡುಬಂದ ಪ್ರಾಣಿ
Follow us
Lakshmi Hegde
|

Updated on:May 29, 2021 | 10:49 PM

ಮಹಿಳೆಯೊಬ್ಬರು ತಮ್ಮ ಮನೆಯ ವಾಷಿಂಗ್​ ಮಷಿನ್​ ಬಾಗಿಲು ತೆಗೆಯುತ್ತಿದ್ದಂತೆ ಹೊರಬಂದ ಮುಖವನ್ನು ನೋಡಿ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ವಾಷಿಂಗ್​ ಮಷಿನ್​ನಲ್ಲಿ ಬೆಕ್ಕು ಹೊಕ್ಕುವುದು ಸಾಮಾನ್ಯ. ಆದರೆ ಈ ಮಹಿಳೆಯನ್ನು ಹೆದರಿಸಿದ್ದು ಬೆಕ್ಕಲ್ಲ !

ಘಟನೆ ನಡೆದಿದ್ದು ಲಂಡನ್​ನಲ್ಲಿ. ಮಹಿಳೆ ಟ್ವಿಟರ್​​ನಲ್ಲಿ ತಮಗಾದ ಅನುಭವ ಹೇಳಿಕೊಂಡಿದ್ದಲ್ಲದೆ, ವಾಷಿಂಗ್​ ಮಷಿನ್​ ಒಳಗಿನಿಂದ ಮುಖವನ್ನಷ್ಟೇ ಹೊರಹಾಕಿ ಇಣುಕುತ್ತ ನಿಂತ ನರಿಯ ಫೋಟೋವನ್ನೂ ಅಪ್ಲೋಡ್ ಮಾಡಿದ್ದಾರೆ.

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು. ಆಗ ಬಹುಶಃ ಈ ನರಿ ಒಳ ಸೇರಿರಬೇಕು ಎನ್ನುತ್ತಾರೆ ನತಾಶಾ. ಅದು ಹೇಗೋ ಒಳ ಸೇರಿದ ನರಿ, ಬಳಿಕ ಅಡಗಲು ಒಂದು ಸುರಕ್ಷಿತ ಸ್ಥಳವನ್ನು ಹುಡುಕಿದೆ. ಆಗ ಕಾಣಿಸಿದ ವಾಷಿಂಗ್​ ಮಷಿನ್​ನಲ್ಲಿ ಹೊಕ್ಕಿದೆ ಎಂಬುದು ನತಾಶಾ ಅವರ ಅಭಿಪ್ರಾಯ. ಇದೀನ ನತಾಶಾ ಪ್ರಯಾಗ್​ ಪೋಸ್ಟ್ ಮಾಡಿರುವ ಫೋಟೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಮೊದಲು ನರಿಯ ಕೂಗು ಕೇಳಿತು. ನಾವು ಹುಡುಕಿದೆವು. ಮೊದಲು ಅಡುಗೆ ಮನೆ, ಕಿಟಕಿಯ ಹತ್ತಿರ ಪರೀಕ್ಷಿಸಿ, ತಿರುಗುವಷ್ಟರಲ್ಲಿ ವಾಷಿಂಗ್​ ಮಷಿನ್​ನಲ್ಲಿ ಒಂದು ಕಿವಿ ಕಂಡುಬಂತು. ಪೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ನರಿ ಇರುವುದು ಗೊತ್ತಾಯಿತು. ಅದನ್ನು ನೋಡಿ ನಾವು ಸಿಕ್ಕಾಪಟೆ ಕಂಗಾಲಾದೆವು. ನಂತರ ಅದನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸಲಾಗಿದೆ ಎಂದು ನತಾಶಾ ಆ ಸಂದರ್ಭವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ

Published On - 10:49 pm, Sat, 29 May 21

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ