AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು.

ವಾಷಿಂಗ್​ ಮಷಿನ್​ನಿಂದ ಇಣುಕಿದ ಮುಖ ನೋಡಿ ಹೌಹಾರಿದ ದಂಪತಿ; ಕಿವಿಯಷ್ಟೇ ಮೊದಲು ಕಾಣಿಸಿತ್ತು !
ವಾಷಿಂಗ್​ ಮಷಿನ್​ನಲ್ಲಿ ಕಂಡುಬಂದ ಪ್ರಾಣಿ
Lakshmi Hegde
|

Updated on:May 29, 2021 | 10:49 PM

Share

ಮಹಿಳೆಯೊಬ್ಬರು ತಮ್ಮ ಮನೆಯ ವಾಷಿಂಗ್​ ಮಷಿನ್​ ಬಾಗಿಲು ತೆಗೆಯುತ್ತಿದ್ದಂತೆ ಹೊರಬಂದ ಮುಖವನ್ನು ನೋಡಿ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ವಾಷಿಂಗ್​ ಮಷಿನ್​ನಲ್ಲಿ ಬೆಕ್ಕು ಹೊಕ್ಕುವುದು ಸಾಮಾನ್ಯ. ಆದರೆ ಈ ಮಹಿಳೆಯನ್ನು ಹೆದರಿಸಿದ್ದು ಬೆಕ್ಕಲ್ಲ !

ಘಟನೆ ನಡೆದಿದ್ದು ಲಂಡನ್​ನಲ್ಲಿ. ಮಹಿಳೆ ಟ್ವಿಟರ್​​ನಲ್ಲಿ ತಮಗಾದ ಅನುಭವ ಹೇಳಿಕೊಂಡಿದ್ದಲ್ಲದೆ, ವಾಷಿಂಗ್​ ಮಷಿನ್​ ಒಳಗಿನಿಂದ ಮುಖವನ್ನಷ್ಟೇ ಹೊರಹಾಕಿ ಇಣುಕುತ್ತ ನಿಂತ ನರಿಯ ಫೋಟೋವನ್ನೂ ಅಪ್ಲೋಡ್ ಮಾಡಿದ್ದಾರೆ.

ಮಹಿಳೆಯ ಹೆಸರು ನತಾಶಾ ಪ್ರಯಾಗ್​. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್​ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು. ಆಗ ಬಹುಶಃ ಈ ನರಿ ಒಳ ಸೇರಿರಬೇಕು ಎನ್ನುತ್ತಾರೆ ನತಾಶಾ. ಅದು ಹೇಗೋ ಒಳ ಸೇರಿದ ನರಿ, ಬಳಿಕ ಅಡಗಲು ಒಂದು ಸುರಕ್ಷಿತ ಸ್ಥಳವನ್ನು ಹುಡುಕಿದೆ. ಆಗ ಕಾಣಿಸಿದ ವಾಷಿಂಗ್​ ಮಷಿನ್​ನಲ್ಲಿ ಹೊಕ್ಕಿದೆ ಎಂಬುದು ನತಾಶಾ ಅವರ ಅಭಿಪ್ರಾಯ. ಇದೀನ ನತಾಶಾ ಪ್ರಯಾಗ್​ ಪೋಸ್ಟ್ ಮಾಡಿರುವ ಫೋಟೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಮೊದಲು ನರಿಯ ಕೂಗು ಕೇಳಿತು. ನಾವು ಹುಡುಕಿದೆವು. ಮೊದಲು ಅಡುಗೆ ಮನೆ, ಕಿಟಕಿಯ ಹತ್ತಿರ ಪರೀಕ್ಷಿಸಿ, ತಿರುಗುವಷ್ಟರಲ್ಲಿ ವಾಷಿಂಗ್​ ಮಷಿನ್​ನಲ್ಲಿ ಒಂದು ಕಿವಿ ಕಂಡುಬಂತು. ಪೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ನರಿ ಇರುವುದು ಗೊತ್ತಾಯಿತು. ಅದನ್ನು ನೋಡಿ ನಾವು ಸಿಕ್ಕಾಪಟೆ ಕಂಗಾಲಾದೆವು. ನಂತರ ಅದನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸಲಾಗಿದೆ ಎಂದು ನತಾಶಾ ಆ ಸಂದರ್ಭವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ

Published On - 10:49 pm, Sat, 29 May 21

Follow Us
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’