AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ

ಇದೀಗ ಮೆಹುಲ್​ ಚೋಸ್ಕಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ.

ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ
ಮೆಹುಲ್ ಚೋಸ್ಕಿ
Lakshmi Hegde
|

Updated on:May 30, 2021 | 1:14 PM

Share

ಡೊಮಿನಿಕಾದಲ್ಲಿ ಅರೆಸ್ಟ್​ ಆಗಿದ್ದ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್​ ಚೋಕ್ಸಿ ಅವರ ಕೆಲವು ಫೋಟೋಗಳು ವೈರಲ್​ ಆಗಿವೆ. ಆಂಟುಗುವಾ ಪೌರತ್ವ ಪಡೆದು, ಅಲ್ಲಿಯೇ ನೆಲೆಸಿದ್ದ ಚೋಸ್ಕಿ ತನ್ನ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಡೊಮಿನಿಕಾಕ್ಕೆ ಪರಾರಿಯಾಗಿದ್ದರು. ರಾಷ್ಟ್ರವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಅಲ್ಲಿನ ಪೊಲೀಸರು ಬಂಧಿಸಿದ್ದರು.

ಇದೀಗ ಮೆಹುಲ್​ ಚೋಕ್ಸಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ. ಕಬ್ಬಿಣದ ಗೇಟ್​​ನ ಹಿಂದೆ ಚೋಸ್ಕಿ ನಿಂತಿರುವ ಫೋಟೋ ಸಿಕ್ಕಿದ್ದು, ಅವರ ಕಣ್ಣೆಲ್ಲ ಕೆಂಪಾಗಿದ್ದನ್ನು ಫೋಟೋದಲ್ಲಿ ನೋಡಬಹುದು. ಅವರ ಕೈ ಮತ್ತು ಮಣಿಕಟ್ಟಿನ ಬಳಿಯೂ ಗಾಯಗಳಾಗಿವೆ.

ಮೆಹುಲ್​ ಚೋಕ್ಸಿ ಪರ ವಕೀಲರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚೋಸ್ಕಿಯನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಅಪಹರಿಸಿ, ಒತ್ತಾಯ ಪೂರ್ವಕವಾಗಿ ಡೊಮಿನಿಕಾಕ್ಕೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಹೋದ ಮೇಲೆ ಕೆಟ್ಟದಾಗಿ ಹೊಡೆಯಲಾಗಿದೆ. ಹೀಗಾಗಿ ಅವರ ಮೈಮೇಲೆಲ್ಲ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಮೆಹುಲ್​ ಚೋಕ್ಸಿ ಸದ್ಯ ಕ್ವಾರಂಟೈನ್​ನಲ್ಲಿ ಇದ್ದಾರೆ. ಜೂ.2ರವರೆಗೂ ಚೋಸ್ಕಿಯನ್ನು ಯಾವುದೇ ಬೇರೆ ದೇಶಗಳಿಗೆ ವಾಪಸ್ ಕಳಿಸುವಂತಿಲ್ಲ ಎಂದು ಡೊಮಿನಿಕಾದ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ. ಭಾರತದಲ್ಲಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,500 ಕೋಟಿ ರೂ.ವಂಚನೆ ಕೇಸ್​​ನಲ್ಲಿ ಚೋಕ್ಸಿ ಕೂಡ ಆರೋಪಿಯಾಗಿದ್ದಾರೆ. ಇಲ್ಲಿಂದ ತಲೆಮರೆಸಿಕೊಂಡು ಹೋಗಿದ್ದ ಅವರು 2018ರಿಂದಲೂ ಆಂಟಿಗುವಾದಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ: ಮೆಹುಲ್ ಚೋಸ್ಕಿ ಇಲ್ಲಿಗೆ ಬರೋದು ಬೇಡ ಎನ್ನುತ್ತಿರುವ ಆಂಟಿಗುವಾ ಪ್ರಧಾನಿ; ‘ನಾವು ಭಾರತಕ್ಕೆ ಕಳಿಸೋಲ್ಲ..’ ಅಂತಿದೆ ಡೊಮಿನಿಕಾ ಆಡಳಿತ

Published On - 8:59 am, Sun, 30 May 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು