AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್​ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !

ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್​ ಕುಮಾರ್​ ಬಸಕ್​ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು.1970ರ ಅವಧಿಯಲ್ಲಂತೂ ಬಿರನ್​ ಕುಮಾರ್​ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು.

ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್​ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !
ಪ್ರಧಾನಿಗೆ ವಿಶೇಷ ಉಡುಗೊರೆ ನೀಡಿದ ಬಿರನ್​ ಕುಮಾರ್ ಬಿಸಕ್​
TV9 Web
| Edited By: |

Updated on: Nov 13, 2021 | 12:48 PM

Share

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿರನ್​ ಕುಮಾರ್ ಬಸಕ್ (Biren Kumar Basak)​ ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೊಂದು ವಿಶೇಷ ಉಡುಗೋರೆ ನೀಡಿದ್ದಾರೆ. ಅದನ್ನು ನೋಡಿ ನರೇಂದ್ರ ಮೋದಿಯವರು ಫುಲ್​ ಖುಷಿಯಾಗಿ, ತಮ್ಮ ಸೋಷಿಯಲ್ ಮೀಡಿಯಾ(Social Media)ಗಳಲ್ಲೂ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬಿರನ್​ ಕುಮಾರ್ ಬಸಕ್​ ಪ್ರಧಾನಿಯವರಿಗೆ ನೀಡಿದ ಉಡುಗೊರೆ ಏನಪ್ಪ ಅಂದರೆ ಅದೊಂದು ಸೀರೆ. ಈ ಸೀರೆಯ ಮೇಲೆ, ಪ್ರಧಾನಿ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಪೇಂಟಿಂಗ್​ ಮಾಡಿದ್ದು ತುಂಬ ಗಮನಸೆಳೆಯುತ್ತಿದೆ.  

ಬಿರನ್​ ಕುಮಾರ್​ ಅವರು ನೀಡಿದ ಈ ವಿಶೇಷ ಉಡುಗೊರೆಯನ್ನು ನೋಡಿದ ಪ್ರಧಾನಿ ಮೋದಿ ತುಂಬ ಖುಷಿಯಿಂದ ಟ್ವೀಟ್​ ಮಾಡಿಕೊಂಡಿದ್ದಾರೆ. ಬಿರನ್​ ಕುಮಾರ್ ಬಸಕ್​ ಅವರು ಪಶ್ಚಿಮ ಬಂಗಾಳದ ನಾದಿಯಾದವರು. ಅವರೊಬ್ಬ ಹೆಸರಾಂತ ನೇಕಾರರು. ಸೀರೆಗಳ ಮೇಲೆ ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆಯ ಚಿತ್ರಗಳನ್ನು ಚಿತ್ರಿಸುವುದು ಅವರ ವಿಶೇಷತೆ. ಈ ಬಾರಿ ಪದ್ಮಶ್ರೀ ಪುರಸ್ಕೃತರಾಗಿದ್ದು, ನಾನು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಸೀರೆ ಉಡುಗೊರೆಯನ್ನಾಗಿ ನೀಡಿದರು. ನನಗಂತೂ ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.

ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್​ ಕುಮಾರ್​ ಬಸಕ್​ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು 1970ರ ಅವಧಿಯಲ್ಲಂತೂ ಬಿರನ್​ ಕುಮಾರ್​ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು. ನಾದಿಯಾದಿಂದ ರೈಲಿನ ಮೂಲಕ ಕೋಲ್ಕತ್ತಕ್ಕೆ ಹೋಗುತ್ತಿದ್ದರು. ಆಗಂತೂ ಅವರು ಕೇವಲ 15-30 ರೂಪಾಯಿಯೂ ಸೀರೆ ಮಾರಿದ್ದುಂಟು. ಈಗ ಅವರ ವಾರ್ಷಿಕ ವಹಿವಾಟು  25 ಕೋಟಿ ರೂ.ಗೂ ಅಧಿಕ. ಸುಮಾರು 5000 ಜನರು ಅವರ ಬಳಿ ಕೆಲಸ ಮಾಡುತ್ತಿದ್ದಾರೆ.  ಮಮತಾ ಬ್ಯಾನರ್ಜಿ, ಸೌರವ್​ ಗಂಗೂಲಿ, ಗಾಯಕರಾದ ಉಸ್ತಾದ್​ ಅಮ್ಜದ್​ ಅಲಿ ಖಾನ್, ಆಶಾ ಬೋಸ್ಲೆ, ಲತಾ ಮಂಗೇಶ್ಕರ್​ರಂಥ ಹಲವು ಗಣ್ಯರು ಬಿರನ್​ ಕುಮಾರ್ ಅವರ ಗ್ರಾಹಕರಾಗಿದ್ದಾರೆ.

ಇದನ್ನೂ ಓದಿ: ರೈತರ ತೀವ್ರ ವಿರೋಧದ ಮಧ್ಯೆ ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ; ಎರಡೇ ದಿನದಲ್ಲಿ 5 ಕಿಲೋ ಮೀಟರ್ ಕಚ್ಚಾ ರಸ್ತೆ ನಿರ್ಮಾಣ

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ