AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಫೇಲ್​ ಆದ ಫೋಟೋಶೂಟ್​; ಡ್ರೆಸ್​ ಎಳೆಯುತ್ತಿದ್ದಂತೆ ನದಿಗೆ ಬಿದ್ದ ಯುವತಿ

ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದಳು.  ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್​ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Video: ಫೇಲ್​ ಆದ ಫೋಟೋಶೂಟ್​; ಡ್ರೆಸ್​ ಎಳೆಯುತ್ತಿದ್ದಂತೆ ನದಿಗೆ ಬಿದ್ದ ಯುವತಿ
ಫೋಟೋಶೂಟ್​ ಮಾಡುತ್ತಿದ್ದ ಯುವತಿ
TV9 Web
| Edited By: |

Updated on: Nov 13, 2021 | 5:33 PM

Share

ಫೋಟೋ ಶೂಟ್(Photo Shoot)​ನಂಥ ಸಂದರ್ಭದಲ್ಲಿ ಆಗುವ ಕೆಲವು ಅವಾಂತರಗಳು ನಿಜಕ್ಕೂ ನಗುತರಿಸುತ್ತವೆ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುವ ಅಂಥ ವಿಡಿಯೋಗಳು ಬಹುಬೇಗನೇ ನೆಟ್ಟಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಹಾಗೇ, ಈಗ ಯುವತಿಯೊಬ್ಬಳು ಫೋಟೋ ತೆಗೆಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರಂತೂ ಅದನ್ನು ನೋಡಿ ವಿಧವಿಧದ ಕಾಮೆಂಟ್ ಮಾಡುತ್ತಿದ್ದಾರೆ. 

ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದಳು.  ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್​ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಯುವತಿ ಮತ್ತು ಆಕೆಯ ಜತೆಗಿದ್ದವರು ತೆಗೆದುಕೊಂಡ ಎಚ್ಚರಿಕೆ ಸಾಕಾಗದ ಕಾರಣ ಆ ಫೋಟೋ ಶೂಟ್ ಸಂಪೂರ್ಣ ವಿಫಲವಾಗಿದೆ. ಯುವತಿ ಸೀದಾ ಹೋಗಿ ನದಿಯಲ್ಲಿ ಧೊಪ್ಪನೆ ಬಿದ್ದಿದ್ದಾಳೆ. ಆದರೆ ಅದೃಷ್ಟವಶಾತ್ ಏನೂ ಪೆಟ್ಟಗಾದ ಕಾರಣ ಅವಳು ದೊಡ್ಡದಾಗಿ ನಕ್ಕಿದ್ದಾಳೆ. ಇದೂ ಕೂಡ ಫನ್ನಿ ವಿಡಿಯೋ ಎನ್ನಿಸಿಕೊಂಡಿದ್ದಾರೆ. ಆದರೆ ಅಪಾಯವಾಗಿದ್ದರೆ ಇದೊಂದು ದುರಂತವಾಗಿ ಮಾರ್ಪಡುತ್ತಿತ್ತು.

ಯುವತಿ ಫುಲ್​ ಮೇಕಪ್​ ಮಾಡಿಕೊಂಡಿದ್ದಾಳೆ. ಉದ್ದನೆಯ, ಗುಲಾಬಿ ಬಣ್ಣದ ಡ್ರೆಸ್​ ತೊಟ್ಟು ನದಿಯ ದಡದ ಮೇಲೆ ಉಯ್ಯಾಲೆಯಲ್ಲಿ ಕುಳಿತಿದ್ದಾಳೆ. ಆಕೆಯ ಹಿಂದೆ ಉದ್ದವಾಗಿ ನೆಲದ ಮೇಲೆ ಬಿದ್ದಿರುವ ಉಡುಪನ್ನು ದಡದ ಮೇಲೆ ನಿಂತವನ್ನೊಬ್ಬ ಒಮ್ಮೆ ಹಾರಿಸುತ್ತಾನೆ. ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂಬಂತೆ ಆಕೆ ಉಯ್ಯಾಲೆಯಿಂದ ನೀರಿಗೆ ಬೀಳುತ್ತಾಳೆ. ಆ ಯುವತಿ ತುಂಬ ದಪ್ಪಗೆ ಇದ್ದಿದ್ದರಿಂದಲೇ ಬ್ಯಾಲೆನ್ಸ್​ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಡಿಯೋ ನೋಡಿದ ಬಹುತೇಕರ ಅಭಿಪ್ರಾಯ. ಆದರೆ ನದಿಯ ಆ ಭಾಗದಲ್ಲಿ ಆಳವಿಲ್ಲದ ಕಾರಣ ಹೆಚ್ಚಿಗೆ ಅಪಾಯ ಉಂಟಾಗಲಿಲ್ಲ.

ಇದನ್ನೂ ಓದಿ: ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?

Follow Us
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!