AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಫೇಲ್​ ಆದ ಫೋಟೋಶೂಟ್​; ಡ್ರೆಸ್​ ಎಳೆಯುತ್ತಿದ್ದಂತೆ ನದಿಗೆ ಬಿದ್ದ ಯುವತಿ

ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದಳು.  ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್​ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Video: ಫೇಲ್​ ಆದ ಫೋಟೋಶೂಟ್​; ಡ್ರೆಸ್​ ಎಳೆಯುತ್ತಿದ್ದಂತೆ ನದಿಗೆ ಬಿದ್ದ ಯುವತಿ
ಫೋಟೋಶೂಟ್​ ಮಾಡುತ್ತಿದ್ದ ಯುವತಿ
TV9 Web
| Edited By: |

Updated on: Nov 13, 2021 | 5:33 PM

Share

ಫೋಟೋ ಶೂಟ್(Photo Shoot)​ನಂಥ ಸಂದರ್ಭದಲ್ಲಿ ಆಗುವ ಕೆಲವು ಅವಾಂತರಗಳು ನಿಜಕ್ಕೂ ನಗುತರಿಸುತ್ತವೆ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುವ ಅಂಥ ವಿಡಿಯೋಗಳು ಬಹುಬೇಗನೇ ನೆಟ್ಟಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಹಾಗೇ, ಈಗ ಯುವತಿಯೊಬ್ಬಳು ಫೋಟೋ ತೆಗೆಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರಂತೂ ಅದನ್ನು ನೋಡಿ ವಿಧವಿಧದ ಕಾಮೆಂಟ್ ಮಾಡುತ್ತಿದ್ದಾರೆ. 

ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದಳು.  ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್​ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಯುವತಿ ಮತ್ತು ಆಕೆಯ ಜತೆಗಿದ್ದವರು ತೆಗೆದುಕೊಂಡ ಎಚ್ಚರಿಕೆ ಸಾಕಾಗದ ಕಾರಣ ಆ ಫೋಟೋ ಶೂಟ್ ಸಂಪೂರ್ಣ ವಿಫಲವಾಗಿದೆ. ಯುವತಿ ಸೀದಾ ಹೋಗಿ ನದಿಯಲ್ಲಿ ಧೊಪ್ಪನೆ ಬಿದ್ದಿದ್ದಾಳೆ. ಆದರೆ ಅದೃಷ್ಟವಶಾತ್ ಏನೂ ಪೆಟ್ಟಗಾದ ಕಾರಣ ಅವಳು ದೊಡ್ಡದಾಗಿ ನಕ್ಕಿದ್ದಾಳೆ. ಇದೂ ಕೂಡ ಫನ್ನಿ ವಿಡಿಯೋ ಎನ್ನಿಸಿಕೊಂಡಿದ್ದಾರೆ. ಆದರೆ ಅಪಾಯವಾಗಿದ್ದರೆ ಇದೊಂದು ದುರಂತವಾಗಿ ಮಾರ್ಪಡುತ್ತಿತ್ತು.

ಯುವತಿ ಫುಲ್​ ಮೇಕಪ್​ ಮಾಡಿಕೊಂಡಿದ್ದಾಳೆ. ಉದ್ದನೆಯ, ಗುಲಾಬಿ ಬಣ್ಣದ ಡ್ರೆಸ್​ ತೊಟ್ಟು ನದಿಯ ದಡದ ಮೇಲೆ ಉಯ್ಯಾಲೆಯಲ್ಲಿ ಕುಳಿತಿದ್ದಾಳೆ. ಆಕೆಯ ಹಿಂದೆ ಉದ್ದವಾಗಿ ನೆಲದ ಮೇಲೆ ಬಿದ್ದಿರುವ ಉಡುಪನ್ನು ದಡದ ಮೇಲೆ ನಿಂತವನ್ನೊಬ್ಬ ಒಮ್ಮೆ ಹಾರಿಸುತ್ತಾನೆ. ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂಬಂತೆ ಆಕೆ ಉಯ್ಯಾಲೆಯಿಂದ ನೀರಿಗೆ ಬೀಳುತ್ತಾಳೆ. ಆ ಯುವತಿ ತುಂಬ ದಪ್ಪಗೆ ಇದ್ದಿದ್ದರಿಂದಲೇ ಬ್ಯಾಲೆನ್ಸ್​ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಡಿಯೋ ನೋಡಿದ ಬಹುತೇಕರ ಅಭಿಪ್ರಾಯ. ಆದರೆ ನದಿಯ ಆ ಭಾಗದಲ್ಲಿ ಆಳವಿಲ್ಲದ ಕಾರಣ ಹೆಚ್ಚಿಗೆ ಅಪಾಯ ಉಂಟಾಗಲಿಲ್ಲ.

ಇದನ್ನೂ ಓದಿ: ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ