AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video; ಬ್ಯಾಡ್ಮಿಂಟನ್​ ಆಡುವ ರೊಬೋಟ್; ಆಟಗಾರರನ್ನೇ ಮೀರಿಸುವ ಜಾಣ್ಮೆ ಈ ರೊಬೋಟ್​ನದ್ದು

ಗುಜರಾತ್​ ಸೈನ್ಸ್​ ಸಿಟಿಯಲ್ಲಿ ಬ್ಯಾಡ್ಮಿಂಟನ್​ ಆಡುವ ರೊಬೋಟ್​ ಒಂದನ್ನು ತಯಾರಿಸಲಾಗಿದೆ. ರೊಬೋಟ್​ ಬ್ಯಾಡ್ಮಿಂಟನ್​​ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Viral Video; ಬ್ಯಾಡ್ಮಿಂಟನ್​ ಆಡುವ ರೊಬೋಟ್; ಆಟಗಾರರನ್ನೇ ಮೀರಿಸುವ ಜಾಣ್ಮೆ ಈ ರೊಬೋಟ್​ನದ್ದು
ಬ್ಯಾಡ್ಮಿಂಟನ್​ ಆಡುವ ರೊಬೋಟ್​
Follow us
TV9 Web
| Updated By: Pavitra Bhat Jigalemane

Updated on: Jan 30, 2022 | 12:58 PM

ತಂತ್ರಜ್ಞಾನ (Technology) ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತವೆ. ಮಾನವನ ಕೆಲಸವನ್ನು ಸುಲಭ ಮಾಡಲು ಇಷ್ಟು ದಿನ ಸಾಕಷ್ಟು ಆಧುನಿಕ ಉಪಕರಣಗಳು ಆವಿಷ್ಕಾರಗೊಂಡಿದೆ. ಇತ್ತೀಚೆಗಂತೂ ಅಡುಗೆ ಮಾಡುವ, ಸರ್ವಿಂಗ್​ ಮಾಡುವ ರೋಬೋಟ್​ಗಳೂ ತಯಾರಾಗಿವೆ. ಇವು ಮನುಷ್ಯನ ಬದುಕನ್ನು ದಿನದಿಂದ ದಿನಕ್ಕೆ ಸರಳಗೊಳಿಸುತ್ತಿವೆ. ಇದೀಗ ಗುಜರಾತ್​ ಸೈನ್ಸ್​ ಸಿಟಿಯಲ್ಲಿ ಬ್ಯಾಡ್ಮಿಂಟನ್​ ಆಡುವ ರೊಬೋಟ್ (Robot)​ ಒಂದನ್ನು ತಯಾರಿಸಲಾಗಿದೆ. ಆಟವಾಡಲು ಶಕ್ತಿ, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು ಎನ್ನುವುದು ಇಷ್ಟು ದಿನದ ವ್ಯಾಖ್ಯಾನವಾಗಿತ್ತು. ಆದರೆ ಈಗ ರೊಬೋಟ್​ ಎಲ್ಲವನ್ನೂ ಬದಿಗೊತ್ತಿ ಕೃತಕ ಬುದ್ದಿಯ​ (Artificial Intelligence, )ಮೂಲಕವೂ ಕೂಡ ಆಟವನ್ನು ಆಡಬಹುದು ಎಂದು ತೊರಿಸಿಕೊಟ್ಟಿದೆ. ಸದ್ಯ ರೊಬೋಟ್​ ಬ್ಯಾಡ್ಮಿಂಟನ್​​ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಹಮದಾಬಾದ್​ನಲ್ಲಿ ಗುಜರಾತ್​ ಸೈನ್ಸ್​ ಸಿಟಿಯಲ್ಲಿ ತಯಾರಿಸಿದ ರೊಬೋಟ್​ ಬ್ಯಾಡ್ಮಿಂಟನ್​ ಆಡುವುದನ್ನು  ಚಿತ್ರೀಕರಣ ಮಾಡಲಾಗಿದೆ. ಇದರ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವಿಡಿಯೋದಲ್ಲಿ ಒಂದು ಕಡೆ ಆಟಗಾರ ನಿಂತಿರುತ್ತಾನೆ ಇನ್ನೊಂದು ಕಡೆ ರೊಬೋಟ್​ ನಿಂತಿರುತ್ತದೆ. ಆಟಗಾರ ಕೊಟ್ಟ ಶಾಟ್​ಗೆ ರೊಬೋಟ್​ ಕೂಡ ಸರಿಯಾಗಿ ಶಾಟ್ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ಕೆಲವರು ಸ್ನೇಹಿತರಿಲ್ಲದ ವ್ಯಕ್ತಿಗಳಿಗೆ ಈ ರೊಬೋಟ್​ ಒಳ್ಳೆಯ ಸ್ನೇಹಿತನಾಗಿ ಬ್ಯಾಡ್ಮಿಂಟನ್​ಗೆ ಜತೆಯಾಗಲಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಈ ಮೊದಲು ಗುಜರಾತ್​ನ ಸೈನ್ಸ್​ ಸಿಟಿ ರೊಬೊಟ್​ನ ಡೆಮೋ ವಿಡಿಯೊವನ್ನು ಯುಟ್ಯೂಬ್​ನಲ್ಲಿ ಹಂಚಿಕೊಂಡಿತ್ತು. 1 ನಿಮಿಷದ ವಿಡಿಯೋದಲ್ಲಿ ಮಾನವ ಮತ್ತು ರೊಬೋಟ್​ ನಡುವಿನ ಪಂದ್ಯವನ್ನು ಹೇಗೆ ಆಯೋಜಿಸಬಹುದು ಎನ್ನುವುದನ್ನು ವಿವರಿಸಲಾಗಿದೆ. ರೊಬೋಟ್​ ತನ್ನ  ಎಲೆಕ್ಟ್ರಾನಿಕ್​ ಕಣ್ಣುಗಳಿಂದ ಶೆಟಲ್​ಕಾಕ್​ ಅನ್ನು ಗುರುತಿಸುತ್ತದೆ. ಸೆನ್ಸಾರ್​ ಮೂಲಕ  ಕ್ರೀಡಾಂಗಣದ ಸುತ್ತ ತಿರುಗುತ್ತದೆ ಎಂದು  ಗುಜರಾತ್​ನ ಸೈನ್ಸ್​ ಸಿಟಿ ತಿಳಿಸಿದೆ.

ಇದನ್ನೂ ಓದಿ:

ಕಚ್ಚಾ ಬಾದಾಮ್ ಹಾಡಿದವರು ಇವರೇ ನೋಡಿ; ಭುವನ್ ಬದ್ಯಕರ್

ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್