Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್​

Breathless Song : ಶಂಕರ್​ ಮಹಾದೇವನ್​ ಹೇಗೆ ಹಾಡಿದ್ದಾರೋ ಹಾಗೆಯೇ ಎಜಾಝ್ ಇದನ್ನು ಪ್ರಸ್ತುತಪಡಿಸಿದ್ಧಾರೆ. ಇನ್ನು ಹೋಟೆಲ್​ಗೆ ಹೋದರೆ ವೇಟರ್​ ಈ ಹಾಡನ್ನು ಹೇಗೆ ಹಾಡಬಹುದು ಎಂಬುದನ್ನು ಪ್ರಿನ್ಸಿ ಹಾಡಿದ್ಧಾರೆ.

Viral: ಶಂಕರ್​ ಮಹಾದೇವನ್ ಬ್ರೆಥ್​ಲೆಸ್​ ಸಾಂಗ್;​ ಎಜಾಝ್​ ಮತ್ತು ಪ್ರಿನ್ಸಿ ವರ್ಷನ್​
ಎಜಾಝ್​ ಹೈದರ್​, ಶಂಕರ್ ಮಹಾದೇವನ್ ಮತ್ತು ಪ್ರಿನ್ಸಿ ಪಾರೀಖ್
Follow us
|

Updated on:Jul 10, 2023 | 10:41 AM

Shankar Mahadevan : Breathless song ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ ಇದೀಗ ವೈರಲ್ ಆಗಿರುವ ಇನ್​ಸ್ಟಾಗ್ರಾಂನ ರೀಲ್​​ಗಳು. 1998ರಲ್ಲಿ ಈ ಆಲ್ಬಮ್​ ಬಿಡುಗಡೆಯಾಗಿತ್ತು. ಜಾವೇದ್ ಅಖ್ತರ್ (Javed Akhtar)​ ಸಾಹಿತ್ಯ ಮತ್ತು ಶಂಕರ್ ಮಹಾದೇವನ್ ಸ್ವತಃ ಸಂಗೀತ ಸಂಯೋಜನೆ ಮಾಡಿ ಹಾಡಿದ್ದರು. ಒಂದೇ ಉಸಿರಿನಲ್ಲಿ ಈ ಇಡೀ ಹಾಡು ಸಂಗೀತಪ್ರೇಮಿಗಳನ್ನು ದಂಗುಬಡಿಸಿತ್ತು. ಎಷ್ಟೋ ವರ್ಷ ಈ ಹಾಡಿನ ಗುಂಗು ಹಿಡಿಸಿತ್ತು. ಇದೀಗ ಈ ಹಾಡನ್ನು ನೆನಪಿಸಿದ್ಧಾರೆ ಇನ್​ಸ್ಟಾಗ್ರಾಂನ ಗಾಯಕ ಎಜಾಝ್​ ಹೈದರ್ ಮತ್ತು ಕಲಾವಿದೆ ಪ್ರಿನ್ಸಿ ಪಾರೀಖ್​.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Ejaz Haider (@ejazhaidermusic)

ಎಜಾಝ್ ಅವರ ಈ ರೀಲ್​ ಅನ್ನು ಈತನಕ ಸುಮಾರು 11 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 2 ಮಿಲಿಯನ್​ ಜನರು ಇಷ್ಟಪಟ್ಟಿದ್ದಾರೆ. ರೆಸ್ಪೆಕ್ಟ್ ಬಟನ್​ ಎಲ್ಲಿದೆ? ಎಂದು ಕೇಳಿದ್ಧಾರೆ ಅನೇಕರು. ನೀವು ನಮ್ಮೆಲ್ಲರ ಹೃದಯವನ್ನು ಗೆದ್ದಿದ್ದೀರಿ ಸರ್​ ಎಂದು ಹಲವರು ಮನದುಂಬಿ ಹೇಳಿದ್ದಾರೆ. ನಿಮ್ಮ ಹಾಡಿನಿಂದ ಭೂಮಿಯ ಮೇಲೆ ಆಮ್ಲಜನಕದ ಮಟ್ಟ ಹೆಚ್ಚಿದೆ, ಗ್ರೇಟ್​! ಎಂದಿದ್ದಾರೆ ಮತ್ತೊಬ್ಬರು. ಇನ್ನು ಕಲಾವಿದೆ ಪ್ರಿನ್ಸಿ ಪಾರೀಖ್​, ಹೋಟೆಲ್​ನಲ್ಲಿ ವೇಟರ್​ ಈ ಹಾಡನ್ನು ಹಾಡಿದರೆ ಹೇಗಿರುತ್ತದೆ ಎನ್ನುವುದನ್ನು ಪ್ರಸ್ತುಪಡಿಸಿದ್ದಾರೆ. ಈ ಕೆಳಗಿನ ವಿಡಿಯೋದಲ್ಲಿ ಕೇಳಿ, ನೋಡಿ.

ಹೋಟೆಲ್​ನಲ್ಲಿಯ ತಿಂಡಿತಿನಿಸುಗಳನ್ನು ಈ ಗತಿಯಲ್ಲಿ ವೇಟರ್​ ಪ್ರಸ್ತುತ ಪಡಿಸಿದರೆ ಕೊನೆಯಲ್ಲಿ ಪ್ರಿನ್ಸಿ ಬರೀ ಒಂದು ಗ್ಲಾಸ್​ ನೀರು ಕೇಳಿಬಿಡುತ್ತಾರೆ! ಈ ವಿಡಿಯೋ ಅನ್ನು ಸುಮಾರು 1.5 ಲಕ್ಷ ಜನರು ಮೆಚ್ಚಿದ್ದಾರೆ. ನೀವು ವೇಟರ್​ ಬದಲಾಗಿ ಲಾಯರ್ ಥರ ಕಾಣುತ್ತಿದ್ದೀರಿ ಎಂದು ಹೇಳಿದ್ಧಾರೆ ಒಬ್ಬರು. ಈ ಹಾಡು ನನ್ನ ಫೇವರಿಟ್​. ಈಗಲೂ ಈ ಹಾಡನ್ನು ನಾನು ಕೇಳುತ್ತೇನೆ ಎಂದು ಕೆಲವರು ಹೇಳಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:37 am, Mon, 10 July 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ