Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಡಿಯೋ ಶೂಟಿಂಗ್​ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು: ವೀಡಿಯೋ ವೈರಲ್​

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟಾ ಎಂಬ 21 ವರ್ಷದ ಯುವ ಗಾಯಕಿ ಬ್ಲಾಕ್ ಆ್ಯಂಡ್​ ವೈಟ್​ ಮೋಡ್​​ನಲ್ಲಿ ವೀಡಿಯೋ ಶೂಟ್​ ಮಾಡಿಸಿಕೊಳ್ಳುತ್ತಿದ್ದರು.

ವೀಡಿಯೋ ಶೂಟಿಂಗ್​ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು: ವೀಡಿಯೋ ವೈರಲ್​
ಗಾಯಕಿ ಮೆಟಾ
Follow us
TV9 Web
| Updated By: Pavitra Bhat Jigalemane

Updated on: Dec 26, 2021 | 5:19 PM

ಕೆಲವೊಮ್ಮೆ ಪ್ರಾಣಿಗಳ ಜತೆ ಶೂಟಿಂಗ್​ ಅಥವಾ ಫೋಟೋಶೂಟ್​ ಮಾಡಿಕೊಳ್ಳುವ ವೇಳೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಎಷ್ಟು ಮುನ್ನೆಚ್ಚರಿಕೆವಹಿಸಿದರೂ ಕಡಿಮೆಯೇ. ಇದೀಗ ಅದೇ ರೀತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟಾ ಎಂಬ 21 ವರ್ಷದ ಯುವ ಗಾಯಕಿ ಬ್ಲಾಕ್ ಆ್ಯಂಡ್​ ವೈಟ್​ ಮೋಡ್​​ನಲ್ಲಿ ವೀಡಿಯೋ ಶೂಟ್​ ಮಾಡಿಸಿಕೊಳ್ಳುತ್ತಿದ್ದರು. ಅದು ಹಾವನ್ನು ಮೈಮೇಲೆ ಬಿಟ್ಟುಕೊಂಡು ವೀಡಿಯೋ ಶೂಟ್​ ನಡೆಸುವ ವೇಳೆ ಹಾವು ಗಾಯಕಿಯ ಮುಖಕ್ಕೆ ಕಚ್ಚಿದೆ. ಅದೃಷ್ಟವಶಾತ್​ ಗಾಯಕಿಗೆ ಯಾವುದೇ ಅಪಾಯವಾಗಲಿಲ್ಲ. ಗಾಯಕಿ ಮೆಟಾ ವಿಡಿಯೋದ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ  ಬ್ಲಾಕ್​ ಆ್ಯಂಡ್​ ವೈಟ್​ ಮೂಡ್​ನಲ್ಲಿ ಕ್ಯಾಮಾರಾ ಆನ್​ ಆಗಿರುತ್ತದೆ.  ಕೆಳಗೆ ಮಲಗಿದ್ದ ಗಾಯಕಿ ಮೆಟಾ ಮೇಲೆ ಮೊದಲು ಕಪ್ಪು ಬಣ್ಣದ ಹಾವನ್ನು ಇರಿಸಲಾಗುತ್ತದೆ. ಬಳಿಕ ಕಪ್ಪು ಹಾವನ್ನು ಸರಿಸಿ ಬಿಳಿಯ ಹಾವನ್ನು ಆಕೆಯ ಮೈಮೇಲೆ ಬಿಡುವ ವೇಳೆ ಕಪ್ಪು ಹಾವು ಮೆಟಾ ಅವರ ಮುಖಕ್ಕೆ ಕಚ್ಚುತ್ತದೆ. ತಕ್ಷಣ ಅವರು ಹಾವಿನಿಂದ ಬಿಡಿಸಿಕೊಂಡು ಮಲಗಿದ್ದ ಜಾಗದಿಂದ ಏಳುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಅಧಿಕೃತ ಇನ್ಸ್ಟಾ ಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Maeta (@maetasworld)

ಸದ್ಯ ವೀಡಿಯೋ ಎಲ್ಲೆಡೆ ಸಖತ್​ ವೈರಲ್​ ಆಗಿದ್ದು 4 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾವು ವಿಷಕಾರಿ ಅಲ್ಲದ ಕಾರಣ ಮೆಟಾ ಯಾವುದೇ ತೊಂದರೆಯಾಗದಂತೆ ಬಚಾವ್​ ಆಗಿದ್ದಾರೆ.  ಮೆಟಾ ಯುಎಸ್​ನ ಯುವ ಗಾಯಕಿಯಾಗಿದ್ದು, ರೋಕ್​ ನೇಷನ್​ಗೆ ಸಹಿ ಮಾಡುವ ಮೂಲಕ ಗಾಯನ ಲೋಕಕ್ಕೆ ಎಂಟ್ರಿಯಾಗಿದ್ದರು. ಹ್ಯಾಬಿಟ್ಸ್​ ಎನ್ನುವ ಮೊದಲ ಆಲ್ಬಂ ಅನ್ನು ಕೂಡ ಮೆಟಾ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:

Poisonous Creature: ಪ್ರಪಂಚದ ಅತ್ಯಂತ ವಿಷಕಾರಿ ಜೀವಿಗಳಾವುವು? ಇಲ್ಲಿದೆ ಕುತೂಹಲಕರ ಮಾಹಿತಿ

ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಫಲಾನುಭವಿಗಳು ಬಡವರಾದರೇನು, ಅವರಿಗೂ ಕಮಿಟ್ಮೆಂಟ್​ಗಳಿರುತ್ತವೆ: ಸರವಣ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ