AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

51 ವರ್ಷ ನೂರಾರು ಕಾರ್ಯಾಚರಣೆಗಳಲ್ಲಿ ಭಾಗಿ; ತಮಿಳುನಾಡಿನ ಆನೆಗೆ ಭಾವನಾತ್ಮಕ ಬೀಳ್ಕೊಡುಗೆ!

2023 ರಲ್ಲಿ ಅರಣ್ಯ ಇಲಾಖೆಗೆ ಕಲೀಂ ಸೇವೆಯ 51 ನೇ ವರ್ಷ ಪೂರ್ತಿಗೊಳಿಸುತ್ತದೆ, ಇದು ಕಲೀಂ ನಿವೃತ್ತಿಗೆ ಸರಿಯಾದ ಸಂದರ್ಭವಾಗಿತ್ತು. ಕಲೀಂ ಸೇವೆಗಳಿಗೆ ಅರ್ಹವಾದ ನಿವೃತ್ತಿಯನ್ನು ತಮಿಳುನಾಡು ಅರಣ್ಯ ಇಲಾಖೆ ಘೋಷಿಸಿತು.

51 ವರ್ಷ ನೂರಾರು ಕಾರ್ಯಾಚರಣೆಗಳಲ್ಲಿ ಭಾಗಿ; ತಮಿಳುನಾಡಿನ ಆನೆಗೆ ಭಾವನಾತ್ಮಕ ಬೀಳ್ಕೊಡುಗೆ!
Tamil Nadu elephant
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on: Mar 19, 2023 | 12:05 PM

Share

ಸತ್ಯಮಂಗಲ: 1972 ರಿಂದ 2023 ರ ವರೆಗೂ ತಮಿಳುನಾಡಿನ ಅರಣ್ಯ ಇಲಾಖೆಯ ನೂರಾರು ಕಾರ್ಯಾಚರಣೆಯಲ್ಲಿ ಮುಖ್ಯ ಅಂಶವಾಗಿದ್ದ ಆನೆ ಕಲೀಂ ಮಾರ್ಚ್ 7 ರಂದು ನಿವೃತ್ತಿ ಹೊಂದಿದೆ. ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಭಾವುಕರಾಗಿದ್ದರು. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನುಬದ್ಧವಾಗಿ ಆನೆಗಳ ಸೆರೆಯನ್ನು ನಿಷೇಧಿಸುವ ಮೊದಲು ಸೆರೆಹಿಡಿಯಲಾದ ಆನೆಗಳ ಅಂತಿಮ ತಂಡಕ್ಕೆ ಕಲೀಂ ಸೇರಿದೆ. 1972ರಲ್ಲಿ ಸತ್ಯಮಂಗಲ ಅರಣ್ಯದಿಂದ ಸೆರೆಹಿಡಿಯಲ್ಪಟ್ಟು ಅನೈಮಲೈ ಬೆಟ್ಟಗಳ ವರಗಾಲಿಯಾರ್ ಶಿಬಿರದಲ್ಲಿ ಆನೆ ಕಲೀಂ ತರಬೇತಿ ಪಡೆದಿದೆ. ಆರಂಭದಲ್ಲಿ ಹಿರಿಯ ಮಾವುತರಿಂದ ತರಬೇತಿ ಪಡೆದ ಕಲೀಂ ಅನ್ನು ಪಳನಿಸಾಮಿ ಎಂಬ ಮಾವುತನಿಗೆ ನಿಯೋಜಿಸಲಾಯಿತು ಮತ್ತು ಶೀಘ್ರದಲ್ಲೇ ಅವರು ಅದ್ಭುತ ಜೋಡಿಯಾದರು. ತಮಿಳುನಾಡು ಅರಣ್ಯ ಇಲಾಖೆಯು ಆಯೋಜಿಸಿದ ಎಲ್ಲಾ ಪ್ರಮುಖ ಡ್ರೈವ್ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಇವರಿಬ್ಬರು ಮುಖ್ಯ ಪಾತ್ರ ವಹಿಸಿದರು.

ಈ ತಂಡವು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಆಂಧ್ರಪ್ರದೇಶದಂತಹ ಇತರ ರಾಜ್ಯಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಪ್ರಸಿದ್ಧವಾಗಿದೆ. ಕಲೀಂ ತಿರುಪತಿಯಲ್ಲಿ ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸಿದೆ ಮತ್ತು ಕೇರಳದ ಕುಖ್ಯಾತ ಪೆಪ್ಪರ ಕೊಲಕೊಲ್ಲಿ ಕಾರ್ಯಾಚರಣೆಯಲ್ಲೂ ಕಲೀಂ ನೇತೃತ್ವ ವಹಿಸಿದೆ. ಪಳನಿಸಾಮಿ ಅವರು 2011 ರಲ್ಲಿ ತಮ್ಮ ಆರೋಗ್ಯದ ಕಾಯಿಲೆಗಳಿಂದ ಮೃತಪಟ್ಟರು. ನಂತರ, ಅವರ ಸಂಬಂಧಿ ಮಣಿಯವರಿಗೆ ಕಲೀಂನ ಉಸ್ತುವಾರಿ ವಹಿಸಲಾಯಿತು. 2012 ರಿಂದ ಕಲೀಂ ಅನ್ನು ಕಾರ್ಯಾಚರಣೆಗೆ ಮಣಿ ಕರೆದೊಯ್ಯಲು ಪ್ರಾರಂಭಿಸಿದರು. ನಂತರದ ವರ್ಷ, ಕಲೀಂ ಪ್ರಸಿದ್ಧ ಆಪರೇಷನ್ ಮಲೈ ಅನ್ನು ಮುನ್ನಡೆಸಿದೆ, ಅಲ್ಲಿ ಒಂದೇ ದಿನ, ಒಂದೇ ಕಾರ್ಯಾಚರಣೆಯಲ್ಲಿ ಆರು ಆನೆಗಳನ್ನು ಸೆರೆಹಿಡಿಯಲಾಯಿತು.

ಇದನ್ನೂ ಓದಿ: ಅಜ್ಜನನ್ನು ಕಳೆದುಕೊಂಡ ಮೊಮ್ಮಗಳ ಸ್ಫೂರ್ತಿ ಕಥೆ; 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಹೆಡ್​ಲೈಟ್ ವಿತರಿಸಿದ ಖುಷಿ!

ಎಲ್ಲಾ ತಂಡದ ಸದಸ್ಯರೊಂದಿಗೆ ಕಾರ್ಯಾಚರಣೆಯ ಸಮಯದಲ್ಲಿ ತೀವ್ರ ಸಹಕಾರ, ಸರಳ ಸಂವಹನೆ, ಆಕ್ರಮಣಶೀಲತೆ, ಟ್ರ್ಯಾಕಿಂಗ್ ಕಾರ್ಯಾಚರಣೆಗಳ ಸಮಯದಲ್ಲಿ ಮೌನವಾಗಿರುವುದು ಮತ್ತು ಯಾವುದೇ ಗಾತ್ರದ ಆನೆ, ಅದು ಗಂಡು ಆನೆಯಾಗಿರಲಿ ಅಥವಾ ಹೆಣ್ಣಾಗಿರಲಿ ಪ್ರಾಬಲ್ಯವನ್ನು ಸ್ಥಿರವಾಗಿ ಪ್ರತಿಪಾದಿಸುವುದು, ಡ್ರೈವ್ ಕಾರ್ಯಾಚರಣೆಯ ಸಮಯದಲ್ಲಿಕಲೀಂ ಅಸಾಧಾರಣ ಕೌಶಲ್ಯಗಳನ್ನು ಒಳಗೊಂಡಿದೆ. ತಂಡದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ.

2023 ರಲ್ಲಿ ಅರಣ್ಯ ಇಲಾಖೆಗೆ ಕಲೀಂ ಸೇವೆಯ 51 ನೇ ವರ್ಷ ಪೂರ್ತಿಗೊಳಿಸುತ್ತದೆ, ಇದು ಕಲೀಂ ನಿವೃತ್ತಿಗೆ ಸರಿಯಾದ ಸಂದರ್ಭವಾಗಿತ್ತು. ಕಲೀಂ ಸೇವೆಗಳಿಗೆ ಅರ್ಹವಾದ ನಿವೃತ್ತಿಯನ್ನು ತಮಿಳುನಾಡು ಅರಣ್ಯ ಇಲಾಖೆ ಘೋಷಿಸಿತು. ಕಲೀಂ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಮೂಲಕ ಈ ಆನೆಯ ಸಾಧನೆಗಳನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದೆ. ಕಲೀಂನ ಆದರ್ಶದಾಯಕ ಮತ್ತು ನಿರಂತರ ಸೇವೆಗೆ ಇದು ಅರಣ್ಯ ಇಲಾಖೆ ಬೀಳ್ಕೊಡುಗೆ ಸಮಾರಂಭದ ಮೂಲಕ ಗೌರವ ಸಲ್ಲಿಸಿತು.

Follow Us
Nayana SP
Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?