AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!

ನದಿಯಲ್ಲಿ ಸಿಂಗಲ್ ಆಗಿ ಬೇಟೆಯಾಡಲು ಹೋದ ಹುಲಿಗೆ ಬಾತುಕೋಳಿ ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದೆ. ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.

Viral Video: ಬೇಟೆಯಾಡಲು ಬಂದ ಹುಲಿರಾಯನಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿ!
ಹುಲಿ ಮತ್ತು ಬಾತುಕೋಳಿ
TV9 Web
| Updated By: Rakesh Nayak Manchi|

Updated on: Jun 10, 2022 | 5:35 PM

Share

ಕೆಲವೊಂದು ಪ್ರಾಣಿಗಳಿಗೆ ನೀರಿನಲ್ಲಿ ಈಜಲು ಬರುತ್ತದೆ. ಈ ಪೈಕಿ ಹುಲಿ ಕೂಡ ಒಂದು. ಹುಲಿಗಳು ನೀರಿನಲ್ಲಿ ಬೇಟೆಯಾಡುವುದು ತೀರಾ ಕಡಿಮೆ. ಹುಲಿಗಳು ಒಂಟಿ ಬೇಟೆಗಾರ ಮತ್ತು ಏಕಾಂಗಿಯಾಗಿ ಬೇಟೆಯಾಡಲು ಬಯಸುತ್ತದೆ. ಅದರಂತೆ ನದಿಯಲ್ಲಿ ಸಿಂಗಲ್ ಆಗಿ ಬೇಟೆಯಾಡಲು ಹೋದ ಹುಲಿ(Tiger)ಗೆ ಬಾತುಕೋಳಿ(Duck) ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ನದಿ ನೀರಿನ ಬಣ್ಣ ತಿಳಿ ಕೇಸರಿಯಾಗಿದೆ. ಇದರಲ್ಲಿ ಬಾತುಕೋಳಿಯೊಂದು ಈಜಾಡುತ್ತಾ ಇರುತ್ತದೆ. ಈ ವೇಳೆ ಹುಲಿಯೊಂದು ಏಕಾಂಗಿಯಾಗಿ ಬಂದು ಬಾತುಕೋಳಿಯನ್ನು ಬೇಟೆಯಾಡಲು ಮುಂದಾಗುತ್ತದೆ. ನಿಧಾನಕ್ಕೆ ಬರುತ್ತಿದ್ದ ಹುಲಿ ಬಾತುಕೋಳಿ ಹತ್ತಿರವಾಗುತ್ತಿದ್ದಂತೆ ವೇಗವಾಗಿ ಮುನ್ನುಗ್ಗಲು ಯತ್ನಿಸಿತು. ಈ ವೇಳೆ ಬಾತುಕೋಳಿಗೆ ಇದ್ದಿದ್ದು ಒಂದೇ ದಾರಿ. ಅದು ನೀರಿನಲ್ಲಿ ಮುಳುಗುವುದು. ಬಾತುಕೋಳಿ ಹುಲಿಯ ಬಾಯಿಯಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಮುಳುಗಿದೆ. ಅದರಂತೆ ಹುಲಿಗೆ ಬಾತುಕೋಳಿ ಎಲ್ಲಿ ಹೋಯ್ತು ಎಂದು ತಿಳಿಯುವುದಿಲ್ಲ. ಆದರೆ ಬಾತುಕೋಳಿ ನೀರಿನಲ್ಲಿ ಮುಳುಗಿ ಹುಲಿಯ ಹಿಂದಿನಿಂದ ಮೇಲೆ ಬಂದು ಈಜಿಕೊಂಡು ಹೋಗಿದೆ.

ತನ್ನನ್ನು ಬೇಟೆಯಾಡಲು ಬಂದ ಹುಲಿಗೆ ಚಳ್ಳೆಹಣ್ಣು ತಿನ್ನಿಸಿದ ಬಾತುಕೋಳಿಯ ವಿಡಿಯೋವನ್ನು ‘Buitengebieden’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಾತುಕೋಳಿ ಶಾಂತವಾಗಿ ಈಜುವುದನ್ನು ಮತ್ತು ನಂತರ ನಿಧಾನವಾಗಿ ಸಮೀಪಿಸುತ್ತಿರುವ ಹುಲಿಯಿಂದ ಮರೆಮಾಡಲು ನೀರಿನ ಅಡಿಗೆ ಹೋಗುವುದನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಉಲ್ಲಾಸದಾಯಕವೆಂದು ಹೇಳಿಕೊಂಡಿದ್ದು, ವೈರಲ್ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?