AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indore: ಕಾಲೇಜು ಪರೀಕ್ಷೆಯಲ್ಲಿ ಫೇಲ್..ಹೇಳಿದ್ದು ಕಿಡ್ನಾಪ್ ಕಥೆ; ನಿಜವಾಗಿ ನಡೆದದ್ದೇನು?

ಕಾಲೇಜು ಯುವತಿ ಪರೀಕ್ಷೆಯಲ್ಲಿ ಫೇಲ್ ಆದ ನಂತರ ಅಪಹರಣದ ಕಥೆ ಕಟ್ಟಿ ಮನೆಯಿಂದ ಓಡಿಹೋದ ಘಟನೆ ಇಂದೋರ್‌ನಲ್ಲಿ ನಡೆದಿದೆ. ಹಾಗಾದರೆ ನಿಜವಾಗಿಯೂ ಆದದ್ದೇನು ಎಂದು ತಿಳಿಯಿರಿ.

Indore: ಕಾಲೇಜು ಪರೀಕ್ಷೆಯಲ್ಲಿ ಫೇಲ್..ಹೇಳಿದ್ದು ಕಿಡ್ನಾಪ್ ಕಥೆ; ನಿಜವಾಗಿ ನಡೆದದ್ದೇನು?
ಸಾಂದರ್ಭಿಕ ಚಿತ್ರ
ನಯನಾ ಎಸ್​ಪಿ
|

Updated on: May 16, 2023 | 10:50 AM

Share

ಶಾಲೆಗಳಲ್ಲಿ ಉತ್ತಮ ಅಂಕ (Good marks) ಪಡೆಯುವುದು ಎಷ್ಟು ಮುಖ್ಯ ಎಂಬುದು ನಮಗೆಲ್ಲ ತಿಳಿದಿದೆ. ಅದು ಮುಂದೆ ಉಪಯೋಗಕ್ಕೆ ಬರದಿದ್ದರೂ, ಪೋಷಕರು, ಶಿಕ್ಷಕರು ಸಾಕಷ್ಟು ಒತ್ತಡ ಹೇರುವುದನ್ನು ನಾವು ನೋಡಿದ್ದೇವೆ. ಇಂದು ಅದೆಷ್ಟೇ ಮಕ್ಕಳಿಗೆ ಒತ್ತಡ (Stress) ಹೇರಬಾರದು ಎಂದು ಹೇಳಿದರು, ಕಾಲ ಬದಲಾದಂತೆ ತೋರುತ್ತಿಲ್ಲ. ಇದಕ್ಕೆ ಸಾಕ್ಷಿ ಇಂದೋರ್ ನಲ್ಲಿ ನಡೆದ ಘಟನೆ. ಇಲ್ಲಿನ ಯುವತಿ ಒಬ್ಬಳು ಕಾಲೇಜಿನಲ್ಲಿ ಫೇಲ್ ಆಗಿ ಹೆತ್ತವರ ನಿರಾಸೆಗೆ ಕಾರಣವಾಗಲು ಹೆದರು ಅಪಹರಣದ ಕಥೆ (Kidnap) ಕಟ್ಟು ಮನೆಯಿಂದ ಪರಾರಿಯಾಗಿದ್ದಾಳೆ.

ತನ್ನ ವಾರ್ಷಿಕ ಪದವಿಪೂರ್ವ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ 17 ವರ್ಷದ ಹುಡುಗಿ, ಪೋಷಕ ಕೋಪದಿಂದ ತಪ್ಪಿಸಿಕೊಳ್ಳಲು ತನ್ನ ಅಪಹರಣವನ್ನು ನಕಲಿ ಮಾಡಿದ್ದಾಳೆ. ಮೊದಲ ವರ್ಷದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ವಿದ್ಯಾರ್ಥಿನಿ ತನ್ನ ಊರಿನಿಂದ ಮಧ್ಯಪ್ರದೇಶದ ನೆರೆಯ ನಗರವಾದ ಉಜ್ಜೈನ್‌ಗೆ ಪರಾರಿಯಾಗಿದ್ದಳು. ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪರೀಕ್ಷೆಯ ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ತನ್ನ ಮಗಳು ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಇಂದೋರ್‌ನ ದೇವಸ್ಥಾನದ ಬಳಿಯಿಂದ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಬಾಲಕಿಯ ತಂದೆ ಶುಕ್ರವಾರ (ಮೇ 12) ರಾತ್ರಿ ದೂರು ನೀಡಿದ್ದಾರೆ ಎಂದು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೇಂದ್ರ ಸೋನಿ ಪಿಟಿಐಗೆ ತಿಳಿಸಿದ್ದಾರೆ.

ತನ್ನ ಮಗಳು ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಇಂದೋರ್‌ನಿಂದ ಅಪಹರಣವಾಗಿರುವ ಬಗ್ಗೆ ತಿಳಿಸಿದ್ದಾಳೆ ಎಂದು ತಂದೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದಲ್ಲದೆ, ತಮ್ಮ ಮಗಳು ದೇವಸ್ಥಾನದ ಚೌಕದ ಬಳಿ ಅಧ್ಯಾಪಕರಿಂದ ಡ್ರಾಪ್ ಪಡೆದ ನಂತರ ಅಪಹರಣ ನಡೆದಿದೆ ಎಂದು ಹೇಳಿದ್ದಾರೆ. ಮಗಳ ಕಥೆಯ ಪ್ರಕಾರ, ಆಕೆ ಇ-ರಿಕ್ಷಾವನ್ನು ಹತ್ತಿದಳು ಮತ್ತು ದ್ವಿಚಕ್ರ ವಾಹನದ ಚಾಲಕ ಅವಳನ್ನು ಸರಿಯಾದ ಆಕೆ ತಿಳಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುವ ಬದಲಿಗೆ ಅಪರಿಚಿತ ಸ್ಥಳಕ್ಕೆ ಕರೆದೊಯ್ದನು. ಡ್ರೈವರ್ ತನ್ನ ಬಾಯಿಗೆ ಬಟ್ಟೆಯನ್ನು ತುರುಕಿದ್ದರಿಂದ ಅವಳು ಪ್ರಜ್ಞೆ ಕಳೆದುಕೊಂಡಳು ಎಂದು ಆಕೆ ಹೇಳಿದ್ದಾಳೆ.

ತನಿಖೆಯ ನಂತರ ನಿಜಾಂಶ ಬೆಳಕಿಗೆ ಬಂದಿದೆ, ಸಿಸಿಟಿವಿ ದೃಶ್ಯಾವಳಿಗಳಿಂದ ಪೊಲೀಸರು ಬಾಲಕಿಯ ಅಪಹರಣದ ಸತ್ಯಾಸತ್ಯತೆಗಳನ್ನು ತಳ್ಳಿಹಾಕಿದರು.

“ಬಾಲಕಿ ಹೇಳಿದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಕೆಯ ಕಥೆಯಲ್ಲಿನ ನಿಜಾಂಶ ಕಂಡುಬಂದಿದೆ” ಎಂದು ಇನ್ಸ್‌ಪೆಕ್ಟರ್ ಸೋನಿ ಟೈಮ್ಸ್ ನೌ ವರದಿಯಲ್ಲಿ ಹೇಳಿದರು. ಅದೃಷ್ಟವಶಾತ್, ಹುಡುಗಿಯನ್ನು ಶೀಘ್ರದಲ್ಲೇ ಪತ್ತೆ ಮಾಡಲಾಯಿತು.

“ಈ ಮಧ್ಯೆ, ಉಜ್ಜಯಿನಿಯ ರೆಸ್ಟೋರೆಂಟ್‌ನಲ್ಲಿ ಒಬ್ಬಳೇ ಕುಳಿತಿರುವ ಹುಡುಗಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು ಮತ್ತು ಆಕೆಯ ಫೋಟೋ ದೂರುದಾರರು ನೀಡಿದ ಫೋಟೋಗೆ ಹೊಂದಿಕೆಯಾಯಿತು” ಎಂದು ಸೋನಿ ಹೇಳಿದರು.

ಇದನ್ನೂ ಓದಿ: ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್

ಬಾಲಕಿಯ ಬ್ಯಾಗ್ ಪರಿಶೀಲಿಸಿದಾಗ ಉಜ್ಜಯಿನಿಗೆ ಹೋಗುವ ಬಸ್ ಟಿಕೆಟ್ ಮತ್ತು ರೆಸ್ಟೋರೆಂಟ್ ಬಿಲ್ ಸಿಕ್ಕಿತು. ನಂತರ, ಅವರು ನಿಜವಾಗಿ ನಡೆದ ಘಟನೆಯನ್ನು ಬಯಲು ಮಾಡಿದರು. ಮೊದಲ ವರ್ಷದ ಬಿಎ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ತನ್ನ ಪೋಷಕರನ್ನು ಎದುರಿಸಲು ಹೆದರುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕೌನ್ಸೆಲಿಂಗ್ ನೀಡಿ ನಂತರ ಈ ಹುಡುಗಿಯನ್ನು ಪೋಷಕರೊಂದಿಗೆ ಮನೆಗೆ ಕಳುಹಿಸಲಾಯಿತು.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ