Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್

Delhi Metro : ದೆಹಲಿ ಮೆಟ್ರೋ ರೈಲಿನಲ್ಲಿ ಕೇಳಿಬರುವ ಖ್ಯಾತ ನಿರೂಪಕ ಶಮ್ಮಿ ನಾರಂಗ್​ ಅವರ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ್ದಾನೆ ಈ ಯುವಕ. ನೆಟ್ಟಿಗರು ಇವನ ಅನುಕರಣೆಗೆ ಮನಸೋತಿದ್ದಾರೆ. ನೋಡಿ ವಿಡಿಯೋ.

ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್
ಎಡಚಿತ್ರದಲ್ಲಿ ಕೃಷ್ಣನ್​ ಶರ್ಮಾ, ಬಲಚಿತ್ರದಲ್ಲಿ ಉದ್ಘೋಷಕ ಶಮ್ಮಿ ನಾರಂಗ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 16, 2023 | 10:28 AM

Viral Video : ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿಲ್ದಾಣದ ವಿವರಗಳನ್ನು ಕೊಡುವ ಆ ಅದೃಶ್ಯ ವ್ಯಕ್ತಿಯ ಧ್ವನಿ ನೆನಪಿದೆಯಲ್ಲ? ರೈಲಿನಿಂದ ಕೆಳಗಿಳಿದರೂ ಆ ತರಂಗಗಳು ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತವೆ. ನಮ್ಮ ಮೆಟ್ರೋದಲ್ಲಾದರೆ ಸಾಮಾನ್ಯವಾಗಿ ಅಪರ್ಣಾ ಕಣ್ಣೆದುರಿಗೆ ಬರುತ್ತಾರೆ. ಹಾಗೆ ಆಯಾ ಊರುಗಳಲ್ಲಿ ಆಯಾ ನಿರೂಪಕರು, ಉದ್ಘೋಷಕರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ದೆಹಲಿಯ ಮೆಟ್ರೋದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Krishnansh Sharma (@whokrishnansh)

ಈತನಕ ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಕೃಷ್ಣಾಂಶ್ ಶರ್ಮಾ, ಉದ್ಘೋಷಕ ಶಮ್ಮಿ ನಾರಂಗ್ ಅವರ ದೆಹಲಿ ಮೆಟ್ರೋ ಘೋಷಣೆಯನ್ನು ಇಲ್ಲಿ ಅನುಕರಿಸಿದ್ದಾರೆ. ಅನೇಕರು ಇವರ ಈ ಅನುಕರಣೆಯನ್ನು ಮೆಚ್ಚಿದ್ದಾರೆ. ಓಹೋ ಸಹೋದರ ನೀವು ಇಷ್ಟರಲ್ಲೇ ಉದ್ಘೋಷಕರಾಗಲಿದ್ದೀರಿ, ಬಹಳ ಚೆನ್ನಾಗಿ ಅನುಕರಿಸಿದ್ದೀರಿ ಎಂದಿದ್ದಾರೆ. ನಮ್ಮ ಧ್ವನಿ ಅವರಂತೆಯೇ ಇದೆಯೋ ಅಥವಾ ನೀವು ಮಿಮಿಕ್ರಿ ಮಾಡುತ್ತಿದ್ದೀರೋ ಎಂದು ಕೇಳಿದ್ದಾರೆ ಒಬ್ಬರು.

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಶಮ್ಮಿ ಅವರ ಧ್ವನಿಯನ್ನು ಕರೆಕ್ಟ್​ ಆಗಿ ಅನುಕರಿಸಿದ್ದೀರಿ, ನಿಜಕ್ಕೂ ಸಂತೋಷವಾಯಿತು ಎಂದು ಮತ್ತೊಬ್ಬರು ಹೇಳಿದ್ದಾರೆ. ನಂಬಲಸಾಧ್ಯ! ಥೇಟ್​ ಅವರ ಧ್ವನಿಯಂತೆಯೇ ಕೇಳುತ್ತಿದೆ ಎಂದು ಇನ್ನೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವು ಮೆಟ್ರೋದಲ್ಲಿ ಪ್ರಯಾಣಿಸುವತನಕ ಮೆಟ್ರೋದ ರೆಕಾರ್ಡೆಡ್​ ಅನೌನ್ಸ್​ಮೆಂಟ್​ನ ಅವಶ್ಯಕತೆಯೇ ಇಲ್ಲ! ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

ನೀವು ಹೀಗೆ ಇನ್ನೂ ಹಲವು ನಟರ ಧ್ವನಿಯನ್ನು ಅನುಕರಿಸಿ, ಕಂಠದಾನ ಕಲಾವಿದರು ಆಗಬಹುದು ಎಂದಿದ್ದಾರೆ ಇನ್ನೂ ಒಬ್ಬರು. ನೀವು ಪ್ರತಿಭಾನ್ವಿತರು. ಇಂಥ ಹವ್ಯಾಸವನ್ನು ಮುಂದುವರಿಸಿ ಎಂದು ಮಗದೊಬ್ಬರು ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ