AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

Pokhara Plane Crash : ವಿಮಾನ ಅಪಘಾತವಾಗುವಾಗ ಸೆರೆಯಾದ ವಿಡಿಯೋ ಇಲ್ಲಿದೆ. ಹಾಗೆಯೇ ನೇಪಾಳದ ಜನಪ್ರಿಯ ಟಿಕ್​ಟಾಕರ್​, ಗಗನಸಖಿ ಈ ವಿಮಾನ ಪತನಗೊಳ್ಳುವ ಮೊದಲು ಚಿತ್ರೀಕರಿಸಿದ ಕೊನೆಯ ಟಿಕ್​ಟಾಕ್​ ವಿಡಿಯೋ ಕೂಡ ಇಲ್ಲಿದೆ.

ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್
ವಿಮಾನ ಅಪಘಾತಕ್ಕೆ ಮೊದಲು ಟಿಕ್​ಟಾಕ್ ವಿಡಿಯೋ ಮಾಡಿದ ಗಗನಸಖಿ ಓಷಿನ್ ಏಲ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 17, 2023 | 10:52 AM

Viral Video : ಯೇಟಿ ಏರ್​ಲೈನ್ಸ್​ನ (Yeti Airlines) ವಿಮಾನವು ಭಾನುವಾರದಂದು ನೇಪಾಳದಲ್ಲಿ ಪತನಗೊಳ್ಳುವ ಮೊದಲು ಗಗನಸಖಿಯೊಬ್ಬಳು ಮಾಡಿದ ಕೊನೆಯ ಟಿಕ್​ಟಾಕ್​ ವಿಡಿಯೋ ಇದೀಗ ವೈರಲ್ ಆಗಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ನಾಲ್ಕು ಸಿಬ್ಬಂದಿಗಳ ಪೈಕಿ ಗಗನಸಖಿ ಓಷಿನ್​ ಏಲ್ (Oshin Ale) ಕೂಡ ಒಬ್ಬರು. ಇವರು ನೇಪಾಳದ ಪ್ರಸಿದ್ಧ ಟಿಕ್​ಟಾಕರ್ (TikToker) ಆಗಿದ್ದರು. ಯಾರಿಗೆ ಗೊತ್ತಿತ್ತು, ಈ ನಗು ಹೀಗೆ ಮಾಸುತ್ತದೆಯೆಂದು. ನೋಡಿ ಏಷಿನ್ ಕೊನೆಯ ವಿಡಿಯೋ.

Moneycontrol ವರದಿಯ ಪ್ರಕಾರ, ಪೊಖಾರಾದಲ್ಲಿ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣದಲ್ಲಿ ವಿಮಾನವು ಇಳಿಯುವ ಸಂದರ್ಭದಲ್ಲಿ ನದಿಯ ಕಮರಿಗೆ ಬಿದ್ದು ದುರಂತಕ್ಕೀಡಾಗಿದೆ. ಈ ವಿಮಾನದಲ್ಲಿ ಭಾರತೀಯರು ಸೇರಿದಂತೆ 72 ಪ್ರಯಾಣಿಕ ಪೈಕಿ 68 ಜನರು ಸಾವನ್ನಪ್ಪಿದ್ದಾರೆ. ವಿಮಾನವು ದುರಂತಕ್ಕೆ ಈಡಾಗುವ ಹೃದಯವಿದ್ರಾವಕ ಕ್ಷಣಗಳು ಇಲ್ಲಿವೆ.

TW śmierć, katastrofa

ಭಾರತೀಯ ಪ್ರಯಾಣಿಕರೊಬ್ಬರು ಅಪಘಾತಕ್ಕೆ ಮೊದಲು ಕೆಲ ಕ್ಷಣಗಳ ಕಾಲ ಫೇಸ್​ಬುಕ್​ ಲೈವ್​ ಸ್ಟ್ರೀಮ್ ಮಾಡಿದ್ಧಾರೆ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಘಾಝೀಪುರದ ನಾಲ್ವರು ಪ್ರಯಾಣಿಕರಲ್ಲಿ ಒಬ್ಬರಾದ ಸೋನು ಜೈಸ್ವಾಲ್ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇವರೂ ಕೂಡ ಅಪಘಾತದಲ್ಲಿ ಮಡಿದಿದ್ಧಾರೆ.

ಇದನ್ನೂ ಓದಿ : Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ

ನೇಪಾಳದ ಮಾಜಿ ಸಂಸದ ಮತ್ತು ನೇಪಾಳ ಕಾಂಗ್ರೆಸ್‌ ಕೇಂದ್ರ ಸಮಿತಿಯ ಸದಸ್ಯ ಅಭಿಷೇಕ್ ಪ್ರತಾಪ್ ಷಾ, ‘ನಾನು ಈ ವಿಡಿಯೋ ಅನ್ನು ಸ್ನೇಹಿತನಿಂದ ಪಡೆದುಕೊಂಡಿದ್ದೇನೆ. ಅಪಘಾತದ ನಂತರ ಅವಶೇಷಗಳಡಿ ಈ ಮೊಬೈಲ್​ ಸಿಕ್ಕಿದೆ. ಮೊದಲ ಸಲ ಇಂಥ ಭಯಾನಕ ದೃಶ್ಯವನ್ನು ನೋಡಿದ್ದು. ಇದು ತುಂಬಾ ನೋವು ತರುವಂಥ ವಿಷಯ, ದೊಡ್ಡ ದುರಂತ’ ಎಂದು ಅವರು ಟ್ವೀಟ್ ಮಾಡಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:44 am, Tue, 17 January 23

ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ