AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

Pokhara Plane Crash : ವಿಮಾನ ಅಪಘಾತವಾಗುವಾಗ ಸೆರೆಯಾದ ವಿಡಿಯೋ ಇಲ್ಲಿದೆ. ಹಾಗೆಯೇ ನೇಪಾಳದ ಜನಪ್ರಿಯ ಟಿಕ್​ಟಾಕರ್​, ಗಗನಸಖಿ ಈ ವಿಮಾನ ಪತನಗೊಳ್ಳುವ ಮೊದಲು ಚಿತ್ರೀಕರಿಸಿದ ಕೊನೆಯ ಟಿಕ್​ಟಾಕ್​ ವಿಡಿಯೋ ಕೂಡ ಇಲ್ಲಿದೆ.

ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್
ವಿಮಾನ ಅಪಘಾತಕ್ಕೆ ಮೊದಲು ಟಿಕ್​ಟಾಕ್ ವಿಡಿಯೋ ಮಾಡಿದ ಗಗನಸಖಿ ಓಷಿನ್ ಏಲ್
TV9 Web
| Edited By: ಶ್ರೀದೇವಿ ಕಳಸದ|

Updated on:Jan 17, 2023 | 10:52 AM

Share

Viral Video : ಯೇಟಿ ಏರ್​ಲೈನ್ಸ್​ನ (Yeti Airlines) ವಿಮಾನವು ಭಾನುವಾರದಂದು ನೇಪಾಳದಲ್ಲಿ ಪತನಗೊಳ್ಳುವ ಮೊದಲು ಗಗನಸಖಿಯೊಬ್ಬಳು ಮಾಡಿದ ಕೊನೆಯ ಟಿಕ್​ಟಾಕ್​ ವಿಡಿಯೋ ಇದೀಗ ವೈರಲ್ ಆಗಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ನಾಲ್ಕು ಸಿಬ್ಬಂದಿಗಳ ಪೈಕಿ ಗಗನಸಖಿ ಓಷಿನ್​ ಏಲ್ (Oshin Ale) ಕೂಡ ಒಬ್ಬರು. ಇವರು ನೇಪಾಳದ ಪ್ರಸಿದ್ಧ ಟಿಕ್​ಟಾಕರ್ (TikToker) ಆಗಿದ್ದರು. ಯಾರಿಗೆ ಗೊತ್ತಿತ್ತು, ಈ ನಗು ಹೀಗೆ ಮಾಸುತ್ತದೆಯೆಂದು. ನೋಡಿ ಏಷಿನ್ ಕೊನೆಯ ವಿಡಿಯೋ.

Moneycontrol ವರದಿಯ ಪ್ರಕಾರ, ಪೊಖಾರಾದಲ್ಲಿ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣದಲ್ಲಿ ವಿಮಾನವು ಇಳಿಯುವ ಸಂದರ್ಭದಲ್ಲಿ ನದಿಯ ಕಮರಿಗೆ ಬಿದ್ದು ದುರಂತಕ್ಕೀಡಾಗಿದೆ. ಈ ವಿಮಾನದಲ್ಲಿ ಭಾರತೀಯರು ಸೇರಿದಂತೆ 72 ಪ್ರಯಾಣಿಕ ಪೈಕಿ 68 ಜನರು ಸಾವನ್ನಪ್ಪಿದ್ದಾರೆ. ವಿಮಾನವು ದುರಂತಕ್ಕೆ ಈಡಾಗುವ ಹೃದಯವಿದ್ರಾವಕ ಕ್ಷಣಗಳು ಇಲ್ಲಿವೆ.

TW śmierć, katastrofa

ಭಾರತೀಯ ಪ್ರಯಾಣಿಕರೊಬ್ಬರು ಅಪಘಾತಕ್ಕೆ ಮೊದಲು ಕೆಲ ಕ್ಷಣಗಳ ಕಾಲ ಫೇಸ್​ಬುಕ್​ ಲೈವ್​ ಸ್ಟ್ರೀಮ್ ಮಾಡಿದ್ಧಾರೆ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಘಾಝೀಪುರದ ನಾಲ್ವರು ಪ್ರಯಾಣಿಕರಲ್ಲಿ ಒಬ್ಬರಾದ ಸೋನು ಜೈಸ್ವಾಲ್ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇವರೂ ಕೂಡ ಅಪಘಾತದಲ್ಲಿ ಮಡಿದಿದ್ಧಾರೆ.

ಇದನ್ನೂ ಓದಿ : Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ

ನೇಪಾಳದ ಮಾಜಿ ಸಂಸದ ಮತ್ತು ನೇಪಾಳ ಕಾಂಗ್ರೆಸ್‌ ಕೇಂದ್ರ ಸಮಿತಿಯ ಸದಸ್ಯ ಅಭಿಷೇಕ್ ಪ್ರತಾಪ್ ಷಾ, ‘ನಾನು ಈ ವಿಡಿಯೋ ಅನ್ನು ಸ್ನೇಹಿತನಿಂದ ಪಡೆದುಕೊಂಡಿದ್ದೇನೆ. ಅಪಘಾತದ ನಂತರ ಅವಶೇಷಗಳಡಿ ಈ ಮೊಬೈಲ್​ ಸಿಕ್ಕಿದೆ. ಮೊದಲ ಸಲ ಇಂಥ ಭಯಾನಕ ದೃಶ್ಯವನ್ನು ನೋಡಿದ್ದು. ಇದು ತುಂಬಾ ನೋವು ತರುವಂಥ ವಿಷಯ, ದೊಡ್ಡ ದುರಂತ’ ಎಂದು ಅವರು ಟ್ವೀಟ್ ಮಾಡಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:44 am, Tue, 17 January 23

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?