ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

Curd Rice : ಕದಂಬರ ಬನವಾಸಿಯಲ್ಲಿ 400 ವರ್ಷಗಳಿಂದಲೂ ನೆಲೆಸಿರುವ ಕೊಂಕಣಿ ಮನೆತನಗಳಲ್ಲಿ ಇದು ಸಾಮಾನ್ಯ. ಆ ಮನೆಗಳ ಪ್ರತಿ ಮಗುವೂ ತನ್ನದೇ ಕಲ್ಲಿನಿಂದ ಕಲ್ಬುತ್ತಿ ಮಾಡಿಕೊಡಬೇಕೆಂಬ ಬೇಡಿಕೆ ಇಡುತ್ತದೆ.

ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ
ಊಟ ಬೆಂಗಳೂರು ರೆಸ್ಟೋರೆಂಟ್​ನಲ್ಲಿ ತಯಾರಾದ ಕಲ್ಬುತ್ತಿ
Follow us
| Updated By: ಶ್ರೀದೇವಿ ಕಳಸದ

Updated on:May 15, 2023 | 4:18 PM

Viral Video : ನಮ್ಮಲ್ಲಿ ಮೊಸರನ್ನ ತಿನ್ನದಿರುವವರು ಯಾರು? ಮನೆಯಲ್ಲಾಗಲಿ ಮದುವೆ ಮೊದಲಾದ ಸಮಾರಂಭಗಳಲ್ಲಿ ಊಟದ ಕೊನೆಯಲ್ಲೇ ಆಗಲಿ ಜಠರಾಗ್ನಿಯನ್ನು ತಣಿಸಲು ಮೊಸರನ್ನ ಬೇಕೇಬೇಕು. ಊರಿಂದೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದಾಗಲೂ ಬಹುತೇಕ ಜನರು ಊಟದ ಬುತ್ತಿ ಬಿಚ್ಚಿದಾಗ ಮೊಸರನ್ನದ ಹದುಳಾದ ತುಸುವೇ ಹುಳಿಯೇರಿದ ಕಂಪು ಎಲ್ಲೆಡೆ ಆವರಿಸುತ್ತದೆ. ಆದರೆ ಕಲ್ಬುತ್ತಿಯನ್ನು ನೀವು ಸವಿದಿದ್ದೀರಾ? ಈ ವಿಡಿಯೋ ನೋಡಿದರೆ ನೀವು ನಿಮ್ಮ ಬಾಲ್ಯದ ದಿನಗಳಿಗೆ ಜಾರಬಹುದೇನೋ.

ಇದನ್ನೂ ಓದಿ
Image
ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ
Image
Mother’s Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?
Image
ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು
Image
‘ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು’ ಹೌದೆ?
View this post on Instagram

A post shared by Oota Bangalore (@oota_bangalore)

ಬುತ್ತಿ ಎನ್ನುವುದು ಮೊಸರನ್ನಕ್ಕೆ ಅನ್ವರ್ಥ. ಜೊತೆಗೆ ಮಿಡಿ ಮಾವಿನಕಾಯಿ ಅಥವಾ ನಿಂಬೆಯ ಉಪ್ಪಿನಕಾಯಿಯೋ, ಉತ್ತರ ಕರ್ನಾಟಕದ ಝುಣಕವೋ ಇದ್ದರಂತೂ ಸ್ವರ್ಗಕ್ಕೇ ಕಿಚ್ಚು! ಅದಕ್ಕೆ ಕರಿಬೇವು ಜೀರಿಗೆ ಇಂಗಿನ ಒಗ್ಗರಣೆ, ಒಂದಿಷ್ಟು ದ್ರಾಕ್ಶಿ, ದಾಳಿಂಬೆ, ಗೋಡಂಬಿ ಹಾಕಿ ಇನ್ನಷ್ಟು ರುಚಿಕಟ್ಟಾಗಿಯೂ ಮಾಡುತ್ತಾರೆ. ದೇಹಕ್ಕೆ ತಂಪಾದ ಮೊಸರನ್ನ ದಕ್ಷಿಣ ಭಾರತದೆಲ್ಲೆಡೆ comfort food ಎಂದೇ ಹೆಸರುವಾಸಿ.

ಇದನ್ನೂ ಓದಿ : Mothers Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?

ಆದರೆ ಇಲ್ಲೊಂದು ಹೊಸ ರೀತಿಯ ಮೊಸರನ್ನ ನಮಗೆ ಕಾಣಸಿಗುತ್ತದೆ. ‘ಕಲ್ಬುತ್ತಿ’ ಎಂಬ ಮೊಸರನ್ನ. ಸುಡುಸುಡು ಕಾದ ಕಲ್ಲೊಂದನ್ನು ಮೊಸರನ್ನದ ಮಧ್ಯೆ ಇರಿಸಿ, ಅದರ ಮೇಲೆ ತುಪ್ಪದಲ್ಲಿ ಒಗ್ಗರಣೆ ಹಾಕಿದ ಇಂಗು, ಕರಿಬೇವು, ಸಾಸಿವೆ, ಜೀರಿಗೆ ಹುಯ್ದು ಬಾಳೆಲೆಯಲ್ಲಿ ಮುಚ್ಚಿ ಸ್ವಲ್ಪ ಹೊತ್ತು ಇಡುತ್ತಾರೆ. ಇದೇ ಕಲ್ಬುತ್ತಿ ಎಂದು ಕರೆಯುವ ಮೊಸರನ್ನದ sizzler! ಇದು ನಮ್ಮಲ್ಲಿ ಹಲವರಿಗೆ ಹೊಸದೆಂದು ತೋರಿದರೂ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಇದನ್ನೂ ಓದಿ : ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ

ಕದಂಬರ ಬನವಾಸಿಯಲ್ಲಿ 400 ವರ್ಷಗಳಿಂದಲೂ ನೆಲೆಸಿರುವ ಕೊಂಕಣಿ ಮನೆತನಗಳಲ್ಲಿ ಇದು ಸಾಮಾನ್ಯ. ಆ ಮನೆಗಳ ಪ್ರತಿ ಮಗುವೂ ತನ್ನದೇ ಕಲ್ಲಿನಿಂದ ಕಲ್ಬುತ್ತಿ ಮಾಡಿಕೊಡಬೇಕೆಂಬ ಬೇಡಿಕೆ ಇಡುತ್ತದೆ.

ಕಲ್ಬುತ್ತಿ ಎಂಬ ಈ ವಿಶೇಷ ಮೊಸರನ್ನವನ್ನು ನೀವು ತಿಂದಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ ಮಾಡಿಕೊಂಡು ತಿನ್ನಿ. ಹೇಗಿತ್ತು ಎಂದು ತಿಳಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:18 pm, Mon, 15 May 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ