AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ…

Kitten : ಯಾರದು ನೀರಲ್ಲಿ ಈ ಪುಟ್ಟ ಬೆಕ್ಕನ್ನು ಹೀಗೆ ಬಿಟ್ಟುಹೋಗಿರುವುದು? ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ. ಈ ನಾಯಿಯೋ ಒಂದೇ ಸಮನೇ ಅದನ್ನು ನೀರಿನಿಂದೆತ್ತಲು ನೋಡುತ್ತಿದೆ. ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ.

ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ...
ಬಾ ಬೆಕ್ಕುಕೂಸೆ ನನ್ನ ಬಳಿ...
TV9 Web
| Edited By: |

Updated on:May 13, 2023 | 3:23 PM

Share

Viral Video : ನಾಯಿ ಬೆಕ್ಕು ಆಜನ್ಮ ವೈರಿಗಳು ಎನ್ನುವುದನ್ನು ಹೇಗೆ ನಂಬುವುದು ಈ ವಿಡಿಯೋ ನೋಡಿದ ಮೇಲೆ? ಈ ಪುಟ್ಟ ಬೆಕ್ಕು ಅದು ಹೇಗೆ ಇಲ್ಲಿ ನೀರಿನಲ್ಲಿ ಕುಳಿತಿದೆಯೋ ಗೊತ್ತಿಲ್ಲ. ಈ ಮನೆಯ ನಾಯಿ ಅದನ್ನು ಮೈದಡವುತ್ತ ಮಾತನಾಡಿಸುತ್ತಿದೆ. ಆ ಸಿಂಕ್​ನಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಎಂಥ ಆಪ್ತವಾಗಿದೆಯಲ್ಲ ಈ ವಿಡಿಯೋ. ನೆಟ್ಟಿಗರಲ್ಲಿ ಕೆಲವರು ಮೂಕವಿಸ್ಮಿತರಾಗಿದ್ದಾರೆ ಇನ್ನೂ ಕೆಲವರು ಕುಪಿತಗೊಂಡಿದ್ದಾರೆ.

ಆಯಾ ಪ್ರಾಣಿಗಳ ನಡುವೆ ವೈರತ್ವ ಇದ್ದರೂ ಒಬ್ಬಂಟಿಯಾಗಿರುವ ಮರಿಗಳನ್ನು ನೋಡಿದಾಗ ಅದು ಹೇಗೋ ವಾತ್ಸಲ್ಯ ಉಕ್ಕಿ ಬಂದುಬಿಡುತ್ತದೆ. ಆಗ ತಮ್ಮದೇ ಮರಿ ಎಂಬಂತೆ ಪ್ರೀತಿಸುತ್ತ ಪೋಷಿಸಲು ಶುರು ಮಾಡುತ್ತವೆ. ಮೇಲಿನ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ ಅನ್ನು ಸುಮಾರು 30,000 ಜನರು ವೀಕ್ಷಿಸಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಎಷ್ಟೊಂದು ಮೆಲ್ಲನೇ ಅದರ ನೆತ್ತಿಯನ್ನು ಮುಟ್ಟುತ್ತಿದೆ ನೋಡಿ ಆ ನಾಯಿ ಎಂದಿದ್ದಾರೆ ಒಬ್ಬರು. ಛೆ! ಈ ಪುಟಾಣಿಯನ್ನು ನೀರಿನಲ್ಲಿ ಹಾಕಿದ್ದು ಯಾರು? ಎಂದು ಕೇಳಿದ್ದಾರೆ ಇನ್ನೊಬ್ಬರು. ಎಂಥ ಕ್ರೂರಿಗಳು ಈ ಮನೆಯ ಜನರು, ಅದನ್ನು ಹೀಗೆ ನೀರಿನಲ್ಲಿ ಹಾಕಿದ್ದಾರಲ್ಲ ಎಂದು ಇನ್ನೂ ಒಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಹೊಸ ಮನೆಗೆ ಹೊಂದಿಕೊಳ್ಳುವಲ್ಲಿ ಮರಿ ಕಷ್ಟಪಡುತ್ತಿರಬಹುದು, ತನ್ನ ತಾಯಿಯನ್ನು ಹುಡುಕಿಕೊಂಡು ಹೋಗುವಾಗ ಹೀಗೆ ಸಿಂಕಿನೊಳಗೆ ಇಳಿದಿರಬಹುದು ಎಂದು ಸದ್ಯಕ್ಕೆ ಸಮಾಧಾನ ಮಾಡಿಕೊಳ್ಳೋಣವೇ. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:22 pm, Sat, 13 May 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್