ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ…

Kitten : ಯಾರದು ನೀರಲ್ಲಿ ಈ ಪುಟ್ಟ ಬೆಕ್ಕನ್ನು ಹೀಗೆ ಬಿಟ್ಟುಹೋಗಿರುವುದು? ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ. ಈ ನಾಯಿಯೋ ಒಂದೇ ಸಮನೇ ಅದನ್ನು ನೀರಿನಿಂದೆತ್ತಲು ನೋಡುತ್ತಿದೆ. ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ.

ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ...
ಬಾ ಬೆಕ್ಕುಕೂಸೆ ನನ್ನ ಬಳಿ...
Follow us
| Updated By: ಶ್ರೀದೇವಿ ಕಳಸದ

Updated on:May 13, 2023 | 3:23 PM

Viral Video : ನಾಯಿ ಬೆಕ್ಕು ಆಜನ್ಮ ವೈರಿಗಳು ಎನ್ನುವುದನ್ನು ಹೇಗೆ ನಂಬುವುದು ಈ ವಿಡಿಯೋ ನೋಡಿದ ಮೇಲೆ? ಈ ಪುಟ್ಟ ಬೆಕ್ಕು ಅದು ಹೇಗೆ ಇಲ್ಲಿ ನೀರಿನಲ್ಲಿ ಕುಳಿತಿದೆಯೋ ಗೊತ್ತಿಲ್ಲ. ಈ ಮನೆಯ ನಾಯಿ ಅದನ್ನು ಮೈದಡವುತ್ತ ಮಾತನಾಡಿಸುತ್ತಿದೆ. ಆ ಸಿಂಕ್​ನಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಎಂಥ ಆಪ್ತವಾಗಿದೆಯಲ್ಲ ಈ ವಿಡಿಯೋ. ನೆಟ್ಟಿಗರಲ್ಲಿ ಕೆಲವರು ಮೂಕವಿಸ್ಮಿತರಾಗಿದ್ದಾರೆ ಇನ್ನೂ ಕೆಲವರು ಕುಪಿತಗೊಂಡಿದ್ದಾರೆ.

ಆಯಾ ಪ್ರಾಣಿಗಳ ನಡುವೆ ವೈರತ್ವ ಇದ್ದರೂ ಒಬ್ಬಂಟಿಯಾಗಿರುವ ಮರಿಗಳನ್ನು ನೋಡಿದಾಗ ಅದು ಹೇಗೋ ವಾತ್ಸಲ್ಯ ಉಕ್ಕಿ ಬಂದುಬಿಡುತ್ತದೆ. ಆಗ ತಮ್ಮದೇ ಮರಿ ಎಂಬಂತೆ ಪ್ರೀತಿಸುತ್ತ ಪೋಷಿಸಲು ಶುರು ಮಾಡುತ್ತವೆ. ಮೇಲಿನ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ ಅನ್ನು ಸುಮಾರು 30,000 ಜನರು ವೀಕ್ಷಿಸಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಎಷ್ಟೊಂದು ಮೆಲ್ಲನೇ ಅದರ ನೆತ್ತಿಯನ್ನು ಮುಟ್ಟುತ್ತಿದೆ ನೋಡಿ ಆ ನಾಯಿ ಎಂದಿದ್ದಾರೆ ಒಬ್ಬರು. ಛೆ! ಈ ಪುಟಾಣಿಯನ್ನು ನೀರಿನಲ್ಲಿ ಹಾಕಿದ್ದು ಯಾರು? ಎಂದು ಕೇಳಿದ್ದಾರೆ ಇನ್ನೊಬ್ಬರು. ಎಂಥ ಕ್ರೂರಿಗಳು ಈ ಮನೆಯ ಜನರು, ಅದನ್ನು ಹೀಗೆ ನೀರಿನಲ್ಲಿ ಹಾಕಿದ್ದಾರಲ್ಲ ಎಂದು ಇನ್ನೂ ಒಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಹೊಸ ಮನೆಗೆ ಹೊಂದಿಕೊಳ್ಳುವಲ್ಲಿ ಮರಿ ಕಷ್ಟಪಡುತ್ತಿರಬಹುದು, ತನ್ನ ತಾಯಿಯನ್ನು ಹುಡುಕಿಕೊಂಡು ಹೋಗುವಾಗ ಹೀಗೆ ಸಿಂಕಿನೊಳಗೆ ಇಳಿದಿರಬಹುದು ಎಂದು ಸದ್ಯಕ್ಕೆ ಸಮಾಧಾನ ಮಾಡಿಕೊಳ್ಳೋಣವೇ. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:22 pm, Sat, 13 May 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ