AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ​ ಡೋನಟ್​ ಪಡೆದ ರ್‍ಯಾಕೂನ್

Raccoon : 'ಡಂಕಿನ್ ಡೋನಟ್ಸ್‌ನ ಹೊಸ ಜಾಹೀರಾತು ತಯಾರಾಗುತ್ತಿದ್ದಂತಿದೆ' ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅದು ಹಣ ಕೊಡಲಿಲ್ಲ, ಉದ್ರಿ ಗಿರಾಕಿ ಇರಬೇಕು’ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ನೀವೇನಂತೀರಿ?

ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ​ ಡೋನಟ್​ ಪಡೆದ ರ್‍ಯಾಕೂನ್
ಅಂಗಡಿಯ ಮಹಿಳೆಯಿಂದ ಡೋನಟ್​ ಪಡೆಯುತ್ತಿರುವ ರ್ಯಾಕೂನ್​
TV9 Web
| Edited By: |

Updated on:May 13, 2023 | 12:25 PM

Share

Viral Video : ಒಂದು ರ್‍ಯಾಕೂನ್ (Raccoon) ಡೋನಟ್ ಮಾರುವ ಅಂಗಡಿಯೊಂದರ ಕಿಟಕಿಯ ಹೊರಗೆ ಕಾದು ನಿಂತಿದೆ. ನಂತರ ರಸ್ತೆ ದಾಟಿ ಅಲ್ಲಿಯ ಸಿಬ್ಬಂದಿಯು ಕೈಗೊಡ್ಡಿದ ಡೋನಟ್ಅನ್ನು ನಿರಾತಂಕವಾಗಿ ಇಸಿದುಕೊಂಡು ಕಚ್ಚಿ ತಿನ್ನುತ್ತಾ ಮರಳುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು, ‘ಡಂಕಿನ್ ಡೋನಟ್ಸ್‌ನ ಹೊಸ ಜಾಹೀರಾತು ತಯಾರಾಗುತ್ತಿದ್ದಂತಿದೆ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅದು ಹಣ ಕೊಡಲಿಲ್ಲ, ಉದ್ರಿ ಗಿರಾಕಿ ಇರಬೇಕು’ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ರ್‍ಯಾಕೂನ್ ಉತ್ತರ ಅಮೇರಿಕಾದ ಮಧ್ಯಮ ಗಾತ್ರದ ಸ್ತನಿಗಳಲ್ಲಿ ಒಂದು. ಇವು ನಿಶಾಚರಿ ಮಾಂಸಾಹಾರಿ ಪ್ರಾಣಿ. ಇವುಗಳ ಮೂಲ ಎಲೆಯುದುರುವ ಮರಗಳಿರುವ ಕಾಡು (deciduous forests). ಆದರೆ ವಿವಿಧ ಬಗೆಯ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲ ರ್‍ಯಾಕೂನ್‌ಗಳು ಗುಡ್ಡಗಾಡು, ಬಯಲು, ಅಷ್ಟೇ ಏಕೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ.

ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು

ಅಮೆರಿಕನ್ ಸಬ್‌ಅರ್ಬ್‌ಗಳಲ್ಲಿ ವಾಸವಿರುವ ಬಹುತೇಕ ಜನರು ಇವನ್ನು ಉಪದ್ರವಕಾರಿ ಜೀವಿಗಳು ಎಂದು ಗಣಿಸಿ ಅವನ್ನು ಓಡಿಸುವುದಷ್ಟೇ ಅಲ್ಲ ಕೊಲ್ಲಲೂ ಮುಂದಾಗುತ್ತಾರೆ. ಆದರೆ ದಪ್ಪ ಮೃದು ತುಪ್ಪಳ ಚೂಪು ಮುಖ ಮುಖದ ಮೇಲಿನ ಪಟ್ಟೆಗಳು, ಇಂಥ ಸೊಗಸಾದ ಲಕ್ಷಣಗಳುಳ್ಲ ರ್‍ಯಾಕೂನ್‌ಗಳು ಬಹಳ ಮಂದಿಗೆ ಮುದ್ದಾಗಿ ಡ ಕಾಣುತ್ತವೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಸಲಗದ ತಂಟೆಗೆ ಹೋಗಿಯೂ ಪಾರಾದವನ ಕತೆ

ಅದೇನೇ ಇರಲಿ, ಡೋನಟ್ ಭಿಕ್ಷೆ ಪಡೆದುಕೊಂಡು ಓಡಿ ಹೋದ ಈ ಪ್ರಾಣಿಯ ವರ್ತನೆಯನ್ನು ನೋಡಿದ ಎಲ್ಲರೂ ಬಾಯಿಯ ಮೇಲೆ ಕೈಇಟ್ಟುಕೊಂಡಿರುವುದಂತೂ ಸತ್ಯ. ಸರಿಯಾದ ಸಮಯಕ್ಕೆ ಕ್ಯಾಮೆರಾದಿಂದ ಶೂಟ್ ಮಾಡಿ ಇಂಥ ಹೃದಯಸ್ಪರ್ಶೀ ದೃಶ್ಯವನ್ನು ಹಂಚಿಕೊಂಡವರಿಗೆ ನಾವು ಥ್ಯಾಂಕ್ಸ್ ಹೇಳಲೇಬೇಕು. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:24 pm, Sat, 13 May 23

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ