AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಡೆಜಗಳವನ್ನು ನಿಲ್ಲಿಸಲು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಪೊಲೀಸ್, ವಿಡಿಯೋ ಇಲ್ಲಿದೆ ನೋಡಿ

ಮಹಿಳೆಯರ ಗುಂಪೊಂದು ಬೀದಿ ಜಗಳದಲ್ಲಿ ತೊಡಗಿರುವಾಗ ಅವರ ರಂಪಾಟವನ್ನು ನಿಲ್ಲಿಸಲು ಪೋಲಿಸರೊಬ್ಬರು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮತ್ತು ಪೋಲಿಸರ ಕರ್ತವ್ಯ ಪ್ರಜ್ಞೆಗೆ ನೆಟ್ಟಿಗರು ಶಹಬಾಷ್ ಗಿರಿ ನೀಡಿದ್ದಾರೆ.

Viral Video: ಜಡೆಜಗಳವನ್ನು ನಿಲ್ಲಿಸಲು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ  ಸಿಂಪಡಿಸಿದ ಪೊಲೀಸ್, ವಿಡಿಯೋ ಇಲ್ಲಿದೆ ನೋಡಿ
ಜಡೆಜಗಳImage Credit source: Twitter
ಮಾಲಾಶ್ರೀ ಅಂಚನ್​
| Edited By: |

Updated on:May 13, 2023 | 5:57 PM

Share

ಸಾಮಾನ್ಯವಾಗಿ ಮಹಿಳೆಯರ ಬೀದಿಜಗಳಗಳನ್ನು ನೊಡಿರುತ್ತೇವೆ. ನೀರಿನ ವಿಷಯದಿಂದ ಹಿಡಿದು ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಾ, ಕೆಲವು ಹೆಂಗಸರು ಬೀದಿ ರಂಪ ಮಾಡುತ್ತಾರೆ. ಇನ್ನು ಈ ಮಹಿಳೆಯರ ಜಡಡೆಜಗಳವನ್ನು ನೋಡುವುದೆಂದರೆ ಕೆಲವರಿಗೆ ತಮಾಷೆಯಾಗಿಬಿಟ್ಟಿದೆ. ಇಂತಹ ಜಡೆ ಜಗಳಗಳ ಅದೆಷ್ಟೋ ಉದಾಹರಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವೀಡಿಯೋಗಳಲ್ಲಿಯೂ ನಾವು ನೋಡಿರುತ್ತೇವೆ ಅಂತಹದ್ದೇ ಜಡೆ ಜಗಳದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದನ್ನು ಮಾಡುತ್ತಿದೆ.

ಟ್ವಿಟರ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ವಿದೇಶದಲ್ಲಿ ಮಹಿಳೆಯರ ಗುಂಪೊಂದು ಕಿತ್ತಾಡಿಕೊಳ್ಳುತ್ತಾ ಬೀದಿ ಜಗಳದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು. ಮಹಿಳೆಯರು ರಸ್ತೆ ಬದಿಯ ಅಂಗಡಿಗಳ ಬಳಿ ತಮ್ಮ ಕೈಯಲ್ಲಿರುವ ವಸ್ತುಗಳನ್ನು ಕಿತ್ತು ಬಿಸಾಡುತ್ತಾ, ಜಡೆಗಳನ್ನು ಎಳೆದಾಡುತ್ತಾ ರಂಪಾಟವನ್ನು ಮಾಡುತ್ತಿರುತ್ತಾರೆ. ಅವರ ರಂಪಾಟವನ್ನು ಯಾರಿಂದಲೂ ತಡೆಯಲಾರದೆ ಜನರು ಮೂಕಪ್ರೇಕ್ಷಕರಂತೆ ಅವರ ಜಗಳವನ್ನು ನೋಡುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಪೋಲಿಸರೊಬ್ಬರು ಆ ಸ್ಥಳಕ್ಕೆ ಧಾವಿಸಿ, ಮಹಿಳೆಯರ ಜಗಳವನ್ನು ನಿಲ್ಲಿಸುವ ಸಲುವಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇಯನ್ನು ಸಿಂಪಡಿಸುತ್ತಾರೆ. ಅಷ್ಟರಲ್ಲಿ ಆ ಜಗಳಗಂಟಿಯರು ಮತ್ತು ಅಲ್ಲಿ ಅವರ ಜಗಳವನ್ನು ವೀಕ್ಷಿಸುತ್ತಿದ್ದ ಜನರು ಮೆಣಸಿನ ಸ್ಪ್ರೇಯ ಘಾಟನ್ನು ತಡೆಯಲಾರದೆ ಕೆಮ್ಮುತ್ತಾ, ಮುಖ ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇಷ್ಟಾದರೂ ಜಗಳವನ್ನು ನಿಲ್ಲಿಸದ ಮಹಿಳೆಯರ ಗುಂಪು ಒಂದಷ್ಟು ದೂರ ಹೋಗಿ ಮತ್ತೊಮ್ಮೆ ಜಡೆಗಳನ್ನು ಎಳೆದಾಡುತ್ತಾ ಜಗಳವಾಡುತ್ತಾರೆ. ತಕ್ಷಣ ಆ ಪೋಲಿಸ್ ಪೇದೆ ಅಲ್ಲಿಗೆ ಹೋಗಿ ಇನ್ನೊಮ್ಮೆ ಸರಿಯಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸುತ್ತಾರೆ.

ಇದನ್ನೂ ಓದಿ: ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?

ಈ ವೀಡಿಯೋವನ್ನು ‘ಕ್ಯಾಚ್ ಅಪ್’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಪೋಲಿಸ್ ಅಲ್ಲಿಗೆ ಹೋಗಿ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಮಾಡಿ ಕೆಲಸ ಮುಗಿದಿದೆ ಎಂಬಂತೆ ಹೊರನಡೆದರು’ ಎಂಬ ಶೀರ್ಷಿಕೆಯನ್ನು ವೀಡಿಯೋಗೆ ನೀಡಿದ್ದಾರೆ. ವೈರಲ್ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಹಾಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವರು ತರಹೇವಾರಿ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಆ ಮಹಿಳೆಯರನ್ನು ಬಂಧಿಸಬೆಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ರಸ್ತೆಗಳ ಉದ್ದಕ್ಕೂ ಇರುವ ಪ್ರತಿಯೊಂದು ಅಂಗಡಿಗಳು ಪೆಪ್ಪರ್ ಸ್ಪ್ರೇಯನ್ನು ಹೊಂದಿರಬೇಕು. ಮತ್ತು ಈ ರೀತಿ ಜಗಳವಾದಾಗ ಅದನ್ನು ಅವರ ಮುಖಕ್ಕೆ ಸಿಂಪಡಿಸಬೇಕು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೊಂದು ಉತ್ತಮ ಉಪಾಯ’ ಎಂದು ಹೇಳುತ್ತಾ ಪೋಲಿಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:57 pm, Sat, 13 May 23

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!