Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ

Helping : ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ನೆಲಗೆಬರಿ ಬೆಕ್ಕಿಗೆ ಹೊರಬರಲು ದಾರಿ ತೋರಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಾಗಿಲ್ಲ. ಮುಂದೆ?

ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ
ಬೆಕ್ಕಿಗೆ ಹೊರಬರಲು ಅನುಕೂಲವಾಗುವಂತೆ ನೆಲ ಗೆಬರುತ್ತಿರುವ ಮೊಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 15, 2023 | 3:03 PM

Viral Video : ನಮ್ಮ ನಮ್ಮ ದಾರಿಯನ್ನು ಹೇಗೆ ಸುಗಮಗೊಳಿಸಿಕೊಳ್ಳುವುದು ಎನ್ನುವತ್ತಲೇ ನಾವು ಯಾವಾಗಲೂ ಯೋಚಿಸುತ್ತಿರುತ್ತೇವೆ. ಇನ್ನು ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡಬೇಕೇ ಬೇಡವೇ, ಪ್ರತಿಫಲವೇನು ಎಂದು ಯೋಚಿಸಿ ನಿರ್ಧರಿಸುತ್ತೇವೆ ವಿನಾ ತಕ್ಷಣವೇ ಮುನ್ನುಗ್ಗಲಾರೆವು. ಏಕೆಂದರೆ ನಮ್ಮದು ಸ್ವಕೇಂದ್ರಿತ ಬದುಕು. ಹಾಗಾಗಿ ನಮ್ಮವರು ಯಾರು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ಗುರುತಿಟ್ಟುಕೊಳ್ಳುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಬಹಳ ಆಸಕ್ತಿಕರವಾಗಿದೆ.

ಮೇಲಿನ ವಿಡಿಯೋದಲ್ಲಿ ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ಬೆಕ್ಕಿಗೆ ಹೊರಬರಲು ದಾರಿ ತೋರಲು ಪ್ರಯತ್ನಿಸಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಲ್ಲ ಎಂಬಂಥ ವರ್ತನೆಯನ್ನು ಇಲ್ಲಿ ಕಾಣಬಹುದು. ಆದರೆ ಬೆಕ್ಕು ಮಾತ್ರ ಮೊಲದ ಮುಖಕ್ಕೆ, ಕಣ್ಣಿಗೆ ತನ್ನ ಪಂಜದಿಂದ ಹೊಡೆಯುವುದನ್ನು ಮಾತ್ರ ಬಿಟ್ಟಿಲ್ಲ! ಬಹುಶಃ ಬೆಕ್ಕು ಗಾಬರಿಯಿಂದ ಹಾಗೆ ಮಾಡಿರುತ್ತದೆ. ಆದರೂ ಮೊಲ ನೆಲಗೆಬರಿ ಅದಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ ; ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು; ಹೌದೆ?

ಮೇ 13 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.3 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 66,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 9,000 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ

ಮುಂದೆ ಏನಾಯಿತು, ಆ ಬೆಕ್ಕು ಮೊಲವನ್ನು ತಿಂದಿತೇ? ಎಂದು ಕೇಳಿದ್ದಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ ಬೆಕ್ಕನ್ನು ರಕ್ಷಿಸಬಹುದಾಗಿತ್ತಲ್ಲವೆ? ಎಂದು ಕೇಳಿದ್ದಾರೆ. ಮೊಲ ಬೆಕ್ಕಿನಿಂದ ಮುಖ ಗಾಯ ಮಾಡಿಕೊಂಡರೂ ಸುಮ್ಮನೇ ಹೊರಟುಹೋಗಿದೆ. ಬಹುಶಃ ಬೆಕ್ಕಿಗೆ ತನ್ನ ತಪ್ಪಿನ ಅರಿವಾಗಿ ಸುಮ್ಮನುಳಿದಿರುವ ಸಾಧ್ಯತೆ ಇದೆ ಎಂದು ಕೆಲವರು ಹೇಳಿದ್ದಾರೆ. ಸಹಾಯ ಮಾಡುವ ಮತ್ತು ತೆಗೆದುಕೊಳ್ಳುವ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:52 pm, Mon, 15 May 23

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ