AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ

Helping : ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ನೆಲಗೆಬರಿ ಬೆಕ್ಕಿಗೆ ಹೊರಬರಲು ದಾರಿ ತೋರಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಾಗಿಲ್ಲ. ಮುಂದೆ?

ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ
ಬೆಕ್ಕಿಗೆ ಹೊರಬರಲು ಅನುಕೂಲವಾಗುವಂತೆ ನೆಲ ಗೆಬರುತ್ತಿರುವ ಮೊಲ
TV9 Web
| Updated By: ಶ್ರೀದೇವಿ ಕಳಸದ|

Updated on:May 15, 2023 | 3:03 PM

Share

Viral Video : ನಮ್ಮ ನಮ್ಮ ದಾರಿಯನ್ನು ಹೇಗೆ ಸುಗಮಗೊಳಿಸಿಕೊಳ್ಳುವುದು ಎನ್ನುವತ್ತಲೇ ನಾವು ಯಾವಾಗಲೂ ಯೋಚಿಸುತ್ತಿರುತ್ತೇವೆ. ಇನ್ನು ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡಬೇಕೇ ಬೇಡವೇ, ಪ್ರತಿಫಲವೇನು ಎಂದು ಯೋಚಿಸಿ ನಿರ್ಧರಿಸುತ್ತೇವೆ ವಿನಾ ತಕ್ಷಣವೇ ಮುನ್ನುಗ್ಗಲಾರೆವು. ಏಕೆಂದರೆ ನಮ್ಮದು ಸ್ವಕೇಂದ್ರಿತ ಬದುಕು. ಹಾಗಾಗಿ ನಮ್ಮವರು ಯಾರು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ಗುರುತಿಟ್ಟುಕೊಳ್ಳುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಬಹಳ ಆಸಕ್ತಿಕರವಾಗಿದೆ.

ಮೇಲಿನ ವಿಡಿಯೋದಲ್ಲಿ ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ಬೆಕ್ಕಿಗೆ ಹೊರಬರಲು ದಾರಿ ತೋರಲು ಪ್ರಯತ್ನಿಸಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಲ್ಲ ಎಂಬಂಥ ವರ್ತನೆಯನ್ನು ಇಲ್ಲಿ ಕಾಣಬಹುದು. ಆದರೆ ಬೆಕ್ಕು ಮಾತ್ರ ಮೊಲದ ಮುಖಕ್ಕೆ, ಕಣ್ಣಿಗೆ ತನ್ನ ಪಂಜದಿಂದ ಹೊಡೆಯುವುದನ್ನು ಮಾತ್ರ ಬಿಟ್ಟಿಲ್ಲ! ಬಹುಶಃ ಬೆಕ್ಕು ಗಾಬರಿಯಿಂದ ಹಾಗೆ ಮಾಡಿರುತ್ತದೆ. ಆದರೂ ಮೊಲ ನೆಲಗೆಬರಿ ಅದಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ ; ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು; ಹೌದೆ?

ಮೇ 13 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.3 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 66,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 9,000 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ

ಮುಂದೆ ಏನಾಯಿತು, ಆ ಬೆಕ್ಕು ಮೊಲವನ್ನು ತಿಂದಿತೇ? ಎಂದು ಕೇಳಿದ್ದಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ ಬೆಕ್ಕನ್ನು ರಕ್ಷಿಸಬಹುದಾಗಿತ್ತಲ್ಲವೆ? ಎಂದು ಕೇಳಿದ್ದಾರೆ. ಮೊಲ ಬೆಕ್ಕಿನಿಂದ ಮುಖ ಗಾಯ ಮಾಡಿಕೊಂಡರೂ ಸುಮ್ಮನೇ ಹೊರಟುಹೋಗಿದೆ. ಬಹುಶಃ ಬೆಕ್ಕಿಗೆ ತನ್ನ ತಪ್ಪಿನ ಅರಿವಾಗಿ ಸುಮ್ಮನುಳಿದಿರುವ ಸಾಧ್ಯತೆ ಇದೆ ಎಂದು ಕೆಲವರು ಹೇಳಿದ್ದಾರೆ. ಸಹಾಯ ಮಾಡುವ ಮತ್ತು ತೆಗೆದುಕೊಳ್ಳುವ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:52 pm, Mon, 15 May 23

ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್