AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಯ್ಯಯ್ಯೋ! 500 ರೂಪಾಯಿ ನೋಟನ್ನು ಎಗರಿಸಿದ ಖತರ್ನಾಕ್ ಕಾಗೆ, ಮುಂದೇನಾಯಿತು?

ಪ್ರಾಣಿ ಪಕ್ಷಿಗಳು ಮಾಡುವ ಕುಚೇಷ್ಟೆಗಳು ಒಂದೆರಡಲ್ಲ. ಇಂತಹ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದನ್ನು ನೋಡುತ್ತೇವೆ. ಇದೀಗ ಇಂತಹ ವಿಡಿಯೋವೊಂದು ಕಾಗೆಯೊಂದು 500 ರೂಪಾಯಿ ಎಗರಿಸಿ, ಕೊನೆಗೆ ದ್ರಾಕ್ಷಿ ಹಣ್ಣು ಖರೀದಿ ಮಾಡಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Viral Video : ಅಯ್ಯಯ್ಯೋ! 500 ರೂಪಾಯಿ ನೋಟನ್ನು ಎಗರಿಸಿದ ಖತರ್ನಾಕ್ ಕಾಗೆ, ಮುಂದೇನಾಯಿತು?
ಸಾಯಿನಂದಾ
| Edited By: |

Updated on: Apr 06, 2024 | 6:14 PM

Share

ದಿನಬೆಳಗಾದರೆ ಮನೆಯ ಅಂಗಳದಲ್ಲಿ ಹಾರಾಡುತ್ತಾ ಕಾ ಕಾ ಎಂದು ಕೂಗುವ ಈ ಕಾಗೆಗಳನ್ನು ನೋಡುತ್ತಲೇ ಇದೆ. ತನಗೆ ಏನಾದರೂ ಆಹಾರ ಸಿಕ್ಕರೆ ತನ್ನ ಬಳಗವನ್ನು ಕರೆದು ಒಟ್ಟಿಗೆ ತಿನ್ನುವ ಗುಣ ಕಾಗೆಯದ್ದು. ಏನಾದರೂ ಆಹಾರ ಬಿದ್ದದ್ದು ಕಂಡರೆ ಹಾರಿ ಹೋಗಿ ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಗಿ ತಿನ್ನುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಾಗೆಯು ಮಹಿಳೆಯು ಇಟ್ಟಿದ್ದ 500 ರೂಪಾಯಿಯನ್ನು ಎಗರಿಸಿದೆ. ಕೊನೆಗೆ ಬುದ್ದಿವಂತಿಕೆಯಿಂದ 500 ರೂಪಾಯಿ ಕೊಟ್ಟು ದ್ರಾಕ್ಷಿ ಹಣ್ಣು ಖರೀದಿ ಮಾಡಿದೆ.

ಮಂಗಳೂರಿನ ರಜನಿ ಶೆಟ್ಟಿಯವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡ ವಿಡಿಯೋ ಇದಾಗಿದೆ. ಈ ವಿಡಿಯೋಗೆ “ನನ್ನ ಕಾಗೆ ಶಾಪಿಂಗ್ ಹೋಗಲು ರೆಡಿಯಾಗಿದೆ ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ರಜನಿಶೆಟ್ಟಿಯವರು, ಮರದ ದಿಮ್ಮಿಯ ಮೇಲೆ 500 ರೂಪಾಯಿ ನೋಟನ್ನು ಇಟ್ಟು ಏನೋ ಕೆಲಸ ಮಾಡಲು ಮುಂದಾಗಿದ್ದಾರೆ. ಆದರೆ ಹಾರುತ್ತಾ ಬಂದ ಕಾಗೆಯು ಆ ನೋಟನ್ನು ಕೊಕ್ಕಿನಲ್ಲಿ ಎತ್ತಿಕೊಂಡು ಹಾರಿಹೋಗಿದೆ.

ಇದನ್ನೂ ಓದಿ: ಗಂಡನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದು 26 ವರ್ಷದ ಯುವತಿಯೊಂದಿಗೆ ಮದುವೆ ಮಾಡಿದ ಖ್ಯಾತ ಗಾಯಕಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮುಂದೇನು ಮಾಡಬೇಕೆಂದು ಗೊತ್ತಾಗದೇ 500 ರೂಪಾಯಿಯನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ಪ್ಲಾನ್ ಮಾಡಿದ್ದಾರೆ. ಆ ಬಳಿಕ ಕಾಗೆಗೆ ಕಲ್ಲಂಗಡಿ ಹಣ್ಣನ್ನು ನೀಡಿದ್ದಾರೆ. ಆದರೆ ಈ ಕಾಗೆ ಮಾತ್ರ ಏನು ಕೊಟ್ಟರೂ 500 ರೂಪಾಯಿ ಬಿಡಲ್ಲ ಎನ್ನುವಂತೆ ಕೂತಿದೆ. ಕೊನೆಗೆ ಕಾಗೆಗೆ ದ್ರಾಕ್ಷಿ ಹಣ್ಣನ್ನು ನೀಡಿದ್ದು, ಕೊಕ್ಕಿನಲ್ಲಿದ್ದ 500 ರೂಪಾಯಿಯನ್ನು ಬಿಟ್ಟು ದ್ರಾಕ್ಷಿಯನ್ನು ತೆಗೆದುಕೊಂಡಿದೆ. 500 ರೂಪಾಯಿ ಸಿಕ್ಕಿತ್ತಲ್ಲ ಎಂದು ರಜನಿ ಶೆಟ್ಟಿಯವರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ