AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದೇನೆ ಎಂದು ಬೀಗಬೇಡ, ಫುಟ್​ಬ್ರಿಡ್ಜ್​ನಲ್ಲಿ ಆಟೋ ಸಂಚರಿಸಿದ್ದನ್ನು ನೋಡಿದ್ದೇವೆ

ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.

Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದೇನೆ ಎಂದು ಬೀಗಬೇಡ, ಫುಟ್​ಬ್ರಿಡ್ಜ್​ನಲ್ಲಿ ಆಟೋ ಸಂಚರಿಸಿದ್ದನ್ನು ನೋಡಿದ್ದೇವೆ
ಫುಟ್​ಬ್ರಿಡ್ಜ್ ಮೇಲೆ ಆಟೋ ಚಲಾಯಿದ ಚಾಲಕ
TV9 Web
| Edited By: |

Updated on:Aug 20, 2022 | 1:00 PM

Share

ಕೆಲವು ವಾಹನ ಸವಾರರು ಅದರಲ್ಲೂ ಆಟೋ, ಬೈಕ್ ಚಲಾಯಿಸುವವರು ಬೇಗ ತಲುಪಬೇಕು ಎಂಬ ದಾವಂತದಲ್ಲಿ ಅಡ್ಡದಾರಿಯನ್ನು ಹಿಡಿಯುವುದುನ್ನು ನೀವು ನೋಡಿರುತ್ತೀರಿ. ಒಂದಷ್ಟು ದೂರದಲ್ಲಿ ಯೂ ಟರ್ನ್ ಪಡೆಯಲು ಇದ್ದರೆ ಕೆಲವೊಂದು ಬೈಕ್​ಗಳು, ಆಟೋಗಳು ಹೆದ್ದಾರಿಯಲ್ಲಿ ಅದಕ್ಕೂ ಮುನ್ನ ಯಾವುದಾದರೊಂದು ಸಣ್ಣ ದಾರಿ ಇದ್ದರೆ ನುಗ್ಗಿಸಿ ಬಿಡುತ್ತಾರೆ. ಟ್ರಾಫಿಕ್ ಉಂಟಾದಾಗ ಕೆಲವು ಬೈಕ್ ಸವಾರರು ಫುಟ್​ಬಾತ್​ನಲ್ಲಿ ಸಂಚರಿವುದನ್ನು ಕೂಡ ನೋಡಿದ್ದೀರಿ. ಆದರೆ ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.

ಆಟೋ ಚಾಲಕನೊಬ್ಬ ವಿರಾರ್ ಬಳಿಯ NH48 ನಲ್ಲಿ ಹೆದ್ದಾರಿ ದಾಟಲು ಫುಟ್​ಬ್ರಿಡ್ಜ್ ಆಯ್ಕೆ ಮಾಡಿಕೊಂಡಿದ್ದಾನೆ. ಹೆದ್ದಾರಿಯ ಒಂದು ಭಾಗದಿಂದ ಬ್ರಿಡ್ಜ್ ಮೇಲಕ್ಕೆ ಆಟೋವನ್ನು ಹತ್ತಿಸಿದ ಚಾಲಕ ಇನ್ನೊಂದು ಕಡೆಯಿಂದ ಇಳಿದಿದ್ದಾನೆ. ಈ ದೃಶ್ಯಾವಳಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆಹಿಡಿಯಲಾಗಿದ್ದು, ‘ಇಟ್ಸ್ ಮೈ ಲೈಫ್’ ಎಂಬ ಬ್ಯಾಗ್ರೌಂಡ್ ಹಾಡಿನೊಂದಿಗೆ ವೈರಲ್ ಮಾಡಲಾಗಿದೆ.

ರೋಡ್ಸ್ ಆಫ್ ಮುಂಬೈ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ವಿಡಿಯೋ ನೀಡಿದ ಮುಂಬೈ ಪೊಲೀಸರು, ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳದ ನಿಖರ ಮಾಹಿತಿ ನೀಡುವಂತೆ ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಅದು NH48 ನಲ್ಲಿ 2 ಹಳ್ಳಿಗಳಿಗೆ ದಾಟುವ ಮಾರ್ಗವಾಗಿದೆ. ಇದು ವಿರಾರ್ ಬಳಿ ಎಲ್ಲೋ ಇದೆ. ನಾನು ಅಲ್ಲಿಗೆ ಹೋಗಿದ್ದೇನೆ” ಎಂದಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sat, 20 August 22

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ