AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದೇನೆ ಎಂದು ಬೀಗಬೇಡ, ಫುಟ್​ಬ್ರಿಡ್ಜ್​ನಲ್ಲಿ ಆಟೋ ಸಂಚರಿಸಿದ್ದನ್ನು ನೋಡಿದ್ದೇವೆ

ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.

Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದೇನೆ ಎಂದು ಬೀಗಬೇಡ, ಫುಟ್​ಬ್ರಿಡ್ಜ್​ನಲ್ಲಿ ಆಟೋ ಸಂಚರಿಸಿದ್ದನ್ನು ನೋಡಿದ್ದೇವೆ
ಫುಟ್​ಬ್ರಿಡ್ಜ್ ಮೇಲೆ ಆಟೋ ಚಲಾಯಿದ ಚಾಲಕ
TV9 Web
| Edited By: |

Updated on:Aug 20, 2022 | 1:00 PM

Share

ಕೆಲವು ವಾಹನ ಸವಾರರು ಅದರಲ್ಲೂ ಆಟೋ, ಬೈಕ್ ಚಲಾಯಿಸುವವರು ಬೇಗ ತಲುಪಬೇಕು ಎಂಬ ದಾವಂತದಲ್ಲಿ ಅಡ್ಡದಾರಿಯನ್ನು ಹಿಡಿಯುವುದುನ್ನು ನೀವು ನೋಡಿರುತ್ತೀರಿ. ಒಂದಷ್ಟು ದೂರದಲ್ಲಿ ಯೂ ಟರ್ನ್ ಪಡೆಯಲು ಇದ್ದರೆ ಕೆಲವೊಂದು ಬೈಕ್​ಗಳು, ಆಟೋಗಳು ಹೆದ್ದಾರಿಯಲ್ಲಿ ಅದಕ್ಕೂ ಮುನ್ನ ಯಾವುದಾದರೊಂದು ಸಣ್ಣ ದಾರಿ ಇದ್ದರೆ ನುಗ್ಗಿಸಿ ಬಿಡುತ್ತಾರೆ. ಟ್ರಾಫಿಕ್ ಉಂಟಾದಾಗ ಕೆಲವು ಬೈಕ್ ಸವಾರರು ಫುಟ್​ಬಾತ್​ನಲ್ಲಿ ಸಂಚರಿವುದನ್ನು ಕೂಡ ನೋಡಿದ್ದೀರಿ. ಆದರೆ ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.

ಆಟೋ ಚಾಲಕನೊಬ್ಬ ವಿರಾರ್ ಬಳಿಯ NH48 ನಲ್ಲಿ ಹೆದ್ದಾರಿ ದಾಟಲು ಫುಟ್​ಬ್ರಿಡ್ಜ್ ಆಯ್ಕೆ ಮಾಡಿಕೊಂಡಿದ್ದಾನೆ. ಹೆದ್ದಾರಿಯ ಒಂದು ಭಾಗದಿಂದ ಬ್ರಿಡ್ಜ್ ಮೇಲಕ್ಕೆ ಆಟೋವನ್ನು ಹತ್ತಿಸಿದ ಚಾಲಕ ಇನ್ನೊಂದು ಕಡೆಯಿಂದ ಇಳಿದಿದ್ದಾನೆ. ಈ ದೃಶ್ಯಾವಳಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆಹಿಡಿಯಲಾಗಿದ್ದು, ‘ಇಟ್ಸ್ ಮೈ ಲೈಫ್’ ಎಂಬ ಬ್ಯಾಗ್ರೌಂಡ್ ಹಾಡಿನೊಂದಿಗೆ ವೈರಲ್ ಮಾಡಲಾಗಿದೆ.

ರೋಡ್ಸ್ ಆಫ್ ಮುಂಬೈ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ವಿಡಿಯೋ ನೀಡಿದ ಮುಂಬೈ ಪೊಲೀಸರು, ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳದ ನಿಖರ ಮಾಹಿತಿ ನೀಡುವಂತೆ ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಅದು NH48 ನಲ್ಲಿ 2 ಹಳ್ಳಿಗಳಿಗೆ ದಾಟುವ ಮಾರ್ಗವಾಗಿದೆ. ಇದು ವಿರಾರ್ ಬಳಿ ಎಲ್ಲೋ ಇದೆ. ನಾನು ಅಲ್ಲಿಗೆ ಹೋಗಿದ್ದೇನೆ” ಎಂದಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sat, 20 August 22

Follow Us
Web contact
Web contact

TV9 Kannada

Read More
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?