AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್​ಫೋನ್ ಕೊಡಿಸಿದ ಟೀ ವ್ಯಾಪಾರಿ!

Trending Video: ಸೋಮವಾರ ರಾತ್ರಿ ಮೆರವಣಿಗೆ ಮೂಲಕ ಸ್ಮಾರ್ಟ್​ಫೋನ್ ಜೊತೆಗೆ 5 ವರ್ಷದ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ರಸ್ತೆಯ ಬೀದಿಗಳಲ್ಲಿ ಕರೆತರಲಾಯಿತು. ಆ ಸಂಭ್ರಮಾಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್​ಫೋನ್ ಕೊಡಿಸಿದ ಟೀ ವ್ಯಾಪಾರಿ!
ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಬ್ಯಾಂಡ್ ಬಾಜಾದೊಂದಿಗೆ ಮೆರವಣಿಗೆ
TV9 Web
| Edited By: |

Updated on:Dec 22, 2021 | 4:52 PM

Share

ಶಿವಪುರಿ: ಜೀವನವೆಂದರೆ ಚಿಕ್ಕ ಚಿಕ್ಕ ಖುಷಿಗಳನ್ನೂ ಸಂಭ್ರಮಿಸುವುದು. ಸಣ್ಣ ಸಣ್ಣ ಸಂಭ್ರಮಗಳಲ್ಲೇ ನೆಮ್ಮದಿ ಕಾಣುವ ಅದೆಷ್ಟೋ ಜನರಿದ್ದಾರೆ. ಮಧ್ಯಪ್ರದೇಶದಲ್ಲಿ ಟೀ ಮಾರುವವರೊಬ್ಬರು ತಮ್ಮ ಐದು ವರ್ಷದ ಮಗಳಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಬ್ಯಾಂಡ್ ಬಾಜಾದೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ. ಮೆರವಣಿಗೆಯಲ್ಲಿ ಮಗಳನ್ನು ಕೂರಿಸಿ ಆಕೆಗೆ ಸ್ಮಾರ್ಟ್​ಫೋನ್ ನೀಡಿ ಸರ್​ಪ್ರೈಸ್ ನೀಡಿದ್ದಾರೆ. ಬ್ಯಾಂಡ್​ನ ಡ್ರಮ್ ಬೀಟ್‌ಗಳಿಗೆ ಜನರೆಲ್ಲ ನೃತ್ಯ ಮಾಡುತ್ತಿದ್ದರೆ, ಅವರ ಮಗಳು ಅಲಂಕರಿಸಿದ ಕುದುರೆ ಗಾಡಿಯ ಮೇಲೆ ಕುಳಿತು ಸಂಭ್ರಮಿಸುತ್ತಿದ್ದಳು.

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ತಮ್ಮ ಕುಟುಂಬದ ಮೊದಲ ಸ್ಮಾರ್ಟ್‌ಫೋನ್ ಎಂದು ಆ 5 ವರ್ಷದ ಬಾಲಕಿಯ ತಂದೆ ಮುರಾರಿ ಕುಶ್ವಾಹಾ ಹೇಳಿದ್ದಾರೆ. ಟೀ ಮಾರುವ ಅವರು 12,500 ರೂ. ನೀಡಿ ಪುಟ್ಟ ಮಗಳಿಗಾಗಿ ಸ್ಮಾರ್ಟ್​ಫೋನ್ ಖರೀದಿಸಿದ್ದಾರೆ.

ಸೋಮವಾರ ರಾತ್ರಿ ಮೆರವಣಿಗೆ ಮೂಲಕ ಸ್ಮಾರ್ಟ್​ಫೋನ್ ಜೊತೆಗೆ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ರಸ್ತೆಯ ಬೀದಿಗಳಲ್ಲಿ ಕರೆತರಲಾಯಿತು. ಆ ಸಂಭ್ರಮಾಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐದು ವರ್ಷದ ಬಾಲಕಿ ಮತ್ತು ಅವಳ ಸೋದರ-ಸೋದರಿಯರು ದೀಪಗಳಿಂದ ಅಲಂಕರಿಸಲ್ಪಟ್ಟ ಕುದುರೆ ಗಾಡಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಮೆರವಣಿಗೆಯಲ್ಲಿ ಜನರು ಕುಣಿಯುತ್ತಿರುವಾಗ ಧ್ವನಿವರ್ಧಕದಲ್ಲಿ ಹಾಡು ಪ್ಲೇ ಆಗುತ್ತಿತ್ತು. ಆ ಹಾಡಿಗೆ ಎಲ್ಲರೂ ಹೆಜ್ಜೆ ಹಾಕುತ್ತಿದ್ದರು.

ಚಹಾವನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುವ ಮುರಾರಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮಗಳಿಗಾಗಿ ಮೊಬೈಲ್ ಖರೀದಿಸಿದ ನಂತರ, ಸ್ಮಾರ್ಟ್​ಫೋನ್ ಅಂಗಡಿಯಿಂದ ಶಿವಪುರಿ ಪಟ್ಟಣದ ಹಳೆಯ ಪ್ರದೇಶದಲ್ಲಿರುವ ನಮ್ಮ ಮನೆಗೆ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ಆಕೆಯ ಕೈಯಲ್ಲಿ ಮೊಬೈಲ್ ಕೊಟ್ಟು ಮೆರವಣಿಗೆಯನ್ನು ಕರೆದೊಯ್ಯಲಾಯಿತು. ಡೊಳ್ಳು ಬಾರಿಸುವ ಜತೆಗೆ ಪಟಾಕಿ ಸಿಡಿಸುವ ಜತೆಗೆ ಕುದುರೆ ಗಾಡಿಯೂ ಇತ್ತು. ಇದು ನಮ್ಮ ಕುಟುಂಬದ ಮೊದಲ ಫೋನ್ ಆದ್ದರಿಂದ ಸಂಭ್ರಮದಿಂದ ಸ್ಮಾರ್ಟ್​ಫೋನನ್ನು ಬರಮಾಡಿಕೊಳ್ಳಲಾಯಿತು ಎಂದಿದ್ದಾರೆ.

ನನ್ನ ಐದು ವರ್ಷದ ಮಗಳು ತನಗಾಗಿ ಮೊಬೈಲ್ ಫೋನ್ ಕೊಡಿಸುವಂತೆ ಬಹಳ ಸಮಯದಿಂದ ಕೇಳುತ್ತಲೇ ಇದ್ದಳು. ನಿನಗೆ ನಾನು ಫೋನ್ ಖರೀದಿಸಿದಾಗ ಇಡೀ ನಗರವೇ ಅದಕ್ಕೆ ಸಾಕ್ಷಿಯಾಗಲಿದೆ ಎಂದು ನನ್ನ ಮಗಳಿಗೆ ಭರವಸೆ ನೀಡಿದ್ದೆ. ಮೊಬೈಲ್ ಖರೀದಿಸಲು ಅಗತ್ಯವಿದ್ದ ಹಣದ ಕೊರತೆ ಇದ್ದ ಕಾರಣ ಅಂಗಡಿಯವನ ಬಳಿ ಸಾಲ ಮಾಡಿ ಸ್ಮಾರ್ಟ್​ಫೋನ್ ಖರೀದಿಸಿದ್ದೇನೆ. ನನ್ನ ಮಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಮುರಾರಿ ಹೇಳಿದ್ದಾರೆ.

ಇದನ್ನೂ ಓದಿ: Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!

Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!

Published On - 4:52 pm, Wed, 22 December 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ