AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

ಕುಕ್ಕರ್​ನಲ್ಲಿ ಕಾಫಿ ತಯಾರಿಸಿ ಹೊಗೆಯಾಡುವ ಕಾಫಿಯನ್ನು ರಸ್ತೆಬದಿಯಲ್ಲಿ ಕುಡಿಯುವ ಆನಂದವೇ ಬೇರೆ. ಅರೇ ಇದೆನಿದು ಕುಕ್ಕರ್​ನಲ್ಲಿ ಕಾಫಿ ತಯಾರಿಸುವುದೇ ಎನ್ನುತ್ತಿದ್ದೀರಾ ಈ ಸ್ಟೋರಿ ಓದಿ 

Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​
ಕುಕ್ಕರ್​ನಲ್ಲಿ ಕಾಫಿ ತಯಾರಿಸುತ್ತಿರುವುದು
TV9 Web
| Updated By: Pavitra Bhat Jigalemane|

Updated on:Dec 23, 2021 | 10:17 AM

Share

ಚಳಿಗಾಲದಲ್ಲಿ ಮೈ ಕೊರೆಯುವ ಚಳಿಯ ನಡುವೆ ಬಿಸಿ ಬಿಸಿ ಕಾಫಿ ಅಥವಾ ಚಹಾ ಹೀರಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಆಹ್ಲಾದತೆ. ಹೀಗಿದ್ದಾಗ ಕುಕ್ಕರ್​ನಲ್ಲಿ ಕಾಫಿ ತಯಾರಿಸಿ ಹೊಗೆಯಾಡುವ ಕಾಫಿಯನ್ನು ರಸ್ತೆಬದಿಯಲ್ಲಿ ಕುಡಿಯುವ ಆನಂದವೇ ಬೇರೆ. ಅರೇ ಇದೆನಿದು ಕುಕ್ಕರ್​ನಲ್ಲಿ ಕಾಫಿ ತಯಾರಿಸುವುದೇ ಎನ್ನುತ್ತಿದ್ದೀರಾ ಈ ಸ್ಟೋರಿ ಓದಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವಿಭಿನ್ನ ಸನ್ನಿವೇಶಗಳ ವೀಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಕೆಲವೊಂದು ಸಾಮಾನ್ಯವಾಗಿ ಕಾಣುವ ದೃಶ್ಯಗಳಾಗಿದ್ದರೂ ನಮಗೆ ಅಚ್ಚರಿ ಎನಿಸುತ್ತದೆ. ಅಂತಹ ಒಂದು ವೀಡಿಯೋ ಯುಟ್ಯೂಬ್​ನಲ್ಲಿ ವೈರಲ್​ ಆಗಿದೆ.

ಚಹಾ ಮಾಡುವುದು ಸಾಮಾನ್ಯವಾಗಿ ಪಾತ್ರೆಯಲ್ಲಿ ಆದರೆ ಕಾಫಿ ಸೆಲ್ಲರ್​ ಒಬ್ಬರು ಕುಕ್ಕರ್​ನಲ್ಲಿ  ಕಾಫಿ ತಯಾರಿಸಿ ಮಾರುತ್ತಿದ್ದಾರೆ. ಇದರ ವೀಡಿಯೋ ಈಗ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.  ಈ ಹಿಂದೆ ಕುಕ್ಕರ್​ನಲ್ಲಿ ಬಜ್ಜಿ ಕರಿಯುವ ವೀಡಿಯೋ ವೈರಲ್​ ಆಗಿತ್ತು. ಆದರೆ ಈಗ ಕುಕ್ಕರ್​ ನಲ್ಲಿ ಕಾಫಿ ಮಾಡುವುದನ್ನು ನೋಡಿದ ನೆಟ್ಟಿಗರು ವಾವ್​ ಎಂದಿದ್ದಾರೆ.

ಯುಟ್ಯೂಬ್​ ಫುಡ್​ ಬ್ಲಾಗರ್​ ವಿಶಾಲ್​ ಎನ್ನುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.  ಸೈಕಲ್​ನಲ್ಲಿ  ಕಾಫಿ ತಯಾರಿಸುವ  ಪಾತ್ರೆಗಳನ್ನು ಇಟ್ಟುಕೊಂಡು ಬಂದ ವ್ಯಕ್ತಿ ಒದಲು ನೀರಿನ ಜಗ್​ ಅನ್ನು ತೆಗೆದು, ನಂತರ ಕುಕ್ಕರ್​ಗೆ ಹಾಲು, ಸಕ್ಕರೆ ಕಾಫಿ ಪುಡಿಯನ್ನು ಹಾಕಿ ಮುಚ್ಚಳವನ್ನು ಹಾಕುತ್ತಾನೆ. ಬಳಿಕ ಕುಕ್ಕರ್​ ನಿಂದ ಪೈಪ್​ ಮೂಲಕ ಜಗ್​ ಗೆ ಕಾಫಿಯನ್ನು ವರ್ಗಾಯಿಸುತ್ತಾನೆ. ಇದು ನೆಟ್ಟಿಗರನ್ನು ಸೆಳೆದಿದೆ.ಕಾಫಿ ತಯಾರುಸುವವನ ಕೈಚಳಕಕ್ಕೆ ಮಾರುಹೋಗಿದ್ದಾರೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 48 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಇದನ್ನೂ ಓದಿ:

Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್​ಫೋನ್ ಕೊಡಿಸಿದ ಟೀ ವ್ಯಾಪಾರಿ!

Published On - 10:14 am, Thu, 23 December 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!