AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪ್ರತಿಸ್ಪರ್ಧಿ ಝೋಮ್ಯಾಟೋ ಡೆಲಿವರಿ ಬಾಯ್ ಕೈ ಹಿಡಿದುಕೊಂಡು ಹೋದ ಸ್ವಿಗ್ಗಿ ಆಹಾರ ವಿತರಕ; ವೈರಲ್ ವಿಡಿಯೋ ಇಲ್ಲಿದೆ

ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್​ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ರೀತಿ ಪರಸ್ಪರ ಸಹಾಯ ಮಾಡಿದ್ದು ಇದೇ ಮೊದಲಲ್ಲ. ಈ ಬಗ್ಗೆ ವರದಿ ಇಲ್ಲಿದೆ.

Viral Video: ಪ್ರತಿಸ್ಪರ್ಧಿ ಝೋಮ್ಯಾಟೋ ಡೆಲಿವರಿ ಬಾಯ್ ಕೈ ಹಿಡಿದುಕೊಂಡು ಹೋದ ಸ್ವಿಗ್ಗಿ ಆಹಾರ ವಿತರಕ; ವೈರಲ್ ವಿಡಿಯೋ ಇಲ್ಲಿದೆ
ಪ್ರತಿಸ್ಪರ್ಧಿಗಳಿಗೆ ಸಹಾಯ ಮಾಡಿದ ದೃಶ್ಯಾವಳಿ ಸೆರೆ
TV9 Web
| Edited By: Rakesh Nayak Manchi|

Updated on:Jul 18, 2022 | 10:29 AM

Share

ಒಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಎಲ್ಲೂ ಸಿಗಲಾರದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಆಹಾರ ವಿತರಣಾ ಪ್ರತಿಸ್ಪರ್ಧಿಗಳದ್ದಾಗಿದೆ. ನಮಗೂ ನಿಮಗೂ ತಿಳಿದಿರುವಂತೆ ಆಹಾರ ವಿತರಕರು ನಾವು ಯಾವುದೇ ಸಂದರ್ಭದಲ್ಲಿ ಆಹಾರ ಆರ್ಡರ್ ಮಾಡಿದರೆ ಡೆಡ್​ಲೈನ್​ಗೆ ಸರಿಯಾಗಿ ಆಹಾರ ಡೆಲಿವೆರಿ ಮಾಡುತ್ತಾರೆ. ಆದರೂ ಕೆಲವೊಮ್ಮೆ ಕೆಲವು ವಿತರಕರು ಸೈಕಲ್​ನಂತಹ ವಾಹನಗಳನ್ನು ಬಳಸುವುದರಿಂದ ಆಹಾರ ಡೆಲಿವರಿ ಸಮಯದಲ್ಲಿ ಏರುಪೇರು ಆಗುತ್ತವೆ. ಹೀಗಾಗಬಾರದು ಎಂಬ ಕಾರಣಕ್ಕೆ ಸೈಕಲ್​ನಲ್ಲಿ ಹೋಗುತ್ತಿದ್ದ ಝೋಮ್ಯಾಟೋ (Zomato) ಆಹಾರ ವಿತರಕನನ್ನು ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ (Swiggy) ಆಹಾರ ವಿತರಕ ಕೈ ಹಿಡಿದುಕೊಂಡು ರಸ್ತೆಯಲ್ಲಿ ಸಾಗಿದ್ದಾರೆ.

ಕಾರು ಚಾಲಕರೊಬ್ಬರು ಮೊಬೈಲ್ ಮೂಲಕ ಅದ್ಭುತ ಸ್ನೇಹದ ದೃಶ್ಯಾವಳಿಯನ್ನು ಸೆರೆಹಿಡಿದ್ದಾರೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್​ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಪ್ರತಿಸ್ಪರ್ಧಿ ಕಂಪನಿಯಾಗಿದ್ದರೂ ಕಷ್ಟಕ್ಕೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಸನ್ನಾ ಅರೋರಾ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಜುಲೈ 9 ರಂದು ಹಂಚಿಕೊಂಡಿದ್ದು, “ದೆಹಲಿಯಲ್ಲಿ ಈ ಅತ್ಯಂತ ಬಿಸಿ ಮತ್ತು ಅಸಹನೀಯ ದಿನಗಳಲ್ಲಿ ಕಂಡ ನಿಜವಾದ ಸ್ನೇಹ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ವೈರಲ್ ಪಡೆದು ಈವರೆಗೆ 4.66 ಲಕ್ಷ ಲೈಕ್​ಗಳು ಬಂದಿದ್ದು, ಸ್ನೇಹವನ್ನು ಹೊಗಳುವ ಸಾಕಷ್ಟು ಕಾಂಮೆಂಟ್​ಗಳು ಬಂದಿವೆ.

View this post on Instagram

A post shared by Sannah Arora (@sannaharora)

Published On - 10:29 am, Mon, 18 July 22

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ