Ganesh Utsav: ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ

|

Updated on: Sep 06, 2024 | 9:28 PM

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಬಾರಿಯ ವಿಶೇಷವಾದ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ರುದ್ರಾಕ್ಷಿ ಮಣಿಗಳಿಂದ ನಿರ್ಮಿಸಲಾದ ಬೃಹತ್ ಉಗ್ರನರಸಿಂಹದ ಅವತಾರದ ಈ ಗಣೇಶ ವಿಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಣೇಶನ ವಿಗ್ರಹವನ್ನು ಶನಿವಾರ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ದೇಶಾದ್ಯಂತ ದೆಹಲಿಯಿಂದ ಗಲ್ಲಿಯವರೆಗೆ ಗಣಪತಿಯನ್ನು ಪ್ರತಿಷ್ಠಾಪಿಸಲು ಮಂಟಪಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತಿದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಎಮ್ಮಿಗನೂರಿನಲ್ಲಿ ಈ ಬಾರಿಯ ಗಣಪತಿ ಉಗ್ರ ನರಸಿಂಹನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾನೆ. ಕೊಂಡವೀಟಿ ಪರಿಸರದಲ್ಲಿ ಶ್ರೀ ಬಾಲವಿನಾಯಕ ಯುವಕ ಮಂಡಳಿಯ ಆಶ್ರಯದಲ್ಲಿ ಕಳೆದ 33 ವರ್ಷಗಳಿಂದ ವಿನಾಯಕ ಚೌತಿ ಉತ್ಸವ ನಡೆಯುತ್ತಿದೆ. ಪ್ರತಿವರ್ಷವೂ ಪರಿಸರ ಸ್ನೇಹಿಯಾಗಿ ಇಲ್ಲಿ ಗಣೇಶ ಉತ್ಸವ ಆಚರಿಸಲಾಗುತ್ತದೆ. ಮಣ್ಣಿನ ವಿಗ್ರಹಗಳನ್ನೇ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷವೂ ಶ್ರೀಶೈಲಂ, ಅರುಣಾಚಲಂ, ಕಾಶಿಯಿಂದ 70 ಕೆಜಿ ರುದ್ರಾಕ್ಷಗಳನ್ನು ಸಂಗ್ರಹಿಸಿ ಸುಮಾರು 41 ದಿನಗಳ ಕಾಲ ಶ್ರಮ ವಹಿಸಿ 20 ಅಡಿ ಎತ್ತರದ ಶ್ರೀ ಉಗ್ರನರಸಿಂಹ ಸ್ವಾಮಿಯ ಅವತಾರವನ್ನು ನಿರ್ಮಿಸಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:27 pm, Fri, 6 September 24

Follow us on