AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದಕ್ಕೆ ಅಸಮಾಧಾನವನ್ನು ಸಂಸದ ರಮೇಶ್​​​​ ಜಿಗಜಿಣಗಿ ಬೇರೆ ರೀತಿ ಹೊರಹಾಕಿದರು!

ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದಕ್ಕೆ ಅಸಮಾಧಾನವನ್ನು ಸಂಸದ ರಮೇಶ್​​​​ ಜಿಗಜಿಣಗಿ ಬೇರೆ ರೀತಿ ಹೊರಹಾಕಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2023 | 6:27 PM

ವಿಜಯೇಂದ್ರರನ್ನು ಅಯ್ಕೆ ಮಾಡಿದ್ದಕ್ಕೆ ತನಗೆ ಹೊಟ್ಟೆಯುರಿ ಏನೂ ಇಲ್ಲ ಎಂದು ಹೇಳುವ ಅವರು ದಲಿತರಿಗೆ ಆಗತ್ತಿರುವ ಅನ್ಯಾಯದ ಬಗ್ಗೆ ಹೇಳುತ್ತಾರೆ. ಕಳೆದ 75 ವರ್ಷಗಳಿಂದ ದಲಿತರು ಗೌಡರು, ಸವರ್ಣೀಯರ ಪರ ಕೈ ಎತ್ತುತ್ತಲೇ ಬಂದಿದ್ದಾರೆ, ಇದು ಕೇವಲ ವಿಧಾನ ಸಭೆಗೆ ಮಾತ್ರ ಸೀಮಿತವಾಗಿರದೆ ಈಗ ಸಂಸತ್ತಿಗೂ ವ್ಯಾಪಿಸಿದೆ, ದಲಿತರನ್ನು ಕೇಳೋರು ಯಾರೂ ಇಲ್ಲ ಅಂತ ಅವರು ಹೇಳುತ್ತಾರೆ

ವಿಜಯಪುರ: ಸಂಸದ ರಮೇಶ್ ಜಿಗಜಿಣಗಿ (MP Ramesh Jigajinagi) ಮಾಧ್ಯಮಗಳೊಂದಿಗೆ ಮಾತಾಡೋದು ಅಪರೂಪಕ್ಕೊಮ್ಮೆ. ಆದರೆ ಇವತ್ತು ತಮ್ಮ ನೋವು, ಹತಾಶೆ ಮತ್ತು ದಶಕಗಳಿಂದ ಮಡುಗಟ್ಟಿರಬಹುದಾದ ಯಾತನೆ ಮತ್ತು ಬೇಗುದಿಯನ್ನು ಹೊರಹಾಕಲೆಂದೇ ಪತ್ರಕರ್ತರೊಂದಿಗೆ ಮಾತಾಡಿದರು ಅನ್ನೋದು ಅವರ ಮಾತುಗಳಿಂದ ಗೊತ್ತಾಗುತ್ತದೆ. ಬಿವೈ ವಿಜಯೇಂದ್ರರನ್ನು (BY Vijayendra) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿದ್ದು ಜಿಗಜಿಣಗಿ ಅವರಲ್ಲಿ ತೀವ್ರ ಬೇಸರ ಮೂಡಿಸಿದೆ. ಪಕ್ಷದ ವರಿಷ್ಠರು ಬಹಳ ಯೋಚನೆ ಮಾಡಿಯೇ ಯಡಿಯೂರಪ್ಪನವರ (BS Yediyurappa) ಮಗನನ್ನು ಪಕ್ಷದ ಅಧ್ಯಕ್ಷ ಮಾಡಿರುತ್ತಾರೆ. ವಿಜಯೇಂದ್ರರನ್ನು ಅಯ್ಕೆ ಮಾಡಿದ್ದಕ್ಕೆ ತನಗೆ ಹೊಟ್ಟೆಯುರಿ ಏನೂ ಇಲ್ಲ ಎಂದು ಹೇಳುವ ಅವರು ದಲಿತರಿಗೆ ಆಗತ್ತಿರುವ ಅನ್ಯಾಯದ ಬಗ್ಗೆ ಹೇಳುತ್ತಾರೆ. ಕಳೆದ 75 ವರ್ಷಗಳಿಂದ ದಲಿತರು ಗೌಡರು, ಸವರ್ಣೀಯರ ಪರ ಕೈ ಎತ್ತುತ್ತಲೇ ಬಂದಿದ್ದಾರೆ, ಇದು ಕೇವಲ ವಿಧಾನ ಸಭೆಗೆ ಮಾತ್ರ ಸೀಮಿತವಾಗಿರದೆ ಈಗ ಸಂಸತ್ತಿಗೂ ವ್ಯಾಪಿಸಿದೆ, ದಲಿತರನ್ನು ಕೇಳೋರು ಯಾರೂ ಇಲ್ಲ ಅಂತ ಅವರು ಹೇಳುತ್ತಾರೆ. ಅವರ ಮಾತಿನ ತಾತ್ಪರ್ಯ ಸ್ಪಷ್ಟವಾಗಿದೆ-ತಮ್ಮನ್ನಲ್ಲದಿದ್ದರೂ ಬೇರೆ ಯಾವುದೇ ದಲಿತನೊಬ್ಬನನ್ನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಪರಿಗಣಿಸಬೇಕಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ