Muharram: ಮೊಹರಂ ವೇಳೆ ಅಗ್ನಿಕುಂಡದಲ್ಲಿ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೀರಲಕೊಪ್ಪ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಹಿಂದೂ ಯುವಕನೋರ್ವ ಅಗ್ನಿಕುಂಡಕ್ಕೆ ಪ್ರವೇಶ ಮಾಡಿ ಕಂಬಳಿ ಹಾಸಿ ದೇವರ ಮುಂದೆ ಮೂರು ಬಾರಿ ಮಂಡಿಯೂರಿ ಶಿರ ಬಾಗಿ ನಮಸ್ಕರಿಸಿದ್ದಾರೆ. ಸದ್ಯ ಯುವಕನ ಈ ವಿಡಿಯೋ ವೈರಲ್ ಆಗುತ್ತಿದೆ.
ಬಾಗಲಕೋಟೆ, ಜುಲೈ.18: ಮುಸ್ಲಿಮರ ಹೊಸ ವರ್ಷ ಹಾಘೂ ಪವಿತ್ರ ಹಬ್ಬವಾಗಿರುವ ಮೊಹರಂ (Muharram) ಭಾವೈಕ್ಯತೆಯ ಸಂಕೇತ. ಈ ಹಬ್ಬವನ್ನು ಜಾತಿ, ಧರ್ಮ ಮರೆತು ಎಲ್ಲಾ ಧರ್ಮದವರು ಒಂದಾಗಿ ಆಚರಿಸುತ್ತಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚೀರಲಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ಮೊಹರಂ ಆಚರಿಸಲಾಗಿದೆ. ಈ ವೇಳೆ ಮೊಹರಂ ಅಗ್ನಿಕುಂಡದಲ್ಲೇ ಹಿಂದೂ ಯುವಕನೋರ್ವ ನಮಾಜ್ ಮಾಡಿದಂತೆ ದೇವರಲ್ಲಿ ಪ್ರಾರ್ಥಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೊಹರಂ ಹಬ್ಬದ ಹಿನ್ನೆಲೆ ಆಲೆ ದೇವರ ಮೆರವಣಿವೆ ವೇಳೆ ಈ ಘಟನೆ ನಡೆದಿದೆ. ಹಸೇನ್ ಹುಸೇನ್ ಮೌಲಾ ದರ್ಗಾದ ಎದುರು ಅಗ್ನಿಕುಂಡ ಹಾಕಲಾಗಿತ್ತು. ಫಕ್ಕೀರಪ್ಪ ಕುರಿ ಎಂಬ ಹಿಂದೂ ಯುವಕ ಅಗ್ನಿಕುಂಡ ಪ್ರವೇಶಿಸಿ ಕಂಬಳಿ ಹಾಸಿ ಮೂರು ಬಾರಿ ಮಂಡಿಯೂರಿ ಶಿರ ಬಾಗಿ ದೇವರನ್ನು ನಮಸ್ಕರಿಸಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

