AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದಲ್ಲೊಂದು ವರದಕ್ಷಿಣೆ ಪ್ರಕರಣ, ಎರಡು ವರ್ಷಗಳ ಹಿಂದೆ ಮದುವೆಯಾದ ಮಹಿಳೆಗೆ ಗಂಡನ ಕುಟುಂಬದವರಿಂದ ಕಿರುಕುಳ

ಚಿತ್ರದುರ್ಗದಲ್ಲೊಂದು ವರದಕ್ಷಿಣೆ ಪ್ರಕರಣ, ಎರಡು ವರ್ಷಗಳ ಹಿಂದೆ ಮದುವೆಯಾದ ಮಹಿಳೆಗೆ ಗಂಡನ ಕುಟುಂಬದವರಿಂದ ಕಿರುಕುಳ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 19, 2024 | 11:27 AM

Share

ವರದಕ್ಷಿಣೆಯ ಕಿರುಕುಳ ಆರಂಭಿಸಿದ್ದು ಮತ್ತು ತನ್ನ ಗಂಡ ಹಾಗೂ ಅತ್ತೆ ಮಾವನ ತಲೆ ತುಂಬಿದ್ದು ತಿಪ್ಪೇಸ್ವಾಮಿ ಎಂದು ಯುವತಿ ಹೇಳುತ್ತಾರೆ. ಆಕೆ ಗರ್ಭವತಿಯಾದಾಗ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣು ಮಗು ಅಂತ ಗೊತ್ತಾಗಿ ಗರ್ಭಪಾತವನ್ನೂ ಗಂಡನ ಮನೆಯವರು ಮಾಡಿಸಿರುವರೆಂಬ ಗಂಭೀರ ಆರೋಪ ಅವರು ಮಾಡುತ್ತಾರೆ. ಸದ್ಯಕ್ಕೆ ಅವರು ಗಂಡನ ಮನೆ ಮುಂದೆ ಧರಣಿ ಕೂತು ನ್ಯಾಯ ಕೇಳುತ್ತಿದ್ದಾರೆ.

ಚಿತ್ರದುರ್ಗ: ವರದಕ್ಷಿಣೆ ಕಿರುಕುಳದ (dowry harassment) ಮತ್ತೊಂದು ಪ್ರಕರಣ ಇದು. ಕಿರುಕುಳಕ್ಕೊಳಗಾಗಿರುವೆನೆಂದು ಹೇಳುತ್ತಿರುವ ಈ ಯುವತಿಗೆ 2 ವರ್ಷಗಳ ಹಿಂದೆ ತಂದೆತಾಯಿಗಳು ಚಿತ್ರದುರ್ಗದ ಆದರ್ಶನಗರದಲ್ಲಿರುವ ವಿಕಾಸ್ (Vikas) ಎನ್ನುವವರೊಂದಿಗೆ ಕೇಳಿದನ್ನೆಲ್ಲ ಕೊಟ್ಟು ಮದುವೆ ಮಾಡಿದ್ದಾರೆ. ನಗರದಲ್ಲಿ ರೇಶ್ಮೆ ಸೀರೆಗಳ (silk saris) ಅಂಗಡಿ ಇಟ್ಟುಕೊಂಡಿರುವ ಗಂಡನ ಜೊತೆ ಮದುವೆಯಾದ ಮೊದಲ 6 ತಿಂಗಳವರೆಗೆ ಚೆನ್ನಾಗಿದ್ದೆ ಎಂದು ಹೇಳುವ ಅವರು ಅಲ್ಲಿಂದ ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿದರೆಂದು ಹೇಳುತ್ತಾರೆ. ಆಕೆಯ ಅತ್ತೆ-ಮಾವ, ಮಾವನ ಅಣ್ಣ ತಿಪ್ಪೇಸ್ವಾಮಿ ಎನ್ನುವ ವ್ಯಕ್ತಿ ಸೇರಿ ತನಗೆ ನಡುರಾತ್ರಿವರೆಗೆ ತೊಂದರೆ ಕೊಡುತ್ತಾರೆಂದು ಯುವತಿ ಹೇಳುತ್ತಾರೆ. ಅವರ ಅತ್ತೆಯ ಹೆಸರು ಆಶಾ ಮತ್ತು ಮಾವನ ಹೆಸರು ವಿಜಯಕುಮಾರ್ ಅಂತೆ. ವರದಕ್ಷಿಣೆಯ ಕಿರುಕುಳ ಆರಂಭಿಸಿದ್ದು ಮತ್ತು ತನ್ನ ಗಂಡ ಹಾಗೂ ಅತ್ತೆ ಮಾವನ ತಲೆ ತುಂಬಿದ್ದು ತಿಪ್ಪೇಸ್ವಾಮಿ ಎಂದು ಯುವತಿ ಹೇಳುತ್ತಾರೆ. ಆಕೆ ಗರ್ಭವತಿಯಾದಾಗ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣು ಮಗು ಅಂತ ಗೊತ್ತಾಗಿ ಗರ್ಭಪಾತವನ್ನೂ ಗಂಡನ ಮನೆಯವರು ಮಾಡಿಸಿರುವರೆಂಬ ಗಂಭೀರ ಆರೋಪ ಅವರು ಮಾಡುತ್ತಾರೆ. ಸದ್ಯಕ್ಕೆ ಅವರು ಗಂಡನ ಮನೆ ಮುಂದೆ ಧರಣಿ ಕೂತು ನ್ಯಾಯ ಕೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ದಾವಣಗೆರೆ: ಸೂಳೆಕೆರೆಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ ಆರೋಪ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.