ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಿಂದ ಉಪವಾಸ ಸತ್ಯಾಗ್ರಹ
ಸಂಶೋಧನಾ ಕೆಲಸಕ್ಕೆ ಅನೇಕ ರೀತಿಯ ತೊಂದರೆ ನೀಡ್ತಿದ್ದಾರೆಂದು ಆರೋಪಿಸಿ ವಿವಿಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿ ಕಿರುಕುಳ ಆರೋಪ ಮಾಡಿದ್ದಾರೆ.
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪಿ.ನಂದಪ್ಪ ಎಂಬುವವರು ವಿವಿಯ ಆಡಳಿತ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ವಿವಿಯ ಕೆಲವರು ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಂಶೋಧನಾ ಕೆಲಸಕ್ಕೆ ಅನೇಕ ರೀತಿಯ ತೊಂದರೆ ನೀಡ್ತಿದ್ದಾರೆಂದು ಆರೋಪಿಸಿ ವಿವಿಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿ ಕಿರುಕುಳ ಆರೋಪ ಮಾಡಿದ್ದಾರೆ.
Published on: Apr 14, 2023 07:56 AM