ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗವೊಂದರ ಕಪಿಚೇಷ್ಟೆ, ಭಕ್ತೆಯ ಫೋನ್ ಕಸಿದು ಮರಹತ್ತಿದ ಕಪಿರಾಯ!

ಫೋನ್ ಕೊಡು ಅಂತ ಕೇಳಿದಂತೆಲ್ಲ ಅದು ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಾ ಸತಾಯಿಸಿದೆ. ತನ್ನ ಸಮುದಾಯದ ಮತ್ತೊಬ್ಬ ಸದಸ್ಯನ ಬಳಿ ಹೋಗಿ ಬಾ ಒಂದು ಸೆಲ್ಫೀ ತಗೊಳ್ಳೋಣ ಅಂದಿರಲೂಬಹುದು! ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅರ್ಧಗಂಟೆ ಕಾಲ ಪೀಡಿಸಿ ಮಂಗ ಚೇಷ್ಟೆಗಳನ್ನೆಲ್ಲ ಮಾಡಿದ ಬಳಿಕ ಕಪಿರಾಯ, ಫೋನಿಂದ ತನಗೇನೂ ಉಪಯೋಗವಿಲ್ಲ ಅಂದುಕೊಂಡು ಅದನ್ನು ನೆಲಕ್ಕೆ ಬಿಸಾಡಿದನಂತೆ.

ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗವೊಂದರ ಕಪಿಚೇಷ್ಟೆ, ಭಕ್ತೆಯ ಫೋನ್ ಕಸಿದು ಮರಹತ್ತಿದ ಕಪಿರಾಯ!
|

Updated on:May 23, 2024 | 1:55 PM

ಮೈಸೂರು: ಇದನ್ನೇ ಕಪಿಚೇಷ್ಟೆ ಅನ್ನೋದು! ಕೋತಿಯೊಂದು (monkey) ಮಹಿಳಾ ಭಕ್ತರೊಬ್ಬರ (woman devotee) ಮೊಬೈಲ್ ಕಸಿದು ಮರವೇರಿದ ಘಟನೆ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದ (Chamundi hills) ತಪ್ಪಲಲ್ಲಿ ನಡೆದಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಮೆಟ್ಟಿಲುಗಳನ್ನು ಹತ್ತಿ ಹೋಗುವಾಗ ಅವರನ್ನು ನೆಗೆಯುತ್ತಾ ಅಪ್ರೋಚ್ ಮಾಡಿದ ಮಂಗಣ್ಣ ಕೈಲಿದ್ದ ಪರ್ಸನ್ನು ಕಿತ್ತುಕೊಂಡು ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರುವ ಮರಹತ್ತಿದೆ. ಅದೇ ಪರ್ಸಲ್ಲಿ ಅವರು ಪೋನಿಟ್ಟಿದ್ದರು. ಆ ಭಕ್ತೆ ಮತ್ತು ಬೇರೆ ಒಂದಷ್ಟು ಜನ ಮರದ ಕೆಳಗಿಂದ ಪ್ಲೀಸ್ ಮೊಬೈಲ್ ಕೊಡಪ್ಪಾ ಅಂತ ಅನುನಯದ ಧ್ವನಿಯಲ್ಲಿ ಮನವಿ ಮಾಡಿದರೂ, ಕೋತಿ ಇವರ ಕಡೆ ನೋಡಿದೆಯೇ ಹೊರತು ಫೋನ್ ಮಾತ್ರ ಕೆಳಗೆ ಬಿಸಾಡಿಲ. ಇಲ್ಲಿಗೆ ಬರೋರೆಲ್ಲ ಫೋನನ್ನೇ ತದೇಕಚಿತ್ತವಾಗಿ ನೋಡಿರುತ್ತಾರೆ, ಅಂಥದ್ದೇನಿರಬಹುದು ಇದರಲ್ಲಿ ಅಂತ ಕೋತಿಗೂ ಕುತೂಹಲ ಉಂಟಾಗಿರಬಹುದು. ಫೋನ್ ಕೊಡು ಅಂತ ಕೇಳಿದಂತೆಲ್ಲ ಅದು ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಾ ಸತಾಯಿಸಿದೆ. ತನ್ನ ಸಮುದಾಯದ ಮತ್ತೊಬ್ಬ ಸದಸ್ಯನ ಬಳಿ ಹೋಗಿ ಬಾ ಒಂದು ಸೆಲ್ಫೀ ತಗೊಳ್ಳೋಣ ಅಂದಿರಲೂಬಹುದು! ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅರ್ಧಗಂಟೆ ಕಾಲ ಪೀಡಿಸಿ ಮಂಗ ಚೇಷ್ಟೆಗಳನ್ನೆಲ್ಲ ಮಾಡಿದ ಬಳಿಕ ಕಪಿರಾಯ, ಫೋನಿಂದ ತನಗೇನೂ ಉಪಯೋಗವಿಲ್ಲ ಅಂದುಕೊಂಡು ಅದನ್ನು ನೆಲಕ್ಕೆ ಬಿಸಾಡಿದನಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾಮುಂಡೇಶ್ವರಿ ತಪ್ಪಲಿನಲ್ಲಿ ಮೃತ ಕೋತಿ ಮರಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ

Published On - 1:22 pm, Thu, 23 May 24

Follow us
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ