ಪೌರ ಕಾರ್ಮಿಕರ ದುಮ್ಮಾನಗಳನ್ನು ಆಲಿಸುವಾಗ ಇಕ್ಕಟ್ಟಿನ ಸ್ಥಿತಿ ಎದುರಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಪೌರ ಕಾರ್ಮಿಕರು ನಡೆಸುವ ಸಭೆಗೆ ಹಾಜರಾಗುವಂತೆ ಅವರನ್ನು ವಿನಂತಿಸಿಕೊಂಡಾಗ ದಿನಾಂಕವನ್ನು ಆದಷ್ಟು ಬೇಗ ತಿಳಿಸಿದರೆ ಭಾಗವಹಿಸುವುದಾಗಿ ಹೇಳಿದರು. ಈ ಬಾರಿ 11ರಂದು ಸಭೆ ಇಟ್ಟುಕೊಳ್ಳಲಾಗಿದೆ ಮತ್ತು ಮುಂದಿನ ಸಭೆಗಳನ್ನು ಅವರ ಗಮನಕ್ಕೆ ತಂದ ಬಳಿಕವೇ ದಿನಾಂಕ ನಿಗದಿಪಡಿಸುವುದಾಗಿ ಒಬ್ಬ ಹಿರಿಯರು (ಪ್ರಾಯಶಃ ಸಂಘಧ ಅಧ್ಯಕ್ಷರಿರಬೇಕು) ಹೇಳುತ್ತಾರೆ. ದಿನಾಂಕ ತಿಳಿಸಿದರೆ ಬರುವುದಾಗಿ ಶಿವಕುಮಾರ್ ಹೇಳಿದರು.
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ಕೆಲಸ ಮಾಡುವ ಪೌರ ಕಾರ್ಮಿಕರ (pourakarmikas) ದೂರು ದುಮ್ಮಾನಗಳನ್ನು ಆಲಿಸಿದರು. ಪೌರ ಕಾರ್ಮಿಕರ ಸಂಘದ ವತಿಯಿಂದ ಅವರಿಗೆ ಹಲವಾರು ಅರ್ಜಿಗಳನ್ನು ಅವರಿಗೆ ಸಲ್ಲಿಸಲಾಯಿತು. ಮನವಿ ಪತ್ರಗಳಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಶೀಲಿಸಿದ ಶಿವಕುಮಾರ್, ಗಮನಹರಿಸುವ ಭರವಸೆ ನೀಡಿದರು. ಪೌರ ಕಾರ್ಮಿಕರು ನಡೆಸುವ ಸಭೆಗೆ ಹಾಜರಾಗುವಂತೆ ಅವರನ್ನು ವಿನಂತಿಸಿಕೊಂಡಾಗ ದಿನಾಂಕವನ್ನು ಆದಷ್ಟು ಬೇಗ ತಿಳಿಸಿದರೆ ಭಾಗವಹಿಸುವುದಾಗಿ ಹೇಳಿದರು. ಈ ಬಾರಿ 11ರಂದು ಸಭೆ ಇಟ್ಟುಕೊಳ್ಳಲಾಗಿದೆ ಮತ್ತು ಮುಂದಿನ ಸಭೆಗಳನ್ನು ಅವರ ಗಮನಕ್ಕೆ ತಂದ ಬಳಿಕವೇ ದಿನಾಂಕ ನಿಗದಿಪಡಿಸುವುದಾಗಿ ಒಬ್ಬ ಹಿರಿಯರು (ಪ್ರಾಯಶಃ ಸಂಘಧ ಅಧ್ಯಕ್ಷರಿರಬೇಕು) ಹೇಳುತ್ತಾರೆ. ದಿನಾಂಕ ತಿಳಿಸಿದರೆ ಬರುವುದಾಗಿ ಶಿವಕುಮಾರ್ ಹೇಳಿದಾಗ, ಯಾವತ್ತೂ ಬಂದೇ ಇಲ್ವಲ್ಲ ಸರ್ ಅಂತ ಒಬ್ಬ ಕಾರ್ಮಿಕಳು ಹೇಳುತ್ತಾರೆ. ಮಹಿಳೆಯ ಕಡೆ ತಿರುಗಿ ಶಿವಕುಮಾರ್ ಆಶ್ವಾಸನೆ ನೀಡುವಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅವರು ಬಂದೇ ಬರ್ತಾರೆ, ಅವರು ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಅಂತ ಬಡಬಡಿಸುತ್ತಾನೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

