ಮೋಹರಂ: ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಕಿ ಕುಳಿತ ಯುವಕ, ವಿಡಿಯೋ ನೋಡಿ

ಎಲ್ಲೆಡೆ ಮೊಹರಂ ಹಬ್ಬ ಸಂಭ್ರಮ ಮನೆ ಮಾಡಿದೆ. ಕೆಲವೆಡೆ ಹಿಂದೂ ಮುಸ್ಲಿಂ ಸೇರಿಕೊಂಡೇ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಹಬ್ಬ ಆಚರಣೆ ವೇಳೆ ವಿವಿಧ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾರೆ. ಅಲ್ಲದೇ ಕೆಲವರು ಹರಕೆ ಕಟ್ಟಿಕೊಂಡು ಕೆಂಡ ಹಾಯುತ್ತಾರೆ. ಅದರಂತೆ ವಿಜಯಪುರದಲ್ಲಿ ಯುವಕನೋರ್ವ ನಿಗಿ ನಿಗಿ ಕೆಂಡದಲ್ಲಿ ಕಂಬಳಿ ಹಾಸಿಕೊಂಡು ಪ್ರಾರ್ಥಿಸಿ ಹರಕೆ ತೀರಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮೋಹರಂ: ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಕಿ ಕುಳಿತ ಯುವಕ, ವಿಡಿಯೋ ನೋಡಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 15, 2024 | 5:10 PM

ವಿಜಯಪುರ (,ಜುಲೈ 15): ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬವೆನ್ನಬಹುದು. ಈ ದಿನದಂದು ಇಮಾಮ್ ಹುಸೇನ್ ರ ತ್ಯಾಗವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ತಮ್ಮ ಹಿರಿಯರ ತ್ಯಾಗ-ಹೋರಾಟಗಳನ್ನು ನೆನೆಯುವ ಉದ್ದೇಶದಿಂದ ಈ ಹಬ್ಬವು ಮಹತ್ವದ್ದಾಗಿದೆ. ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದ್ದು, ಈ ಹಬ್ಬದಲ್ಲಿ ಹಲವರು ಹಲವು ರೀತಿಯಲ್ಲಿ ಹರಿಕೆ ತೀರಿಸುತ್ತಾರೆ. ಅದರಂತೆ ವಿಜಯಪುರ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ಯುವಕನೋರ್ವ ನಿಗಿ ನಿಗಿ ಕೆಂಡದಲ್ಲಿ ಕಂಬಳಿ ಹಾಸಿಕೊಂಡು ಪ್ರಾರ್ಥಿಸಿದ್ದಾನೆ.

ಹೌದು…ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ಮೊಹರಮ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕೆಂಡ ಹಾಯುವ ಹರಕೆ ಕಟ್ಟಿರುತ್ತಾರೆ. ಅದರಲ್ಲೂ ಈ ಗ್ರಾಮದ ಯುವಕ ಯಲ್ಲಪ್ಪ, ಮೊಹರಂ ಹಬ್ಬದ ಗಂಧ ಅಚರಣೆಗಾಗಿ ಹಾಕಿದ್ದ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಕಿ ನಮಸ್ಕಾರ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾನೆ ಕೆಂಡದ ಮೇಲೆ ಕಂಬಳಿ ಹಾಕಿ ನಮಸ್ಕಾರ ಮಾಡಿ ಮೇಲೆದ್ದರೂ ಸಹ ಯಲ್ಲಪ್ಪನಿಗೆ ಯಾವುದೇ ಗಾಯಗಳಾಗಿಲ್ಲ, ಇದನ್ನು ಗ್ರಾಮಸ್ಥರು ಅಲಾಯಿ ದೇವರ ಪವಾಡ ಎಂದು ನಂಬಿದ್ದು, ಪ್ರತಿ ವರ್ಷ ಇಂಥ ವಿಚಿತ್ರ ಹರಕೆ ತೀರಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ಮೈಸೂರಿಗೆ ಆಗಮಿಸಿದ ಗಜಪಡೆಯ ಮೊದಲ ಬ್ಯಾಚ್, ಗಮನ ಸೆಳೆಯುತ್ತಿರುವ ಅಭಿಮನ್ಯು
ಮೈಸೂರಿಗೆ ಆಗಮಿಸಿದ ಗಜಪಡೆಯ ಮೊದಲ ಬ್ಯಾಚ್, ಗಮನ ಸೆಳೆಯುತ್ತಿರುವ ಅಭಿಮನ್ಯು
ಕೊಪ್ಪಳ: ಯರಡೋಣ ಗ್ರಾಮದಲ್ಲಿರುವಂಥ ಗೂಳಿಯನ್ನು ಮೊದಲೆಲ್ಲಾದರೂ ನೋಡಿದ್ದೀರಾ?
ಕೊಪ್ಪಳ: ಯರಡೋಣ ಗ್ರಾಮದಲ್ಲಿರುವಂಥ ಗೂಳಿಯನ್ನು ಮೊದಲೆಲ್ಲಾದರೂ ನೋಡಿದ್ದೀರಾ?
ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವದಲ್ಲಿ ಯದುವೀರ್ ಭಾಗಿ
ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವದಲ್ಲಿ ಯದುವೀರ್ ಭಾಗಿ
ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?
ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?
ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ಶ್ರಾವಣ ಮಾಸದ 3ನೇ ಶುಭ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ 3ನೇ ಶುಭ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಸಿದ್ದರಾಮಯ್ಯ ಜನಪ್ರಿಯ ಮತ್ತು ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ
ಸಿದ್ದರಾಮಯ್ಯ ಜನಪ್ರಿಯ ಮತ್ತು ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ
ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ
ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ
ಕುಮಾರಸ್ವಾಮಿಗೆ ಹೆದರಿಕೆ; ಹಾಗಾಗೇ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ: ಸಿಎಂ
ಕುಮಾರಸ್ವಾಮಿಗೆ ಹೆದರಿಕೆ; ಹಾಗಾಗೇ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ: ಸಿಎಂ
ಗುಜರಾತಿ ನೃತ್ಯದ ಮೂಲಕ ಮೋದಿಗೆ ಸರ್​ಪ್ರೈಸ್ ನೀಡಿದ ಪೋಲೆಂಡ್ ಕಲಾವಿದರು
ಗುಜರಾತಿ ನೃತ್ಯದ ಮೂಲಕ ಮೋದಿಗೆ ಸರ್​ಪ್ರೈಸ್ ನೀಡಿದ ಪೋಲೆಂಡ್ ಕಲಾವಿದರು