Dasara Mahotsav 2024: ಅರಮನೆ ಆವರಣದಲ್ಲಿ ರಾತ್ರಿ ವಿಶ್ರಮಿಸಿದ ನಂತರ ಮಾರ್ನಿಂಗ್ ವಾಕ್​ಗೆ ಹೊರಟ ಆನೆಗಳು!

ದೈತ್ಯಜೀವಿಗಳಾಗಿರುವ ಆನೆಗಳ ನಡಿಗೆ ಮನಸೂರೆಗೊಳ್ಳುತ್ತದೆ. ತಮ್ಮ ಭಾರೀ ದೇಹವನ್ನು ಕಂಬದಂಥ ಕಾಲುಗಳ ಮೇಲೆ ಹೊತ್ತು ಸೊಂಡಿಲಿನ ಮುಂಭಾಗವನ್ನು ನೆಲಕ್ಕೆ ತಾಕದಂತೆ ಕೊಂಚ ಮುದುಡಿಕೊಂಡು ಅವು ಕಾಡಿನಲ್ಲಾಗಲೀ ಅಥವಾ ನಾಡಿನಲ್ಲಾಗಲೀ ನಡೆದುಹೋಗುವ ದೃಶ್ಯ ಗಮನ ಸೆಳೆಯುತ್ತದೆ ಮತ್ತು ನಿಂತು ವೀಕ್ಷಿಸುವಂತೆ ಮಾಡುತ್ತದೆ.

Dasara Mahotsav 2024: ಅರಮನೆ ಆವರಣದಲ್ಲಿ ರಾತ್ರಿ ವಿಶ್ರಮಿಸಿದ ನಂತರ ಮಾರ್ನಿಂಗ್ ವಾಕ್​ಗೆ ಹೊರಟ ಆನೆಗಳು!
|

Updated on: Aug 24, 2024 | 10:17 AM

ಮೈಸೂರು: ದಸರಾ ಮಹೋತ್ಸವ 2024ರ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿ ಕಾಡಿನಿಂದ ಮೈಸೂರಿಗೆ ಬಂದು ನಿನ್ನೆ ಅರಮನೆ ಆವರಣ ಸೇರಿರುವ ಅಭಿಮನ್ಯು ನೇತೃತ್ವದ ಆನೆಗಳ ರಾಜಾತಿಥ್ಯ ಶುರುವಾಗಿದೆ. ನಿನ್ನೆ ಒಂಭತ್ತು ಮನೆಗಳನ್ನು ಅರಣ್ಯ ಭವನದ ಆವರಣದಿಂದ ಅರಮನೆ ಆವರಣಕ್ಕೆ ಮೆರವಣಿಗೆ ಮತ್ತು ವಾದ್ಯಮೇಳಗಳೊಂದಿಗೆ ಕರೆದೊಯ್ದ ದೃಶ್ಯಗಳನ್ನು ನಿಮಗೆ ತೋರಿಸಿದ್ದೇವೆ. ಅರಮನೆಯಲ್ಲಿ ಆನೆಗಳಿಗೆ ಸಿಕ್ಕಿದ್ದು ಅದ್ದೂರಿಯ ಸ್ವಾಗತ. ನಿನ್ನೆ ಅರಮನೆ ಆವರಣದಲ್ಲಿ ರಾಜಭಕ್ಷ್ಯಗಳನ್ನು ಸೇವಿಸಿ ಚೆನ್ನಾಗಿ ವಿಶ್ರಮಿಸಿಕೊಂಡ ನಂತರ ಇಂದು ಬೆಳಗ್ಗೆ ಗಜಪಡೆಯನ್ನು ಮಾರ್ನಿಂಗ್ ವಾಕ್ ಗೆ ಕರೆದೊಯ್ಯಲಾಯಿತು. ಫಾರ್ ಎ ಚೇಂಜ್ ಬೆಳಗಿನ ವಿಹಾರದ ಸಮಯದಲ್ಲಿ ಗಜಗಳ ಟೀಮನ್ನು ಅಭಿಮನ್ಯು ಬದಲು ಏಕಲವ್ಯ ಲೀಡ್ ಮಾಡುತ್ತಿದ್ದ. ಈಗಾಗಲೇ ತಿಳಿಸಿರುವಂತೆ ಏಕಲವ್ಯ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಕೆಲಸ ಅವನ ಹೆಗಲಿಗೆ ಹಾಕಲಿರುವಿದರಿಂದ ಈಗಿಂದಲೇ ಲೀಡ್ ಮಾಡುವ ತರಬೇತಿಯನ್ನು ಮಾವುತ ಮತ್ತು ಕಾವಾಡಿಗರು ಅರಂಭಿಸಿದಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಸರಾ ಮಹೋತ್ಸವ 2024; ಈ ಸಲ ಯುವ ದಸರಾ ಮತ್ತು ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ: ಹೆಚ್​ಸಿ ಮಹದೇವಪ್ಪ

Follow us
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ಜಿ.ಟಿ ದೇವೇಗೌಡ ಹೇಳಿಕೆಗೆ ಖಡಕ್ ರಿಯಾಕ್ಷನ್​ ಕೊಟ್ಟ ಹೆಚ್​ಡಿಕೆ
ಜಿ.ಟಿ ದೇವೇಗೌಡ ಹೇಳಿಕೆಗೆ ಖಡಕ್ ರಿಯಾಕ್ಷನ್​ ಕೊಟ್ಟ ಹೆಚ್​ಡಿಕೆ
ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ
ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ
ಜಿಟಿ ದೇವೇಗೌಡ ಸಿಎಂ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!
ಜಿಟಿ ದೇವೇಗೌಡ ಸಿಎಂ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!