AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್​ಐ ಸದಸ್ಯರೆಲ್ಲ ಎಸ್​ಡಿಪಿಐ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಪಿಎಫ್​ಐ ಸದಸ್ಯರೆಲ್ಲ ಎಸ್​ಡಿಪಿಐ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 05, 2025 | 5:34 PM

ಸಿದ್ದರಾಮಯ್ಯ ಸರ್ಕಾರ ಅಪರಾಧ ನಡೆಸುವವರ ವಿಷಯದಲ್ಲಿ ನಿರ್ಲಿಪ್ತ ಧೋರಣೆ ಮತ್ತು ಉದಾಸೀನ ಮನೋಭಾವ ತಳೆದಿದೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ಆಚರಿಸುತ್ತ ನಿಜ ಅರ್ಥದಲ್ಲಿ ಟಿಪ್ಪು ಅಗಿಬಿಟ್ಟಿದ್ದಾರೆ, ಅವರು ಕೊಲೆಗಡುಕರ ಮೇಲಿದ್ದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಂಡ ಕಾರಣ ಅವರೆಲ್ಲ ಮತ್ತೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕರಂದ್ಲಾಜೆ ಹೇಳಿದರು.

ಬೆಂಗಳೂರು, ಮೇ 5: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಅಪರಾಧೀ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಕ್ಕಿರುವುದರಿಂದ 23 ಹಿಂದೂ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತಾಡಿದ ಅವರು, ರುದ್ರೇಶ್ ಮತ್ತು ಪ್ರವೀಣ್ ನೆಟ್ಟಾರು (Rudresh and Praveen Nettaru) ಕೊಲೆ ಪ್ರಕರಣಗಳ ತನಿಖೆ ಎನ್​​ಎಐ ನಡೆಸಬೇಕೆಂದು ಆಗ್ರಹಿಸಿದ್ದೆವು, ಸಂಸ್ಥೆಯು ತನಿಖೆ ಪೂರ್ಣಗೊಳಿಸಿದಾಗ ಸಿಕ್ಕಿ ಬಿದ್ದವರು ಯಾರು ಎಂದು ಶೋಭಾ ಪ್ರಶ್ನಿಸಿದರು. ಬೇರೆ ಬೇರೆ ದೇಶಗಳಲ್ಲಿ ತರಬೇತಿ ಹೊಂದಿದವರು, ಬೇರೆ ದೇಶಗಳ ಜೊತೆ ಸಂಪರ್ಕ ಇಟ್ಟುಕೊಂಡು ಅವರಿಂದ ಧನಸಹಾಯ ಪಡೆದವರು ಹಿಂದೂಗಳ ಕೊಲೆ ಪ್ರಕರಣಗಳಲ್ಲಿ ಸಿಕ್ಹಾಕಿಕೊಂಡರು, ಅಪರಾಧಿ ಕೃತ್ಯಗಳಲ್ಲಿ ಪಿಎಫ್​ಐ ಕೈವಾಡ ಇರೋದು ಸಾಕ್ಷಿ ಸಮೇತ ಬಯಲಾದಾಗ ಕೇಂಂದ್ರ ಸರ್ಕಾರ ಅದನ್ನು ಬ್ಯಾನ್ ಮಾಡಿತು, ಅದರೆ ಅದರ ಸದಸ್ಯರು ಈಗ ಎಸ್ ಡಿಪಿಐ ಸೇರಿ ಅದೇ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಇದನ್ನೂ ಓದಿ:  ತಾಕತ್ತು, ದಮ್ಮು ಪದಗಳನ್ನು ಬಳಸುವ ಶೋಭಾ ಕರಂದ್ಲಾಜೆ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ: ಭೈರತಿ ಸುರೇಶ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ