Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್ ಆಸ್ ಜಲಾಶಯದಿಂದ ವಿಸಿ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಮೇಲೆ ನೀರು ಹರಿಸುವ ಆದೇಶ ಹೊರಡಿಸಿದ ಕೃಷಿ ಇಲಾಖೆ

ಕೆಆರ್ ಆಸ್ ಜಲಾಶಯದಿಂದ ವಿಸಿ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಮೇಲೆ ನೀರು ಹರಿಸುವ ಆದೇಶ ಹೊರಡಿಸಿದ ಕೃಷಿ ಇಲಾಖೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 10, 2023 | 12:40 PM

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಕೆಆರ್ ಎಸ್ ಜಲಾಶಯಯದಲ್ಲಿ ನೀರಿನ ಒಳಹರಿವು ಆಧರಿಸಿ ನೀರನ್ನು ಹರಿಸಲಾಗುವುದು.

ಮಂಡ್ಯ: ಮುಂಗಾರು ಬೆಳೆಗಳಿಗಾಗಿ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಜಲಾಶಯದಿಂದ (KRS dam) ವಿಸಿ ನಾಲೆ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಆಧಾರದಲ್ಲಿ ನೀರು ಹರಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಅವರ ನೇತೃತ್ವದಲ್ಲಿ ನಡೆದ ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ (KRS Irrigation Advisory Committee) ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಕೆಆರ್ ಎಸ್ ಜಲಾಶಯಯದಲ್ಲಿ ನೀರಿನ ಒಳಹರಿವು ಆಧರಿಸಿ ನೀರನ್ನು ಹರಿಸಲಾಗುವುದು. ಆದರೆ ನೀರನ್ನು ದಿನಂಪ್ರತಿ ಹರಿಬಿಡಲಾಗದು ಮತ್ತು ದೀರ್ಘಾವಧಿಯ ಬೆಳೆಗಳನ್ನು ಬೆಳೆಯದಂತೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಿದ್ದಾರೆ. ಆಗಸ್ಟ್ 2023 ರಿಂದ ಡಿಸೆಂಬರ್ 2023ರವರೆಗೆ ಪ್ರತಿ ತಿಂಗಳು ನಾಲೆಗಳಿಗೆ 15 ದಿನ ದಿನ ಮಾತ್ರ ನೀರು ಹರಿಸುವ ಮತ್ತು ಉಳಿದ 15 ದಿನ ಸ್ಥಗಿತಗೊಳಿಸುವ ನಿಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ