ಒಡಿಶಾದ ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ

Updated on: Jan 10, 2026 | 4:42 PM

ಭುವನೇಶ್ವರದಿಂದ ರೂರ್ಕೆಲಾಗೆ ಹಾರುತ್ತಿದ್ದ 9 ಆಸನಗಳ ವಿಮಾನವು ಟೇಕ್ ಆಫ್ ಆದ ಸುಮಾರು 10 ಕಿಲೋಮೀಟರ್ ದೂರದಲ್ಲಿ ತೊಂದರೆ ಅನುಭವಿಸಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವರದಿಯಾಗಿದೆ. ಈ ವಿಮಾನದಲ್ಲಿ 6 ಜನರಿದ್ದರು. 4 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಕ್ಯಾಪ್ಟನ್ ನವೀನ್ ಕಡಂಗ ಮತ್ತು ಕ್ಯಾಪ್ಟನ್ ತರುಣ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ.

ನವದೆಹಲಿ, ಜನವರಿ 10: ಒಡಿಶಾದ (Odisha) ರೂರ್ಕೆಲಾ ವಾಯುನೆಲೆಯಿಂದ 9 ಕಿಲೋಮೀಟರ್ ದೂರದಲ್ಲಿ ಸಣ್ಣ ವಿಮಾನವೊಂದರಲ್ಲಿ ಹಾರಾಟದ ವೇಳೆ ತಾಂತ್ರಿಕ ದೋಷ ಕಂಡುಬಂದ ನಂತರ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ ಪೈಲಟ್ ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ. ಭುವನೇಶ್ವರದಿಂದ ರೂರ್ಕೆಲಾಗೆ ಹಾರುತ್ತಿದ್ದ 9 ಆಸನಗಳ ವಿಮಾನ ಇದಾಗಿತ್ತು. ಈ ವಿಮಾನದಲ್ಲಿ 4 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅವರನ್ನು ಕ್ಯಾಪ್ಟನ್ ನವೀನ್ ಕಡಂಗ ಮತ್ತು ಕ್ಯಾಪ್ಟನ್ ತರುಣ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಅವರೆಲ್ಲರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us